“ಒನ್ ನೇಶನ್ ಒನ್ ರೇಶನ್ ಕಾರ್ಡ್’ ಆ್ಯಪ್ನಲ್ಲಿ ಕನ್ನಡ
ಎಲ್ಲಿಯೇ ರೇಶನ್ ಪಡೆದರೂ ಪಡಿತರ ಚೀಟಿ ರದ್ದಾಗದು
Team Udayavani, Apr 18, 2021, 6:30 AM IST
ದಾವಣಗೆರೆ: ವಲಸಿಗರಿಗೆ ದೇಶದ ಯಾವುದೇ ಭಾಗದಲ್ಲೂ ಸುಲಭವಾಗಿ ಪಡಿತರ ಆಹಾರಧಾನ್ಯ ಸಿಗುವಂತೆ ಮಾಡಲು ಕೇಂದ್ರ ಸರಕಾರ ಈಗಾಗಲೇ ಜಾರಿಗೆ ತಂದಿರುವ “ಒನ್ ನೇಶನ್ ಒನ್ ರೇಶನ್ ಕಾರ್ಡ್’ ಆ್ಯಪ್ನಲ್ಲಿ ಕನ್ನಡ ಭಾಷೆಯನ್ನೂ ಅಳವಡಿಸಲಾಗಿದೆ. ಮೊದಲು ಇಂಗ್ಲಿಷ್ ಹಾಗೂ ಹಿಂದಿ ಮಾತ್ರ ಇತ್ತು.
ವ್ಯಕ್ತಿಯ ಭೌತಿಕ ಸ್ಥಳವನ್ನು ಲೆಕ್ಕಿಸದೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬರುವ ಎಲ್ಲ ಫಲಾನು
ಭವಿಗಳಿಗೆ ಆಹಾರ ಭದ್ರತೆ ಒದಗಿಸುವ ಏಕೈಕ ಗುರಿಯೊಂದಿಗೆ “ಒನ್ ನೇಶನ್ ಒನ್ ರೇಶನ್ ಕಾರ್ಡ್’ ಆ್ಯಪ್ ಅಭಿ ವೃದ್ಧಿಪಡಿಸಲಾಗಿದೆ. ಆದರೆ ಇದರ ಬಳಕೆಗೆ ಭಾಷೆ ಅಡ್ಡಿಯಾಗಿದ್ದು, ಈಗ ಕೇಂದ್ರ ಸರಕಾರ ಕನ್ನಡ, ತೆಲುಗು, ತಮಿಳು, ಮಲಯಾಳಂ, ಪಂಜಾಬಿ ಹಾಗೂ ಒರಿಯಾವನ್ನೂ ಸೇರಿಸಿದೆ.
ಕಾರ್ಡ್ ರದ್ದಾಗದು
ಕೇವಲ ಆಧಾರ್ ನಂಬರ್ ಸಹಾಯದಿಂದ ಈ ಆ್ಯಪ್ನಿಂದಲೇ ರೇಶನ್ ಕಾರ್ಡ್ ನಂಬರ್, ಪಡಿತರ ವ್ಯವಹಾರ, ಪಡಿತರ ಲಭ್ಯತೆ ಹಾಗೂ ಜಿಪಿಎಸ್ ಮೂಲಕ ಹತ್ತಿರದ ಪಡಿತರ ಅಂಗಡಿ ಮುಂತಾದ ಮಾಹಿತಿ ಲಭ್ಯವಾಗಲಿವೆ. ಕೆಲವರು ವಲಸೆ ಬಂದ ಸ್ಥಳದಲ್ಲಿ ಪಡಿತರ ಪಡೆದರೆ ಮೂಲ ಸ್ಥಳದ ಕಾರ್ಡ್ ರದ್ದಾಗಬಹುದು ಎಂಬ ಭೀತಿಯಿಂದ ಪಡಿತರ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಎಲ್ಲಿಯೇ ಪಡಿತರ ಪಡೆದರೂ ಕಾರ್ಡ್ ರದ್ದಾಗುವುದಿಲ್ಲ.
ವಲಸಿಗರಿಗೆ ಆಹಾರ ಭದ್ರತೆ ಒದಗಿಸುವ ಗುರಿಯೊಂದಿಗೆ “ಒನ್ ನೇಶನ್ ಒನ್ ರೇಶನ್ ಕಾರ್ಡ್’ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಇದರಲ್ಲಿ ಇತ್ತೀಚೆಗೆ ಕನ್ನಡವನ್ನೂ ಅಳವಡಿಸಲಾಗಿದೆ. ಇಂಗ್ಲಿಷ್, ಹಿಂದಿ ಓದಲು ಬಾರದ ಕನ್ನಡಿಗರಿಗೆ ಇದು ಹೆಚ್ಚು ಉಪಯುಕ್ತವಾಗಿದೆ.
– ನಾಗರಾಜ ಎಂ.ವಿ., ತಾಂತ್ರಿಕ ಸಹಾಯಕರು, ಆಹಾರ ಇಲಾಖೆ
– ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State government: ರಾಜ್ಯ ಸರಕಾರಕ್ಕೆ ಎನ್ಸಿಬಿ ನೋಟಿಸ್?
Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ