ಕತ್ತಿ ನಿಧನಕ್ಕೆ ಒಂದು ದಿನ ಮಾತ್ರ ಶೋಕಾಚರಣೆ: ಎಂ.ಬಿ.ಪಾಟೀಲ್ ಅಸಮಾಧಾನ
ಜನೋತ್ಸವಕ್ಕಿಂತ ಉಮೇಶ್ ಕತ್ತಿಯವರು ಬಹಳ ಮಹತ್ವ
Team Udayavani, Sep 7, 2022, 3:09 PM IST
ಬೆಂಗಳೂರು: ಸಚಿವ ಉಮೇಶ್ ಕತ್ತಿ ಅವರ ನಿಧನಕ್ಕೆ ಒಂದು ದಿನ ಮಾತ್ರ ಶೋಕಾಚರಣೆ ಮಾಡುವ ಸರ್ಕಾರದ ನಡೆಗೆ ಕಾಂಗ್ರೆಸ್ ನಾಯಕ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅಸಮಾಧಾನ ಹೊರ ಹಾಕಿದ್ದಾರೆ.
ಜನೋತ್ಸವಕ್ಕಿಂತ ಉಮೇಶ್ ಕತ್ತಿಯವರು ಬಹಳ ಮಹತ್ವ, ಶೋಕಾಚರಣೆ ಮಾಡುವ ವಿಚಾರದಲ್ಲಿಶಿಷ್ಟಾಚಾರ ಉಲ್ಲಂಘನೆಯಾಗಬಾರದು,ಹಾಗೊಂದು ವೇಳೆ ಉಲ್ಲಂಘನೆಯಾಗಿದ್ದರೇ ತಪ್ಪು. ಇಲ್ಲಿಯವರಿಗೆ ಎಲ್ಲರಿಗೂ ಕೊಟ್ಟ ಗೌರವ ಉಮೇಶ್ ಕತ್ತಿ ಅವರಿಗೂ ಕೊಡಬೇಕು. ಒಂದು ವೇಳೆ ಆ ರೀತಿಯಾಗಿದ್ದರೇ ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.
ಇಂತಹ ಘಟನೆಯಾದಾಗ ಹಿಂದಿನ ಪದ್ಧತಿಗಳೇ ಆಗಬೇಕು. ನಾನು ಇದರಲ್ಲಿ ರಾಜಕಾರಣ ಮಾತನಾಡುವುದಿಲ್ಲ. ತಪ್ಪಾಗಿದ್ದರೆ ಸರ್ಕಾರ ಸರಿಪಡಿಸಿಕೊಳ್ಳಬೇಕು ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
ದೊಡ್ಡ ಬಳ್ಳಾಪುರದಲ್ಲಿ ಸರಕಾರ ನಾಳೆ (ಸೆ. 08) ಬೃಹತ್ ಜನೋತ್ಸವ ಸಮಾವೇಶಕ್ಕೆ ಸಿದ್ಧತೆ ನಡೆಸಲಾಗಿದ್ದು, ಭಾನುವಾರಕ್ಕೆ ಮುಂದೂಡಿಕೆಯಾಗಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ