ದೇಸೀ ಭತ್ತ ತಳಿ ಪ್ರೋತ್ಸಾಹಧನ ಒಂದೇ ವರ್ಷಕ್ಕೆ ಸೀಮಿತ!

ಕರಾವಳಿ ಪ್ಯಾಕೇಜ್‌ ಜತೆ ಕೃಷಿ ಭಾಗ್ಯಕ್ಕೂ ಕತ್ತರಿ

Team Udayavani, Nov 8, 2020, 10:38 AM IST

ದೇಸೀ ಭತ್ತ ತಳಿ ಪ್ರೋತ್ಸಾಹಧನ ಒಂದೇ ವರ್ಷಕ್ಕೆ ಸೀಮಿತ!

ಮಂಗಳೂರು: ಕರಾವಳಿಯ ಭತ್ತ ಬೇಸಾಯ, ವಿಶೇಷವಾಗಿ ದೇಸೀ ಭತ್ತದ ತಳಿಗಳ ಬೇಸಾಯವನ್ನು ಉತ್ತೇಜಿಸುವುದಕ್ಕಾಗಿ ಕಳೆದ ವರ್ಷ ಘೋಷಿಸಲಾಗಿದ್ದ “ಕರಾವಳಿ ಪ್ಯಾಕೇಜ್‌’ ಒಂದೇ ವರ್ಷಕ್ಕೆ ಸೀಮಿತಗೊಂಡಿದೆ. ಇದರ ಜತೆಗೆ ಕೃಷಿಭಾಗ್ಯ, ಸಾವಯವ ಕೃಷಿ ಉತ್ತೇಜನ ಯೋಜನೆಗಳನ್ನು ಕೂಡ ಕೈಬಿಡಲಾಗಿದೆ.

ಕರಾವಳಿಯಲ್ಲಿ ಸ್ಥಳೀಯ ಭತ್ತದ ತಳಿಗಳ ಬೇಸಾಯವನ್ನು ಪ್ರೋತ್ಸಾಹಿಸಲು ಮತ್ತು ಯಾಂತ್ರೀಕೃತ ಕೃಷಿಯ ಉತ್ತೇಜನಕ್ಕಾಗಿ ಕಳೆದ ವರ್ಷ “ಕರಾವಳಿ ಪ್ಯಾಕೇಜ್‌’ನಡಿ 5 ಕೋ.ರೂ. ಮೀಸಲಿಡಲಾಗಿತ್ತು. ಉಭಯ ಜಿಲ್ಲೆಗಳ 3,791 ರೈತರು ಇದರ ಪ್ರಯೋಜನ ಪಡೆದಿದ್ದರು.

ದೇಸೀ ತಳಿಗೆ ಕೊಕ್‌
“ಕರಾವಳಿ ಪ್ಯಾಕೇಜ್‌’ನಡಿ ಯಾಂತ್ರೀಕೃತ ನಾಟಿ, ನೇರ ಬಿತ್ತನೆ ಮತ್ತು ಸ್ಥಳೀಯ(ದೇಸೀ) ತಳಿಗೆ ಎಕರೆಗೆ 3 ಸಾವಿರ ರೂ.ಗಳಂತೆ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಈ ಬಾರಿ ಕೇಂದ್ರದ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ನಡಿ ಯಾಂತ್ರೀಕೃತ ಬೇಸಾಯಕ್ಕೆ ಪ್ರೋತ್ಸಾಹಧನ ನೀಡಲಾಗುತ್ತದೆ. ಆದರೆ ಇದರಲ್ಲಿ ಸ್ಥಳೀಯ ಭತ್ತದ ತಳಿ ಪ್ರೋತ್ಸಾಹಧನ ಒಳಗೊಂಡಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪಾಣೆಮಂಗಳೂರು ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ ಅಪರಿಚಿತ ವ್ಯಕ್ತಿ

ಪ್ರತ್ಯೇಕವಾಗಿ ಗುರುತಿಸಿಲ್ಲ
ಕರಾವಳಿ ಪ್ಯಾಕೇಜ್‌ನಡಿ ಕಳೆದ ವರ್ಷ ಪ್ರೋತ್ಸಾಹಧನವನ್ನು ನೇರವಾಗಿ ಫ‌ಲಾನುಭವಿಗಳ ಖಾತೆಗೆ ಹಾಕಲಾಗಿತ್ತು. ಸ್ಥಳೀಯ ಭತ್ತ ತಳಿ ಉತ್ತೇಜನಕ್ಕೆ ಪ್ರೋತ್ಸಾಹಧನ ಇತ್ತಾದರೂ ಅದನ್ನು ಪ್ರತ್ಯೇಕವಾಗಿ ಗುರುತಿಸಿಲ್ಲ. ಎರಡೂ ಜಿಲ್ಲೆಗಳಲ್ಲಿ ಭದ್ರಾ, ಜಯ, ಜ್ಯೋತಿ, ರಾಶಿ ಇತ್ಯಾದಿ ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇವು ಸ್ಥಳೀಯವೇ. ಹಾಗಾಗಿ ಕಳೆದ ಬಾರಿ ಪ್ಯಾಕೇಜ್‌ನಡಿ ಪ್ರೋತ್ಸಾಹಧನ ನೀಡುವಾಗ ದೇಸಿ ತಳಿ ಬೆಳೆದವರನ್ನು ಪ್ರತ್ಯೇಕವಾಗಿ ಗುರುತಿಸದೆ, ಯಂತ್ರೋಪಕರಣ, ನೇರ ಬಿತ್ತನೆ ಯೋಜನೆಯಡಿ ದೇಸೀ ತಳಿ ಬೆಳೆದವರನ್ನೂ ಸೇರಿಸಿ ಪ್ರೋತ್ಸಾಹಧನ ನೀಡಲಾಗಿದೆ ಎಂದು ಕೃಷಿ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಭಾಗ್ಯವೂ ಇಲ್ಲ
ಕೃಷಿ ಹೊಂಡ ನಿರ್ಮಾಣ, ಸ್ಪ್ರಿಂಕ್ಲರ್‌ ನೀರಾವರಿ ಮೊದಲಾದ ಕಾರ್ಯಕ್ರಮ ಒಳಗೊಂಡಿದ್ದ ಕೃಷಿ ಭಾಗ್ಯ ಯೋಜನೆಯನ್ನೂ ಈ ಬಾರಿ ರದ್ದುಪಡಿಸಲಾಗಿದೆ. ಇದರಲ್ಲದೆ ಜೀವಾಮೃತ, ಬೀಜಾಮೃತ ಕಾರ್ಯಕ್ರಮದಡಿ ಗೊಬ್ಬರ, ಬೀಜ ಖರೀದಿ ಸಬ್ಸಿಡಿ, ದೇಸಿ ತರಕಾರಿ ಬೀಜ ಖರೀದಿ ಸಬ್ಸಿಡಿ, ಮೇವಿನ ಹುಲ್ಲು ಬೆಳೆಸಲು ಸಬ್ಸಿಡಿ ಮೊದಲಾದ ಆರ್ಥಿಕ ನೆರವನ್ನೂ ಈ ಬಾರಿ ನೀಡಲಾಗುತ್ತಿಲ್ಲ.

ಈ ಬಾರಿ ಕರಾವಳಿ ಪ್ಯಾಕೇಜ್‌, ಕೃಷಿಭಾಗ್ಯ ಯೋಜನೆಗಳನ್ನು ನೀಡಿಲ್ಲ. ಆದರೆ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ನಡಿ ವಿವಿಧ ಪ್ರೋತ್ಸಾಹಧನ, ಪರಿಕರ ನೀಡಲಾಗುತ್ತದೆ. ಫ‌ಲಾನುಭವಿಗಳಿಗೆ ಸೌಲಭ್ಯ ವಿತರಣೆ ನಡೆಯುತ್ತಿದೆ. ಕರಾವಳಿಯಲ್ಲಿ ಸ್ಥಳೀಯ ತಳಿಗಳನ್ನೇ ಬೆಳೆಯಲಾಗುತ್ತಿದೆ. ಹಾಗಾಗಿ ಸ್ಥಳೀಯ ತಳಿ ಎಂದು ಪ್ರತ್ಯೇಕವಾಗಿ ಗುರುತಿಸಿರಲಿಲ್ಲ. ಯಾಂತ್ರೀಕೃತ ನಾಟಿ, ನೇರಬಿತ್ತನೆಯ ಫ‌ಲಾನುಭವಿಗಳ ಜತೆಗೆ ದೇಸಿ ತಳಿ ಬೆಳೆದವರಿಗೂ ಪ್ರೋತ್ಸಾಹ ಧನ ನೀಡಲಾಗಿತ್ತು.

– ಸೀತಾ, ಕೆಂಪೇಗೌಡ, ಉಪನಿರ್ದೇಶಕರು, ಕೃಷಿ ಇಲಾಖೆ, ದ.ಕ., ಉಡುಪಿ ಜಿಲ್ಲೆ

ಪ್ಯಾಕೇಜ್‌ನಡಿ 1.35 ಕೋ.ರೂ.
ಕರಾವಳಿ ಪ್ಯಾಕೇಜ್‌ನಡಿ ಕಳೆದ ವರ್ಷ ದಕ್ಷಿಣಕನ್ನಡ, ಉಡುಪಿಯಲ್ಲಿ ಒಟ್ಟು 1.35 ಕೋ.ರೂ. ಪ್ರೋತ್ಸಾಹಧನ ನೀಡಲಾಗಿತ್ತು. ಯಾಂತ್ರೀಕೃತ ನಾಟಿ, ನೇರಬಿತ್ತನೆಯ ಜತೆಗೆ ದೇಸಿ ತಳಿ ಬೆಳೆಯುವ ರೈತರನ್ನು ಸೇರಿಸಲಾಗಿತ್ತು. ಉಡುಪಿಯಲ್ಲಿ
1,466 ರೈತರಿಗೆ 52.96 ಲ.ರೂ. ರೂ., ದ.ಕ.ದಲ್ಲಿ 2,325 ಮಂದಿಗೆ 82.17 ಲ.ರೂ. ಪ್ರೋತ್ಸಾಹಧನ ನೀಡಲಾಗಿತ್ತು.

– ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.