ಜೀವನದಲ್ಲಿ ಜಿಗುಪ್ಸೆ : ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಪೊಲೀಸ್ ಪೇದೆ
Team Udayavani, Dec 12, 2020, 1:20 PM IST
ತುಮಕೂರು : ಜೀವನದಲ್ಲಿ ಜಿಗುಪ್ಸೆ ಗೊಂಡು ಪೊಲೀಸ್ ಪೇದೆ ಓರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದ ಮುಳಕಟ್ಟಮ್ಮ ದೇವಾಲಯದ ಸಮೀಪ ಶನಿವಾರ ನಡೆದಿದೆ.
ಕುಣಿಗಲ್ ಪಟ್ಟಣ ಠಾಣೆಯ ಪೇದೆ, ಮೂಲತ ವಿಜಯಪುರ ಜಿಲ್ಲೆ, ಮುದ್ದೇಬಿಹಾಳ ತಾಲೂಕು ಅಡವಿಸೋಮನಾಳ ಗ್ರಾಮದ ಯಲ್ಲಾಲಿಂಗಮೇಟಿ (26) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಘಟನೆ ವಿವರ : ಮೃತ ಪೇದೆ ಶುಕ್ರವಾರ ರೈಲ್ವೆ ನಿಲ್ದಾಣಕ್ಕೆ ಹೋಗಿ ರೈಲು ಸಂಚಾರದ ಬಗ್ಗೆ ಮಾಹಿತಿ ಪಡೆದಿದ್ದ ಎನ್ನಲಾಗಿದ್ದು ಇಂದು ಯಶವಂತಪುರ, ಹಾಸನ ನಡುವೆ ಸಂಚರಿಸುವ ಡೆಮೋ ರೈಲು ಬೆಳಗ್ಗೆ ಸುಮಾರು 10:40 ಕ್ಕೆ ಕುಣಿಗಲ್ ಗೆ ಬಂದು ಹಾಸನಕ್ಕೆ ಹೋಗುತ್ತಿದ್ದ ವೇಳೆ ರೈಲಿಗೆ ತಲೆ ಕೊಟ್ಟಿದ್ದಾರೆ.
ಇದನ್ನೂ ಓದಿ:ಕೋವಿಡ್ ಪರಿಸ್ಥಿತಿ ಗಮನಾರ್ಹ ಸುಧಾರಣೆ, ನಿರೀಕ್ಷೆಗೂ ಮೀರಿ ಆರ್ಥಿಕ ಚೇತರಿಕೆ: ಪ್ರಧಾನಿ ಮೋದಿ