ಇರಾಕ್ಗೆ ಪೋಪ್ ಭೇಟಿ :ಕ್ರಿಶ್ಚಿಯನ್ನರ ನೆರವಿನಿಂದ ಇಸ್ಲಾಂ ರಾಷ್ಟ್ರ ಮರುಕಟ್ಟುವ ಚಿಂತನೆ
Team Udayavani, Mar 5, 2021, 9:35 PM IST
ಬಾಗ್ಧಾದ್: ಯುದ್ದೋನ್ಮಾದದ ಜ್ವಾಲೆಯಲ್ಲಿ ಉರಿದುಹೋದ ಇಸ್ಲಾಂ ರಾಷ್ಟ್ರ ಇರಾಕ್ ಅನ್ನು ಕ್ರೈಸ್ತ ಸಮುದಾಯದ ನೆರವಿನಿಂದ ಮರುಕಟ್ಟಲು ಪೋಪ್ ಫ್ರಾನ್ಸಿಸ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಶುಕ್ರವಾರ ಪೋಪ್, ಇರಾಕ್ಗೆ ಐತಿಹಾಸಿಕ ಭೇಟಿ ನೀಡಿದ್ದಾರೆ.
ಧರ್ಮ ಸಂಘರ್ಷದ ಕಾರಣಕ್ಕೆ ಕಳೆದೆರಡು ದಶಕಗಳಲ್ಲಿ ಇರಾಕ್ನಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಭಾರೀ ಕುಸಿತ ಕಂಡಿದೆ. ಪೋಪ್ ಭೇಟಿ ಮೂಲಕ ದೇಶದಲ್ಲಿ ಕ್ರೈಸ್ತರಿಗೆ ಸುರಕ್ಷಿತವಾಗಿ ನೆಲೆಸಲು ಅಭಯ ಸಿಕ್ಕಂತಾಗಿದೆ. “ಪೋಪ್ ಅವರ ಭೇಟಿಯನ್ನು ಇರಾಕಿಗಳು ತುಂಬು ಹೃದಯದಿಂದ ಸ್ವಾಗತಿಸುತ್ತಿರುವುದು, ಶಾಂತಿ ಮತ್ತು ಸಹಿಷ್ಣುತೆಯ ಸಂಕೇತ’ ಎಂದು ಇರಾಕ್ ವಿದೇಶಾಂಗ ಸಚಿವ ಫವಾದ್ ಹುಸ್ಸೇನ್ ಮೆಚ್ಚುಗೆ ಸೂಚಿಸಿದ್ದಾರೆ.
ಉಗ್ರರ ಅಟ್ಟಹಾಸ ಜೀವಂತವಿರುವ ಇರಾಕ್ನಲ್ಲಿ ಭಾರೀ ಭದ್ರತೆ ನಡುವೆ ಪೋಪ್ ಅವರ 3 ದಿನಗಳ ಭೇಟಿ ನಿಯೋಜನೆಗೊಂಡಿದೆ.
ವೈವಿಧ್ಯತೆ ಸ್ವೀಕರಿಸಿ: ಪೋಪ್ ಬುದ್ಧಿಮಾತು
“ಧಾರ್ಮಿಕ ಅಲ್ಪಸಂಖ್ಯಾತರ ಮೌಲ್ಯಗಳನ್ನು ಇರಾಕಿ ಪ್ರಜೆಗಳು ಗೌರವಿಸಬೇಕು. ಅಲ್ಪಸಂಖ್ಯಾತರನ್ನು ಹೊರಗಟ್ಟುವ ಬದಲು, ಅವರನ್ನು ಅಮೂಲ್ಯ ಸಂಪತ್ತು ಎಂದು ಪರಿಗಣಿಸಿ ಸಂರಕ್ಷಿಸಲು ಮುಂದಾಗಬೇಕು’- ಇದು ಪೋಪ್ ಫ್ರಾನ್ಸಿಸ್, ಇರಾಕಿಗಳಿಗೆ ಹೇಳಿದ ಬುದ್ಧಿಮಾತು!
“ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮೀರಿ ನೋಡಿದಾಗ, ಇತರ ಜನಾಂಗದ ಸದಸ್ಯರನ್ನೂ ನಮ್ಮ ಕುಟುಂಬದವರೆಂದು ಪರಿಗಣಿಸಿದಾಗ ಮಾತ್ರವೇ ರಾಷ್ಟ್ರವನ್ನು ಮರುಕಟ್ಟಲು ಸಾಧ್ಯ. ಮುಂದಿನ ಪೀಳಿಗೆ ಸುಖ-ಶಾಂತಿಯಿಂದ ಬದುಕಲೂ ಈ ನೀತಿ ಅಳವಡಿಕೆ ಅತ್ಯವಶ್ಯ’ ಎಂದು ತಿಳಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…