ಖಾಸಗಿ ಕ್ಲಿನಿಕ್ ಮೇಲೆ ಪುಂಡರ ದಾಳಿ : ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಕಿಡಿಗೇಡಿಗಳ ಕೃತ್ಯ
Team Udayavani, Sep 17, 2020, 11:40 AM IST
ಹನೂರು: ಪಟ್ಟಣ¨ ಖಾಸಗಿ ಕ್ಲಿನಿಕ್ವೊಂದರ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ, ಕಿಟಕಿ ಗಾಜುಗಳನ್ನು ಒಡೆದು ಹಾನಿಗೊಳಿಸಿರುವ ಘಟನೆ ಜರುಗಿದೆ. ಪಟ್ಟಣದ ಮೇಲೆ ಮಹದೇಶ್ವರ ಬೆಟ್ಟ ಕೊಳ್ಳೇಗಾಲ ಮುಖ್ಯ ರಸ್ತೆಯಲ್ಲಿರುವ ಸ್ನೇಹ ಕ್ಲಿನಿಕ್ ಮೇಲೆ ನಾಲ್ವರು ದುಷ್ಕರ್ಮಿಗಳ ಗುಂಪೊಂದು ರಾತ್ರಿ 11.20ರ ಸಮಯದಲ್ಲಿ ದಾಳಿ ನಡೆಸಿ, ಕೂಗಾಡಿ ಕಲ್ಲುಗಳಿಂದ ಒಡೆದಿದ್ದಾರೆ. ಬಳಿಕ ಬೆಳಗ್ಗೆ ಎಂದಿನಂತೆ ಕ್ಲಿನಿಕ್ ತೆರೆಯಲು ವೈದ್ಯರು ಆಗಮಿಸಿದ ವೇಳೆ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಕೂಡಲೇಆಸ್ಪತ್ರೆಯ ಮಾಲೀಕ ರಾದ ಡಾ. ಮಂಜುನಾಥ್ ಅವರುಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಲ್ವರು ಕಿಡಿಗೇಡಿಗಳು ಕ್ಲಿನಿಕ್ಗೆ ಹಾನಿಗೊಳಿಸಿರುವ ದೃಶ್ಯಗಳು ಕ್ಲಿನಿಕ್ ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಘಟನೆ ಸಂಬಂಧ ಕೂಡಲೇ ಕ್ರಮವಹಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಈ ದುಷ್ಕೃತ್ಯದಿಂದ ತಾವು ಭಯಭೀತರಾಗಿದ್ದು, ತಮಗೆ ಸೂಕ್ತ ರಕ್ಷಣೆ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಸಿಸಿ ಕ್ಯಾಮರಾದಲ್ಲಿ ಸೆರೆ: ಕ್ಲಿನಿಕ್ನ ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ನಡೆಸಿದಾಗ ಘಟನೆಯಲ್ಲಿ ಭಾಗಿಯಾಗಿರುವವರು ಹನೂರು ಪಟ್ಟಣವಾಸಿಗಳೇ ಎಂಬುದು ಕಂಡುಬಂದಿದೆ. ಆಸ್ಪತ್ರೆಯ ಕಿಟಿಕಿಯನ್ನು ಕೈಯಿಂದಲೇ ಒಡೆದು ಹಾಕಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಈ ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯು ಪಟ್ಟಣ ಪಂಚಾಯಿತಿ 8ನೇ ವಾರ್ಡ್ನ ಸದಸ್ಯ ಆನಂದ್ ಕುಮಾರ್ ಅವರ ಸಹೋದರ ಸಂತೋಷ್ ಕುಮಾರ್ ಹಾಗೂ ಆತನ 3ಜನ ಸ್ನೇಹಿತರು ಎಂಬುದಾಗಿ ತಿಳಿದು ಬಂದಿದೆ.