‘ಫಸ್ಟ್ ನೈಟ್’ ಹೇಳಿಕೆ: ರಚಿತಾ ರಾಮ್ ಮೇಲೆ ನಿಷೇಧ ಹೇರಲು ಕ್ರಾಂತಿ ದಳ ಕೋರಿಕೆ
Team Udayavani, Nov 13, 2021, 10:54 AM IST
ಚಾಮರಾಜನಗರ: ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಅವರು ಇನ್ನೂ ಬಿಡುಗಡೆಯಾಗದ ‘ಲವ್ ಯೂ ರಚ್ಚು’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನೀಡಿದ “ಮೊದಲ ರಾತ್ರಿ” ಹೇಳಿಕೆಗೆ ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಕನ್ನಡ ಕ್ರಾಂತಿ ದಳ ಒತ್ತಾಯಿಸಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ರಚಿತಾ ಅವರನ್ನು ನಿಷೇಧಿಸುವಂತೆ ಸಂಘಟನೆಯು ಕೋರಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕ್ರಾಂತಿ ದಳ ಸಂಘಟನೆಯ ಅಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ, ರಚಿತಾ ಅವರ ಹೇಳಿಕೆಗಳು ” ಕನ್ನಡ ನಾಡಿನ ಸಂಸ್ಕೃತಿ” ಗೆ ವಿರುದ್ಧವಾಗಿದೆ ಮತ್ತು “ರಾಜ್ಯದ ಪ್ರತಿಷ್ಠೆಗೆ ಧಕ್ಕೆ ತಂದಿದೆ” ಎಂದು ಕಿಡಿ ಕಾರಿದರು.
ರಚಿತಾ ರಾಮ್ ಅವರ ಹೇಳಿಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು, ಸುದ್ದಿಗಾರರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಎಲ್ಲರೂ ಫಸ್ಟ್ ನೈಟ್ ನಲ್ಲಿ ಏನು ಮಾಡುತ್ತಾರೋ, ನಾವು (ಸಿನಿಮಾ ಹಾಡಿನಲ್ಲಿ ) ಅದನ್ನೇ ಮಾಡಿದ್ದು’ ಎಂದಿದ್ದರು. ಈ ವಿಡಿಯೋ ಕ್ಲಿಕ್ ಬಳಸಿಕೊಂಡು ಟ್ರೋಲಿಗರು ಬಗೆ ಬಗೆ ಟ್ರೋಲ್ ವಿಡಿಯೋಗಳನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡುತ್ತಿದ್ದಾರೆ.