ಛಾಯಾ ಬ್ಯಾಂಕ್ಗಳಿಗೂ ಇನ್ನು ಕಠಿಣ ನಿಯಮ: ಆರ್ಬಿಐ
Team Udayavani, Jan 16, 2021, 7:10 PM IST
ನವದೆಹಲಿ: ಛಾಯಾ ಬ್ಯಾಂಕ್ಗಳೆಂದು ಕರೆಸಿಕೊಳ್ಳಲ್ಪಟ್ಟಿರುವ, ಬೃಹತ್ ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಕಠಿಣ ನಿಯಮಗಳ ವ್ಯಾಪ್ತಿಗೆ ತರಲು ಚಿಂತನೆ ನಡೆಸಲಾಗಿದೆ. ಹೀಗೆಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶನಿವಾರ ಹೇಳಿದ್ದಾರೆ.
2018ರಲ್ಲಿ ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಶಿಯಲ್ ಸರ್ವೀಸಸ್ ದಿವಾಳಿಯಾಗಿದ್ದು, ದೇವನ್ ಹೌಸಿಂಗ್ ಕಾರ್ಪ್ ಮತ್ತು ಆಲ್ಟಿಕೊ ಕ್ಯಾಪಿಟಲ್ 2019ರಲ್ಲಿ ಇದೇ ಹಾದಿ ಹಿಡಿದಿದ್ದವು. ದಿಢೀರೆಂದು ಇಂತಹ ಸಂಸ್ಥೆಗಳು ಜನರಿಗೆ ಕೈಕೊಟ್ಟಾಗ ಸಾವಿರಾರು ಮಂದಿಯ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಅದನ್ನು ಸರಿಪಡಿಸುವ ಅನಿವಾರ್ಯತೆ ಆರ್ಬಿಐ ಮುಂದಿದೆ.
ಮಾಮೂಲಿ ಬ್ಯಾಂಕ್ಗಳು ಶೇ.18ರಷ್ಟು ಠೇವಣಿಯನ್ನು ನಗದು, ಚಿನ್ನ ಅಥವಾ ಸರ್ಕಾರಿ ಭದ್ರತೆಗಳ ರೂಪದಲ್ಲಿ ಇಟ್ಟುಕೊಂಡಿರಲೇಬೇಕು. ಹಾಗೆಯೇ ಮೀಸಲು ನಗದಿನ ಪ್ರಮಾಣ ಶೇ.3ರಷ್ಟು ಹೊಂದಿರಲೇಬೇಕು. ಇದೇ ರೀತಿಯ ಕ್ರಮಗಳನ್ನು ಛಾಯಾ ಬ್ಯಾಂಕ್ಗಳೂ ಅನುಸರಿಸಬೇಕೆನ್ನುವುದು ಆರ್ಬಿಐ ಇಂಗಿತವಾಗಿದೆ.
ಇದನ್ನೂ ಓದಿ:ಉಡುಪಿ ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆ ಪ್ರಯೋಗ; ಕೋವಿಡ್ ನಿರ್ಮೂಲನೆಯತ್ತ ಪ್ರಥಮ ಹೆಜ್ಜೆ
ಛಾಯಾ ಬ್ಯಾಂಕ್ಗಳೆಂದರೇನು?
ಇವು ಮಾಮೂಲಿ ವಾಣಿಜ್ಯ ಬ್ಯಾಂಕ್ಗಳಂತೆಯೇ ಗ್ರಾಹಕರಿಗೆ ಹಣಕಾಸು ಸೇವೆ ನೀಡುತ್ತವೆ. ಆದರೆ ಮಾಮೂಲಿ ಬ್ಯಾಂಕ್ಗಳ ನಿಯಮಗಳ ಮಿತಿಗೆ ಒಳಪಡವುದಿಲ್ಲ. ಒಂದು ರೀತಿ ಪರ್ಯಾಯ ಬ್ಯಾಂಕ್ಗಳಂತೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಛಾಯಾ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳೆಂದು ಕರೆಸಿಕೊಳ್ಳುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್