ಶಹಬಾಜ್ ಬೌಲಿಂಗ್ ಕಮಾಲ್ : ಹೈದರಾಬಾದ್‌ ವಿರುದ್ಧ RCB ಗೆ 6 ರನ್‌ಗಳ ಗೆಲುವು

3 ವಿಕೆಟ್‌ ಕಿತ್ತ ಶಹಜಾಬ್‌, ರೋಚಕ ಹೋರಾಟದಲ್ಲಿ ಕೈಚೆಲ್ಲಿದ ಹೈದರಾಬಾದ್‌

Team Udayavani, Apr 14, 2021, 11:31 PM IST

ಹೈದರಾಬಾದ್‌ ವಿರುದ್ಧ RCB 6 ರನ್‌ಗಳ ಗೆಲುವು : ಸತತ 2ನೇ ಪಂದ್ಯ ಗೆದ್ದಿರುವ ಕೊಹ್ಲಿ ಪಡೆ

ಚೆನ್ನೈ: ಸನ್‌ರೈಸರ್ ಹೈದರಾಬಾದ್‌ ಎದುರಿನ ಸಣ್ಣ ಮೊತ್ತದ ಹೋರಾಟದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಆರು ರನ್ನುಗಳ ರೋಚಕ ಗೆಲುವು ದಾಖಲಿಸಿದೆ. ಕೂಟದ ಮೊದಲೆರಡೂ ಪಂದ್ಯಗಳನ್ನು ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನೊಂದೆಡೆ ಹೈದರಾಬಾದ್‌ ಎರಡೂ ಪಂದ್ಯಗಳಲ್ಲಿ ಎಡವಿತು.

ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಹೋರಾಟಭರಿತ ಅರ್ಧ ಶತಕದಿಂದಾಗಿ ಆರ್‌ಸಿಬಿ 8 ವಿಕೆಟಿಗೆ 149 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿತು. ಡೇವಿಡ್‌ ವಾರ್ನರ್‌ (54)-ಮನೀಷ್‌ ಪಾಂಡೆ (38) ಮುನ್ನುಗ್ಗಿ ಬರುತ್ತಿದ್ದಾಗ ಹೈದರಾಬಾದ್‌ ದೊಡ್ಡ ಅಂತರದ ಗೆಲುವು ಸಾಧಿಸುತ್ತದೆಂಬ ನಿರೀಕ್ಷೆ ಬಲವಾಗಿತ್ತು. ಆದರೆ ಆರ್‌ಸಿಬಿಯ ನಿಖರ ಬೌಲಿಂಗ್‌ ಹಾಗೂ ಅಷ್ಟೇ ಚುರುಕಿನ ಫೀಲ್ಡಿಂಗ್‌ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಅಂತಿಮವಾಗಿ ವಾರ್ನರ್‌ ಪಡೆ 9 ವಿಕೆಟಿಗೆ 143 ರನ್‌ ಗಳಿಸಿ ಸೋಲನ್ನು ಸ್ವೀಕರಿಸಿತು.

ಶಾಬಾಜ್‌ ಅಹ್ಮದ್‌ 7 ರನ್ನಿಗೆ 3 ವಿಕೆಟ್‌ ಉಡಾಯಿಸಿ ಆರ್‌ಸಿಬಿ ಬೌಲಿಂಗ್‌ ಹೀರೋ ಎನಿಸಿದರು. 17ನೇ ಓವರ್‌ ಎಸೆದ ಅವರು ಕೇವಲ 1 ರನ್‌ ನೀಡಿ ಮೂರು ವಿಕೆಟ್‌ ಕಿತ್ತು ಪಂದ್ಯ ತಿರುವು ಪಡೆಯಲು ಕಾರಣರಾದರು. ಈ ಸಾಹಸದಿಂದಾಗಿ ಒಂದು ವಿಕೆಟಿಗೆ 96 ರನ್‌ ಮಾಡಿ ಗೆಲುವಿನ ಹಾದಿಯಲ್ಲಿದ್ದ ಸನ್‌ರೈಸರ್ ನಾಟಕೀಯ ಕುಸಿತಕ್ಕೆ ಸಿಲುಕಿತು. ಹರ್ಷಲ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌ ತಲಾ 2 ವಿಕೆಟ್‌ ಕಿತ್ತು ಹೈದರಾಬಾದ್‌ಗೆ ನಿಯಂತ್ರಣ ಹೇರಿದರು.

ಮ್ಯಾಕ್ಸ್‌ವೆಲ್‌ ಅರ್ಧ ಶತಕ
ಆರ್‌ಸಿಬಿ ಪರ ಅಂತಿಮ ಎಸೆತದಲ್ಲಿ ಔಟಾದ ಮ್ಯಾಕ್ಸ್‌ ವೆಲ್‌ 41 ಎಸೆತ ಎದುರಿಸಿ 59 ರನ್‌ ಹೊಡೆದರು. ಇದು 5 ಫೋರ್‌, 3 ಸಿಕ್ಸರ್‌ಗಳನ್ನು ಒಳಗೊಂಡಿತ್ತು.

ಮೊದಲ ಪಂದ್ಯವನ್ನು ತಪ್ಪಿಕೊಂಡಿದ್ದ ಎಡಗೈ ಓಪನರ್‌ ದೇವದತ್ತ ಪಡಿಕ್ಕಲ್‌ ಆಡುವ ಬಳಗದಲ್ಲಿ ಕಾಣಿಸಿಕೊಂಡದ್ದು ಆರ್‌ಸಿಬಿ ಅಭಿಮಾನಿಗಳಿಗೆ ಖುಷಿ ಕೊಟ್ಟಿತಾದರೂ ಅವರ ಶೀಘ್ರ ನಿರ್ಗಮನ ಅಷ್ಟೇ ನಿರಾಸೆ ಮೂಡಿಸಿತು (11).
ವನ್‌ಡೌನ್‌ನಲ್ಲಿ ಬಂದ ಮತ್ತೋರ್ವ ಎಡಗೈ ಆಟಗಾರ ಶಾಬಾಜ್‌ ಅಹ್ಮದ್‌ ಈ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲಿಲ್ಲ. ನದೀಂ ಎಸೆತವೊಂದನ್ನು ಸಿಕ್ಸರ್‌ಗೆ ಬಡಿದಟ್ಟಿದರೂ ಬಳಿಕ ನದೀಂ ಎಸೆತದಲ್ಲೇ ವಿಕೆಟ್‌ ಕೈಚೆಲ್ಲಿದರು. ಪವರ್‌ ಪ್ಲೇ ಮುಗಿದ ಬಳಿಕ ಮೊದಲ ಎಸೆತದಲ್ಲೇ ಹೈದರಾಬಾದ್‌ ಈ ಯಶಸ್ಸು ಸಾಧಿಸಿತು. ಪವರ್‌ ಪ್ಲೇಯಲ್ಲಿ ಆರ್‌ಸಿಬಿ ಒಂದು ವಿಕೆಟಿಗೆ 47 ರನ್‌ ಪೇರಿಸಿತ್ತು.

ಮುಂದಿನದು ವಿರಾಟ್‌ ಕೊಹ್ಲಿ-ಗ್ಲೆನ್‌ ಮ್ಯಾಕ್ಸ್‌ವೆಲ್‌ ಜೋಡಿಯ ಆಟ. 10 ಓವರ್‌ ತನಕ ಇವರ ಬ್ಯಾಟಿಂಗ್‌ನಲ್ಲಿ ಯಾವುದೇ ಅಬ್ಬರ ಇರಲಿಲ್ಲ. ಅರ್ಧ ಹಾದಿ ಕ್ರಮಿಸು ವಾಗ 2 ವಿಕೆಟಿಗೆ ಕೇವಲ 63 ರನ್‌ ಒಟ್ಟುಗೂಡಿತ್ತು.

ನದೀಂ ಪಾಲಾದ 11ನೇ ಓವರಿನಲ್ಲಿ ಮ್ಯಾಕ್ಸ್‌ ವೆಲ್‌-ಕೊಹ್ಲಿ ಸಿಡಿದು ನಿಂತು 22 ರನ್‌ ಸೂರೆಗೈದರು. ಮ್ಯಾಕ್ಸಿ ಸತತ ಎಸೆತಗಳಲ್ಲಿ 2 ಸಿಕ್ಸರ್‌, ಒಂದು ಬೌಂಡರಿ ಬಾರಿಸಿದರು. ನಾಯಕ ವಿರಾಟ್‌ ಕೊಹ್ಲಿ 13ನೇ ಓವರ್‌ ತನಕ ನಿಂತು ರನ್‌ಗತಿ ಏರಿಸಲು ಪ್ರಯತ್ನಿಸಿದರು. ಈ ಹಂತದಲ್ಲಿ ದ್ವಿತೀಯ ಸ್ಪೆಲ್‌ ಬೌಲಿಂಗ್‌ ಆಕ್ರಮಣಕ್ಕಿಳಿದ ಜಾಸನ್‌ ಹೋಲ್ಡರ್‌ ದೊಡ್ಡ ಬೇಟೆಯಾಡಿದರು. ಕೊಹ್ಲಿ ಬ್ಯಾಟಿಗೆ ಟಾಪ್‌ ಎಜ್‌ ಆಗಿ ಚಿಮ್ಮಿದ ಚೆಂಡು ನೇರವಾಗಿ ವಿಜಯ್‌ ಶಂಕರ್‌ ಕೈ ಸೇರಿತು. ಕೊಹ್ಲಿ ಆಕ್ರೋಶದಿಂದಲೇ ಮೈದಾನ ತೊರೆದರು. ಆರ್‌ಸಿಬಿ ಕಪ್ತಾನನ ಗಳಿಕೆ 29 ಎಸೆತಗಳಿಂದ 33 ರನ್‌.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಸಿ ಶಂಕರ್‌ ಬಿ ಹೋಲ್ಡರ್‌ 33
ದೇವದತ್ತ ಪಡಿಕ್ಕಲ್‌ ಸಿ ನದೀಂ ಬಿ ಭುವನೇಶ್ವರ್‌ 11
ಶಾಬಾಜ್‌ ಅಹ್ಮದ್‌ ಸಿ ರಶೀದ್‌ ಬಿ ನದೀಂ 14
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ಸಾಹಾ ಬಿ ಹೋಲ್ಡರ್‌ 59
ಎಬಿ ಡಿ ವಿಲಿಯರ್ ಸಿ ವಾರ್ನರ್‌ ಬಿ ರಶೀದ್‌ 1
ವಾಷಿಂಗ್ಟನ್‌ ಸುಂದರ್‌ಸಿ ಪಾಂಡೆ ಬಿ ರಶೀದ್‌ 8
ಡಿ. ಕ್ರಿಸ್ಟಿಯನ್‌ ಸಿ ಸಿ ಸಾಹಾ ಬಿ ನಟರಾಜನ್‌ 1
ಕೈಲ್‌ ಜಾಮೀಸನ್‌ ಸಿ ಪಾಂಡೆ ಬಿ ಹೋಲ್ಡರ್‌ 12
ಹರ್ಷಲ್‌ ಪಟೇಲ್‌ ಔಟಾಗದೆ 0
ಇತರ 10
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 149
ವಿಕೆಟ್‌ ಪತನ: 1-19, 2-47, 3-91, 4-95, 5-105, 6-109, 7-136, 8-149.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌ 4-0-30-1
ಜಾಸನ್‌ ಹೋಲ್ಡರ್‌ 4-0-30-3
ಶಾಬಾಜ್‌ ನದೀಂ 4-0-36-1
ಟಿ. ನಟರಾಜನ್‌ 4-0-32-1
ರಶೀದ್‌ ಖಾನ್‌ 4-0-18-2

ಸನ್‌ರೈಸರ್ ಹೈದರಾಬಾದ್‌
ವೃದ್ಧಿಮಾನ್‌ ಸಾಹಾ ಸಿ ಮ್ಯಾಕ್ಸ್‌ವೆಲ್‌ ಬಿ ಸಿರಾಜ್‌ 1
ಡೇವಿಡ್‌ ವಾರ್ನರ್‌ ಸಿ ಕ್ರಿಸ್ಟಿಯನ್‌ ಬಿ ಕೈಲ್‌ 54
ಮನೀಷ್‌ ಪಾಂಡೆ ಸಿ ಪಟೇಲ್‌ ಬಿ ಶಾಬಾಜ್‌ 38
ಜಾನಿ ಬೇರ್‌ಸ್ಟೊ ಸಿ ಎಬಿಡಿ ಬಿ ಶಾಬಾಜ್‌ 12
ಅಬ್ದುಲ್‌ ಸಮದ್‌ ಸಿ ಮತ್ತು ಬಿ ಶಾಬಾಜ್‌ 0
ವಿಜಯ್‌ ಶಂಕರ್‌ ಸಿ ಕೊಹ್ಲಿ ಬಿ ಪಟೇಲ್‌ 3
ಜಾಸನ್‌ ಹೋಲ್ಡರ್‌ ಸಿ ಕ್ರಿಸ್ಟಿಯನ್‌ ಬಿ ಸಿರಾಜ್‌ 4
ರಶೀದ್‌ ಖಾನ್‌ ರನೌಟ್‌ 17
ಭುವನೇಶ್ವರ್‌ ಔಟಾಗದೆ 2
ಶಾಬಾಜ್‌ ನದೀಂ ಸಿ ಅಹ್ಮದ್‌ ಬಿ ಪಟೇಲ್‌ 0
ಟಿ. ನಟರಾಜನ್‌ ಔಟಾಗದೆ 0
ಇತರ 12
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 143
ವಿಕೆಟ್‌ ಪತನ: 1-13, 2-96, 3-115, 4-115, 5-116, 6-123, 7-130, 8-142, 9-142.
ಬೌಲಿಂಗ್‌: ಮೊಹಮ್ಮದ್‌ ಸಿರಾಜ್‌ 4-1-25-2
ಕೈಲ್‌ ಜಾಮೀಸನ್‌ 3-0-30-1
ವಾಷಿಂಗ್ಟನ್‌ ಸುಂದರ್‌ 2-0-14-0
ಯಜುವೇಂದ್ರ ಚಹಲ್‌ 4-0-29-0
ಹರ್ಷಲ್‌ ಪಟೇಲ್‌ 4-0-25-2
ಡೇನಿಯಲ್‌ ಕ್ರಿಸ್ಟಿಯನ್‌ 1-0-7-0
ಶಾಬಾಜ್‌ ಅಹ್ಮದ್‌ 2-0-7-3
ಪಂದ್ಯಶ್ರೇಷ್ಠ: ಗ್ಲೆನ್‌ ಮ್ಯಾಕ್ಸ್‌ವೆಲ್‌

ಟಾಪ್ ನ್ಯೂಸ್

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

Rajeev Chandrashekhar

Corrupt ಡಿಕೆಶಿ ಸರ್ಟಿಫಿಕೆಟ್‌ ಬೇಕಾಗಿಲ್ಲ: ಕೇಂದ್ರ ಸಚಿವ ರಾಜೀವ್‌ ತಿರುಗೇಟು

1-wqewqe

2014 ಭರವಸೆ, 2019 ನಂಬಿಕೆ, 2024ರಲ್ಲಿ ಗ್ಯಾರಂಟಿ: ಮೋದಿ

mamata

CAA, NRC ರದ್ದು: ದೀದಿ ಶಪಥ ಪ್ರಣಾಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqew

KKR ಸೋಲಿನ ಮೇಲೆ ಬರೆ : ಶ್ರೇಯಸ್‌ ಅಯ್ಯರ್‌ಗೆ 12 ಲಕ್ಷ ರೂ. ದಂಡ

Hockey

Hockey; ಕುಂಡ್ಯೋಳಂಡ ಟೂರ್ನಿ: ಕಣ್ಣಂಡ ತಂಡಕ್ಕೆ ಜಯ

1-weewqe

IPL; 89 ಕ್ಕೆ ಆಲೌಟಾದ ಟೈಟಾನ್ಸ್ ; ಡೆಲ್ಲಿಗೆ ಸುಲಭ ಜಯ

IPL ಗುಜರಾತ್‌ ಟೈಟಾನ್ಸ್‌ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು ಅನಿವಾರ್ಯ

IPL ಗುಜರಾತ್‌ ಟೈಟಾನ್ಸ್‌ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು ಅನಿವಾರ್ಯ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.