ಗಡಿ ವಿವಾದ ಬಗ್ಗೆ ಸಿಎಂ ಮಾತಿಗಷ್ಟೇ ಪ್ರತಿಕ್ರಿಯೆ: ಡಿ.ಕೆ.ಶಿವಕುಮಾರ್
Team Udayavani, Dec 2, 2022, 9:38 PM IST
ಬೆಂಗಳೂರು: ಮಹಾರಾಷ್ಟ್ರ ಜತೆಗಿನ ಗಡಿ ವಿವಾದದ ಬಗ್ಗೆ ಮುಖ್ಯಮಂತ್ರಿಗಳ ಮಾತಿಗೆ ಪ್ರಾಮುಖ್ಯ ನೀಡುತ್ತೇನೆ. ಬೇರೆಯವರ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಪಕ್ಷದಲ್ಲಿ ಆಂತರಿಕ ಒಪ್ಪಂದ ಮಾಡಿಕೊಂಡು, ರಾಜ್ಯದ ಗಂಭೀರ ವಿಚಾರಗಳನ್ನು ಮರೆಮಾಚಲು ಈ ವಿವಾದ ಎಬ್ಬಿಸುತ್ತಿದ್ದಾರೆ.
ಡಿ.6ರಂದು ಮಹಾರಾಷ್ಟ್ರ ಸಚಿವರು ಬೆಳಗಾವಿ ಜಿಲ್ಲೆಗೆ ಭೇಟಿ ನೀಡುತ್ತಿರುವ ವಿಚಾರದಲ್ಲಿ ಸಹಿತ ಪ್ರಮುಖ ವಿಚಾರಗಳನ್ನು ಮರೆಮಾಚಲು ಈ ವಿವಾದವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.