ವಿಕೆಟ್ ಕೀಪಿಂಗ್ ನಲ್ಲಿ ರಿಷಭ್ ಪಂತ್ ಶತಕ : ಧೋನಿ ದಾಖಲೆ ಪತನ
Team Udayavani, Dec 29, 2021, 12:54 PM IST
ಸೆಂಚುರಿಯನ್: ಸೂಪರ್ ಸ್ಪೋರ್ಟ್ ಪಾರ್ಕ್ ನಲ್ಲಿ ಭಾರತದ ಭರವಸೆಯ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಆಗಿರುವ ರಿಷಭ್ ಪಂತ್ ಹೊಸ ದಾಖಲೆ ಬರೆದಿದ್ದು, ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬವುಮ ಅವರ ಕ್ಯಾಚ್ ಪಡೆಯುವ ಮೂಲಕ ರಿಷಭ್ ಪಂತ್ ವಿಕೆಟ್ ಹಿಂದುಗಡೆ 100 ವಿಕೆಟ್ ಪತನಕ್ಕೆ ಕಾರಣರಾದರು. ಪಂತ್ ಅವರು ಅತೀ ಕಡಿಮೆ 26 ಟೆಸ್ಟ್ಗಳಲ್ಲಿಯೇ ಈ ಮೈಲಿಗಲ್ಲು ದಾಖಲಿಸಿದರು. ಧೋನಿ ಅವರು 36 ಟೆಸ್ಟ್ ಗಳಲ್ಲಿ ಬರೆದ ದಾಖಲೆ ಪತನಗೊಂಡಿತು. ರಿಷಬ್ ಪಂತ್ 93 ಕ್ಯಾಚ್ಗಳು ಮತ್ತು 8 ಸ್ಟಂಪಿಂಗ್ಗಳ ಮೂಲಕ 101 ವಿಕೆಟ್ ಪತನಕ್ಕೆ ಕಾರಣವಾಗಿದ್ದಾರೆ.
ಕೀಪಿಂಗ್ ವಿಭಾಗದಲ್ಲಿ ದೊಡ್ಡ ಹೆಸರಾಗಿರುವ ಧೋನಿ ಸ್ಟಂಪ್ನ ಹಿಂದಿನಿಂದ 294 ವಿಕೆಟ್ ಪತನಕ್ಕೆ ಕಾರಣರಾಗಿದ್ದರು. ಅವರು 256 ಕ್ಯಾಚ್ಗಳು ಮತ್ತು 38 ಬಾರಿ ಸ್ಟಂಪ್ ಮಾಡಿದ್ದರು.ಪಂತ್ ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ ಪತನಕ್ಕೆ ಕಾರಣವಾದ ಆರನೇ ಭಾರತೀಯ ವಿಕೆಟ್ ಕೀಪರ್ ಎನಿಸಿಕೊಂಡರು.
ಸೈಯದ್ ಕಿರ್ಮಾನಿ
ಈ ಪಟ್ಟಿಯಲ್ಲಿ ಭಾರತದ ಕೆಲವು ದಿಗ್ಗಜ ಆಟಗಾರರಿದ್ದು, ಆ ಪೈಕಿ 1983 ರ ವಿಶ್ವಕಪ್ ವಿಜೇತ ತಂಡ ದ ಸೈಯದ್ ಕಿರ್ಮಾನಿ ಭಾರತಕ್ಕಾಗಿ ದೀರ್ಘಕಾಲ ವಿಕೆಟ್ ಕೀಪರ್ ಆಗಿ ಒಟ್ಟು 198 ವಿಕೆಟ್ ಪತನಕ್ಕೆ ಕಾರಣರಾಗಿದ್ದರು., 160 ಕ್ಯಾಚ್ಗಳನ್ನು ಪಡೆದಿದ್ದು, 38 ಬಾರಿ ಬ್ಯಾಟ್ಸ್ ಮನ್ ಗಳನ್ನು ಸ್ಟಂಪ್ ಮಾಡಿದ್ದರು. ಅವರು 42 ಟೆಸ್ಟ್ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರು.
ಕಿರಣ್ ಮೊರೆ
ಮತ್ತೊಬ್ಬ ಅಸಾಧಾರಣ ವಿಕೆಟ್ಕೀಪರ್ ಕಿರಣ್ ಮೊರೆ ಅವರು ನಿವೃತ್ತರಾಗುವ ಮೊದಲು 110 ಕ್ಯಾಚ್ಗಳು ಮತ್ತು 20 ಸ್ಟಂಪಿಂಗ್ಗಳು ಸೇರಿದಂತೆ 130 ಔಟ್ಗಳನ್ನು ಪೂರ್ಣಗೊಳಿಸಿದ್ದರು. ಅವರು 39 ಟೆಸ್ಟ್ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರು.
ನಯನ್ ಮೊಂಗಿಯಾ
ಮೊಂಗಿಯಾ ಅವರು 99 ಕ್ಯಾಚ್ಗಳು ಮತ್ತು 8 ಸ್ಟಂಪಿಂಗ್ಗಳು ಸೇರಿದಂತೆ 107 ಬಾರಿ ಔಟ್ ಮಾಡಿದ್ದರು. ಅವರು 41 ಟೆಸ್ಟ್ಗಳಲ್ಲಿ 100 ಔಟ್ಗಳ ಮೈಲಿಗಲ್ಲನ್ನು ದಾಟಿದ್ದರು.
ವೃದ್ಧಿಮಾನ್ ಸಹಾ
ಅತ್ಯುತ್ತಮ ವಿಕೆಟ್ ಕೀಪರ್ ಆಗಿರುವ ಸಹಾ ಕ್ಲೀನ್ ವಿಕೆಟ್ಕೀಪರ್ ಎನಿಸಿಕೊಂಡವರು. ಕಡಿಮೆ ತಪ್ಪುಗಳನ್ನು ಮಾಡುವ ಅವರು 92 ಕ್ಯಾಚ್ಗಳು ಮತ್ತು 12 ಸ್ಟಂಪಿಗ್ಗಳನ್ನು ಒಳಗೊಂಡಂತೆ ಒಟ್ಟು 104 ಬಲಿ ವಿಕೆಟ್ನ ಹಿಂದಿನಿಂದ ಪಡೆದಿದ್ದಾರೆ. ಸಹಾ ಕೂಡ 36 ಟೆಸ್ಟ್ಗಳಲ್ಲಿ ಮೈಲಿಗಲ್ಲನ್ನು ತಲುಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು
MUST WATCH
ಹೊಸ ಸೇರ್ಪಡೆ
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
ದಳಪತಿ ಅಭಿಮಾನಿಗಳ ಟ್ರೋಲ್ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?
RCB: ಈ ಸಲ ಕಪ್ ನಮ್ಮದು…