ಸಲೀಂ ಮಾತಿನಿಂದ ಮುಜುಗರವಾಗಿದೆ, ನನಗದು ಸಂಬಂಧಿಸಿಲ್ಲ: ಡಿಕೆಶಿ
Team Udayavani, Oct 13, 2021, 5:23 PM IST
ಬೆಂಗಳೂರು : ಮಾಧ್ಯಮ ಸಂಯೋಜಕರಾಗಿದ್ದ ಸಲೀಂ ಅವರು ಆಡಿದ ಕೆಲ ಮಾತುಗಳಿಂದ ಮುಜುಗರ ಆಗಿದ್ದು ನಿಜ. ಆದರೆ ಅವರ ಆರೋಪಕ್ಕೂ ನನಗೂ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ನಾನು ಯಾವ ಪರ್ಸಂಟೇಜ್ ವಿಚಾರದಲ್ಲಿ ಭಾಗಿಯಾಗಿಲ್ಲ.ಸಲೀಂ ಮಾತನಾಡಿರುವ ವಿಚಾರ ಕಾಂಗ್ರೆಸ್ ಪಕ್ಷಕ್ಕೂ, ನನಗೂ ಸಂಬಂಧಿಸುವುದಿಲ್ಲ ಎಂದರು.
ಸಲೀಂ ಹೇಳಿಕೆಯಿಂದ ಮುಜುಗರ ಆಗಿಲ್ಲ ಎಂದು ಹೇಳುವುದಿಲ್ಲ, ಮಾತನಾಡಿದ್ದಾರೆ, ರೆಕಾರ್ಡ್ ಕೂಡ ಇದೆ ಎಂದರು. ಉಗ್ರಪ್ಪ ಅವರು ಈಗಾಗಲೇ ಉತ್ತರ ಕೊಟ್ಟಿದ್ದಾರೆ ಎಂದು ಭಾವಿಸುತ್ತೇನೆ ಎಂದರು.
ಸಲೀಂ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗಿದೆ, ಮುಜುಗರ ಆಗಿದ್ದಕ್ಕೆ ನಾನು ಇಲ್ಲಿ ಮಾತನಾಡುತ್ತಿದ್ದೇನೆ. ಹೇಳಿಕೆ ನೀಡಿದ ಸಲೀಂ ವಿರುದ್ಧ ಪಕ್ಷದ ಶಿಸ್ತು ಸಮಿತಿ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದೆ ಎಂದರು.
ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯುವವರು, ಜೈಕಾರ ಹಾಕುವವರು, ಚಪ್ಪಲಿ ಎಸೆಯುವವರು, ಮೊಟ್ಟೆ ಎಸೆಯುವರು ಇರ್ತಾರೆ. ಇದು ಎಲ್ಲಾ ಪಕ್ಷಗಳಲ್ಲೂ ಇದೆ ಎಂದರು.
ಸಿದ್ದರಾಮಯ್ಯ ಅವರ ಜೊತೆ ಜಗಳವೂ ಇಲ್ಲ ಏನೂ ಇಲ್ಲ. ನಾನು ಯಾವುದೇ ಗುಂಪುಗಾರಿಕೆ ನಡೆಸುವವನಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆದಿಲ್ಲ ಎಂದರು.
ನಾನು ಹಳ್ಳಿಯಿಂದ ಬಂದವನು. ನನ್ನ ಬಾಡಿ ಲ್ಯಾಂಗ್ವೇಜ್ ಬದಲಾವಣೆ ಮಾಡಲು ಸಾಧ್ಯವಿಲ್ಲ. ನನ್ನದೇ ಆದ ಶೈಲಿ ಇದೆ, ನನ್ನದೇ ಆದ ವ್ಯಕ್ತಿತ್ವ, ನನ್ನದೇ ಆದ ನಡತೆ, ನನ್ನದೇ ಆದ ಯಶಸ್ಸು ಇದೆ ಎಂದರು.
ಬಿಜೆಪಿ ವಿರುದ್ಧವೂ ಅವರದ್ದೇ ಪಕ್ಷದ ನಾಯಕರು ಭ್ರಷ್ಟಾಚಾರದ ಆರೋಪ ಮಾಡಿದ್ದರು,ಪಕ್ಷ ಕ್ರಮ ಕೈಗೊಂಡಿದೆಯೇ ಎಂದು ಸವಾಲು ಹಾಕಿದರು.
ಡಿಕೆಶಿ ಅವರು ಉತ್ತಮ ಆಡಳಿತಗಾರರು
ತೀವ್ರ ವಿವಾದಕ್ಕೆ ಗುರಿಯಾದ ಬಳಿಕ ವಿ. ಎಸ್. ಉಗ್ರಪ್ಪ ಅವರು ಸುದ್ದಿಗೋಷ್ಠಿ ನಡೆಸಿ, ನಡೆದ ಘಟನೆಗೆ ತೇಪೆ ಹಚ್ಚಲು ಪ್ರಯತ್ನಿಸಿದರು.
ಡಿ.ಕೆ.ಶಿವಕುಮಾರ್ ಅವರು ಆಸ್ತಿ ಗಳಿಸಿರುವುದು ರಾಜಕಾರಣದಿಂದ ಅಲ್ಲ. ಅವರ ವ್ಯವಹಾರ ಮತ್ತು ಉದ್ಯಮದಿಂದ ಮಾಡಿದ್ದಾರೆ. ರಾಜಕಾರಣದಲ್ಲಿ ಅವರು ವೆಚ್ಚ ಮಾಡಿ ಕಳೆದುಕೊಂಡು ಬರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಕಮಿಷನ್ ಪ್ರವೃತ್ತಿ ಬೆಳೆಸಿದವರಲ್ಲ. ಪಿಸುಗುಟ್ಟಿದ ಮಾತನ್ನು ತೆಗೆದುಕೊಂಡು ಕೋಟಿಗಟ್ಟಲೆ ತೆಗೆದುಕೊಂಡಿದ್ದಾರೆ ಎಂದು ಬಿಂಬಿಸುವುದು ಮಾಧ್ಯಮಗಳಿಗೆ ಸಮಂಜಸವಲ್ಲ ಎಂದರು.
ಗೂಬೆ ಕೂರಿಸುವುದು ಬೇಡ , ನಾನು ಯಾರಿಗೂ ಗೂಬೆ ಕೂರಿಸುವುದಿಲ್ಲ. ಆಕಸ್ಮಿಕವಾಗಿ ಅವನು ಕಿವಿಯಲ್ಲಿ ಪಿಸುಗುಟ್ಟಿದ್ದನ್ನು ಪರಿಗಣಿಸಬೇಡಿ ಎಂದರು. ಕಮಿಷನ್, ಭ್ರಷ್ಟಾಚಾರ ಕಾಂಗ್ರೆಸ್ ಗೆ ದೂರ. ಭ್ರಷ್ಟಾಚಾರದ ಗಂಗೋತ್ರಿ ಹರಿಸುತ್ತಿದ್ದರೇ ಅದು ಬಿಜೆಪಿಯವರು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್