ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಬಗ್ಗು ಬಡಿಯಲು ಇಂದ್ರಜಿತ್ ಲಂಕೇಶ್ ಸಹಕಾರ ಅಗತ್ಯ: ಸಿ.ಟಿ.ರವಿ
Team Udayavani, Aug 29, 2020, 2:59 PM IST
ಚಿಕ್ಕಮಗಳೂರು : ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾವನ್ನು ಸಂಪೂರ್ಣವಾಗಿ ಬಗ್ಗು ಬಡಿಯಲು ಇಂದ್ರಜಿತ್ ಲಂಕೇಶ್ ಅವರ ಸಹಕಾರ ಅಗತ್ಯವಾಗಿ ಬೇಕಿದೆ ಎಂದು ಚಿಕ್ಕಮಗಳೂರು ಸಚಿವ ಸಿ.ಟಿ. ರವಿ ಅವರು ಹೇಳಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಜೋರಾಗಿದ್ದು ಇದೊಂದು ವ್ಯವಸ್ಥಿತವಾದ ರಾಜ್ಯ, ಅಂತರಾಷ್ಟ್ರೀಯ ಜಾಲ ಎಂದ ಸಚಿವರು ಇಂದ್ರಜಿತ್ ಅವರಿಗೆ ರಕ್ಷಣೆ ಇದ್ದೆ ಇದೆ ಅವರು ತನಿಖೆಗೆ ಸಹಕಾರ ನೀಡಬೇಕು ಯಾರ ಬಗ್ಗೆಯೂ ಅವರಿಗೆ ಭಯ ಬೇಡ ಅವರಿಗೆ ಪೊಲೀಸ್ ಇಲಾಖೆ ಸಂಪೂರ್ಣ ರಕ್ಷಣೆಯ ವ್ಯವಸ್ಥೆ ಮಾಡುತ್ತೆ.
ಈ ಜಾಲವನ್ನ ಬಗ್ಗು ಬಡಿಯಲು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನ ಬಲಿಯಾಗದಿರಲು ಅವರ ಸಹಕಾರದ ಬೇಕಿದೆ ಬಹಳ ದಿನಗಳಿಂದ ದಂಧೆಯ ಸೈಡ್ ಆಕ್ಟರ್ ಸಿಗ್ತಿದ್ರು ಈಗ ಮೇನ್ ಆಕ್ಟ್ರು ಸಿಗ್ತಾರಾ ನೋಡ್ಬೇಕು ಎಂದು ಹೇಳಿದ ಸಚಿವ ಡ್ರಗ್ ಮಾಫಿಯಾದ ತನಿಖೆಯನ್ನ ಪೊಲೀಸರು ಗಂಭೀರವಾಗಿ ನಡೆಸುತ್ತಿದ್ದಾರೆ.
ಈ ರಾಕೆಟ್ ನಲ್ಲಿ ಯಾರಿದ್ದಾರೆ, ವ್ಯಾಪಾರ ಯಾರದ್ದು ಎಂಬುದು ತನಿಖೆಯ ಬಳಿಕ ತಿಳಿಲಿದೆ ಎಂದು ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State government: ರಾಜ್ಯ ಸರಕಾರಕ್ಕೆ ಎನ್ಸಿಬಿ ನೋಟಿಸ್?
Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ