ನಿವೃತ್ತಿ ಜೀವನಕ್ಕಾಗಿ ಎಸ್ಸಿಎಸ್ಎಸ್ ಉಳಿತಾಯ ಯೋಜನೆ
Team Udayavani, Nov 15, 2020, 6:14 AM IST
ನಿವೃತ್ತ ಜೀವನದ ಆರ್ಥಿಕ ಈಡೇರಿಕೆಗಾಗಿ ಸಾಕಷ್ಟು ಮೊದಲೇ ಆಲೋಚಿಸುವುದು ಉತ್ತಮ. ವರ್ಷದಿಂದ ವರ್ಷಕ್ಕೆ ನಿವೃತ್ತರು ಎದುರಿಸುತ್ತಿರುವ ಸಮಸ್ಯೆಗಳು ಜಟಿಲವಾಗುತ್ತಿದೆ. ಆದುದರಿಂದ ನಿವೃತ್ತಿ ನಿಧಿಯ ಕುರಿತು ಹೆಚ್ಚಿನವರು ಗಮನ ಹರಿಸುತ್ತಿದ್ದಾರೆ. ಹೂಡಿಕೆಗೆ ಹಲವಾರು ಮಾರ್ಗಗಳಿದ್ದರೂ ಸುರಕ್ಷಿತ ಹೂಡಿಕೆಯೇ ಹೆಚ್ಚಿನವರ ಆದ್ಯತೆಯಾಗಿರುತ್ತದೆ.
ಹಿರಿಯ ನಾಗರಿಕರು ಸಾಮಾನ್ಯವಾಗಿ ಬ್ಯಾಂಕ್ ಎಫ್ಡಿಎಸ್, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್), ಪ್ರಧಾನ್ ಮಂತ್ರಿ ವಯಾ ವಂದನ ಯೋಜನೆ (ಪಿಎಂವಿವಿವೈ), ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ಸಿಎಸ್ಎಸ್) ಮುಂತಾದ ಹೂಡಿಕೆಗಳನ್ನು ಪರಿಗಣಿಸುತ್ತಾರೆ.
ಸರಕಾರಿ ಬೆಂಬಲಿತ ಯೋಜನೆಗಳು ಹೆಚ್ಚು ಸುರಕ್ಷಿತ
ಸರಕಾರಿ ಬೆಂಬಲಿತ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಮ್ಯೂಚುವಲ್ ಫಂಡ್ಗಳು ಅಥವಾ ಎಫ್ಡಿಗಳಿಗಿಂತ ಭಿನ್ನವಾದ ಹೂಡಿಕೆ ಅವಕಾಶಗಳು ಸರಕಾರದ ಯೋಜನೆಗಳಲ್ಲಿರುತ್ತವೆ. ಇದರಲ್ಲಿ 5 ವರ್ಷಗಳ ಕಾಲ ಹೂಡಿಕೆ ಮಾಡಬಹುದು, ಅದನ್ನು ಹೆಚ್ಚುವರಿ ಮೂರು ವರ್ಷಗಳವರೆಗೆ ವಿಸ್ತರಿಸಬಹುದು.
ವಾರ್ಷಿಕ ಶೇಕಡಾ 7.4ರಷ್ಟು ಬಡ್ಡಿ
ಪ್ರಸ್ತುತ, ಹಿರಿಯ ನಾಗರಿಕರು ಎಸ್ಸಿಎಸ್ಎಸ್ನಲ್ಲಿ ವಾರ್ಷಿಕ ಶೇ.7.4 ರಷ್ಟು ಬಡ್ಡಿದರವನ್ನು ಪಡೆಯುತ್ತಾರೆ ಮತ್ತು ಅದನ್ನು ತ್ತೈಮಾಸಿಕದಲ್ಲಿ ಲೆಕ್ಕಹಾಕಿ ಖಾತೆಗೆ ಜಮಾ ಮಾಡಲಾಗುತ್ತದೆ.
ಅವಧಿಗೂ ಮುನ್ನ ಹಿಂಪಡೆಯಬಹುದು
ಎಸ್ಸಿಎಸ್ಎಸ್ನಲ್ಲಿ ಅವಧಿ ಪೂರ್ಣಗೊಳ್ಳುವ ಮೊದಲೇ ಹಣವನ್ನು ಹಿಂಪಡೆಯಲು ಅವಕಾಶವಿದೆ. ಆದರೆ ಖಾತೆ ಆರಂಭಿಸಿದ ದಿನಾಂಕದಿಂದ ಎರಡು ವರ್ಷಗಳು ಪೂರ್ಣಗೊಳ್ಳುವ ಮೊದಲು ಹೂಡಿಕೆದಾರರು ಯೋಜನೆಯಿಂದ ನಿರ್ಗಮಿಸಿದರೆ ಠೇವಣಿ ಮೊತ್ತದ ಶೇ.1.5ರಷ್ಟು ದಂಡ ವಿಧಿಸಲಾಗುತ್ತದೆ. ಹಾಗೆಯೇ 2 ವರ್ಷಳಿಂದ 5 ವರ್ಷಗಳ ನಡುವಿನ ಅಂತರದಲ್ಲಿ ನಿರ್ಗಮಿಸಿದರೆ ಶೇ. 1ರಷ್ಟು ದಂಡ ವಿಧಿಸಲಾಗುತ್ತದೆ.
ಖಾತೆದಾರನ ಸಾವು ಸಂಭವಿಸಿದರೆ ?
ಒಂದು ವೇಳೆ ಎಸ್ಸಿಎಸ್ಎಸ್ ಖಾತೆಯಲ್ಲಿ ಹಣ ಹೂಡಿಕೆದಾರರ ಮರಣ ಸಂಭವಿಸಿದರೆ, ಎಲ್ಲ ಮುಕ್ತಾಯದ ಲಾಭಗಳನ್ನು ಕಾನೂನುಬದ್ಧ ಉತ್ತರಾಧಿಕಾರಿ/ನಾಮಿನಿಗೆ ವರ್ಗಾಯಿಸಲಾಗುತ್ತದೆ. ಸಾವಿನ ಹಕ್ಕುಗಳ ಸಂದರ್ಭದಲ್ಲಿ, ಖಾತೆ ಮುಚ್ಚುವ ಕಾರ್ಯವಿಧಾನವನ್ನು ಕೈಗೊಳ್ಳಲು ನಾಮಿನಿ ಅಥವಾ ಕಾನೂನು ಉತ್ತರಾಧಿಕಾರಿ ನಿಗದಿತ ಅರ್ಜಿ ನಮೂನೆಯಲ್ಲಿ ಮರಣ ಪ್ರಮಾಣಪತ್ರದ ಜತೆಗೆ ಲಿಖೀತ ವಿನಂತಿಯನ್ನು ಭರ್ತಿ ಮಾಡಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು