ಶಿವಮೊಗ್ಗ: ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್
Team Udayavani, Oct 1, 2022, 11:20 PM IST
ಶಿವಮೊಗ್ಗ: ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಗೆ ಮೀಸಲಾತಿ ನಿಗದಿಪಡಿಸಿ ಸರಕಾರ ಹೊರಡಿಸಿದ್ದ ಅಧಿಸೂಚನೆಗೆ ಶುಕ್ರವಾರ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಮೀಸಲಾತಿ ಪ್ರಶ್ನಿಸಿ ಸಲ್ಲಿಕೆಯಾಗಿರುವ ತಕರಾರು ಅರ್ಜಿ ವಿಚಾರಣೆಯನ್ನು ಅ. 6ಕ್ಕೆ ಮುಂದೂಡಲಾಗಿದ್ದು, ಈ ಅರ್ಜಿ ಇತ್ಯರ್ಥಪಡಿಸುವ ವರೆಗೆ ಪ್ರಾದೇಶಿಕ ಆಯುಕ್ತರು ಮೇಯರ್ ಚುನಾವಣೆಯ ಯಾವುದೇ ಪ್ರಕ್ರಿಯೆ ನಡೆಸುವಂತಿಲ್ಲ.
ಶಿವಮೊಗ್ಗ ನಗರಸಭೆ ಪಾಲಿಕೆ ಯಾಗಿ ಮೇಲ್ದರ್ಜೆಗೇರಿದ ಬಳಿಕ ಮೇಯರ್ ಸ್ಥಾನ ಎಸ್ಟಿ ಸಮುದಾ ಯಕ್ಕೆ ಒಮ್ಮೆಯೂ ಮೀಸಲಾತಿ ನಿಗದಿ ಯಾಗಿಲ್ಲ ಎಂದು ಸದಸ್ಯ ಡಿ. ನಾಗರಾಜ್ ಕೋರ್ಟ್ ಮೆಟ್ಟಿಲೇರಿದ್ದರು.