ಜಮೀನು ವಿವಾದ: ಭಾವನಿಂದ ಅಳಿಯನ ಮೇಲೆ ಗುಂಡಿನ ದಾಳಿ ! ಆರೋಪಿಗಾಗಿ ಪೋಲೀಸರ ಶೋಧ
ದಂಪತಿ ಮೇಲೆ ಹಾಡಹಗಲೇ ಗುಂಡಿನ ದಾಳಿ
Team Udayavani, Aug 8, 2020, 7:16 PM IST
ಬೆಳಗಾವಿ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಭಾವ ತನ್ನ ಅಕ್ಕನ ಮಗ ಸೇರಿ ದಂಪತಿ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿದ ಘಟನೆ ಶನಿವಾರ ಮಧ್ಯಾಹ್ನ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ.
ಅಂಬೇವಾಡಿ ಗ್ರಾಮದ ಘಗೇಶ್ವರ ಗಲ್ಲಿಯ ಅಮೀತ ಪಾವಲೆ(48) ಹಾಗೂ ನೀತಾ ಪಾವಲೆ ಎಂಬವರ ಮೇಲೆ ಗುಂಡಿನ ದಾಳಿ ನಡೆದಿದೆ. ದಂಪತಿ ಗಾಯಗೊಂಡಿದ್ದು, ಕೂಡಲೇ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡು ಹಾರಿಸಿದ ಆರೋಪಿ ನವೀನ ಗಲ್ಲಿಯ ಕಾಚು ಮೋನಿಂಗ ತರಳೆ ಪರಾರಿಯಾಗಿದ್ದಾನೆ. ಈತನ ಶೋಧಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಭಾವ ಹಾಗೂ ಅಳಿಯನ ಮಧ್ಯೆ ಜಗಳವಿತ್ತು. ಅನೇಕ ವರ್ಷಗಳಿಂದ ಇವರು ಆಗಾಗ ಜಗಳವಾಡುತ್ತಿದ್ದರು. ಅಂಬೇವಾಡಿಯ ಶಿವಾಜಿ ಗಲ್ಲಿಯಲ್ಲಿ ಅಮೀತ್ ಹಾಗೂ ಪತ್ನಿ ನೀತಾ ನಿಂತಿದ್ದರು. ಕಾಚು ತನ್ನ ಬಳಿಯಿದ್ದ ಡಬಲ್ ಬಾರ್ ಬಂದೂಕಿನಿಂದ ನಾಲ್ಕು ಗುಂಡು ಹಾರಿಸಿಸಿದ್ದಾನೆ. ಒಂದು ಗುಂಡು ಅಮೀತನ ತಲೆಗೆ ಇನ್ನೊಂದು ಹೊಟ್ಟೆಗೆ ತಗುಲಿದೆ. ಮೂರನೇ ಗುಂಡು ಅಮೀತನ ಜೊತೆಯಿದ್ದ ಪತ್ನಿ ನೀತಾಗೆ ತಗುಲಿದೆ.
ಇದರಿಂದ ಗಂಬೀರವಾಗಿ ಗಾಯಗೊಂಡಿದ್ದ ಅಮೀತ ಮತ್ತು ಆತನ ಪತ್ನಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಬಳಿಕ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಖ್ಕೆ ಗ್ರಾಮೀಣ ಎಸಿಪಿ ಶಿವಾರೆಡ್ಡಿ, ಕಾಕತಿ ಇನ್ಸಪೆಕ್ಟರ್ ಆರ್. ಹಳ್ಳೂರ, ಎಎಸ್ಐ ಫಟವರ್ಧನ್, ಸಿಬ್ಬಂದಿಗಳಾದ ಮಾರುತಿ ಪೂಜಾರಿ, ಕೆಂಪಣ್ಣ ದಿಂಡಲಕುಪ್ಪಿ, ವಿಠ್ಠಲ ಪಟ್ಟೇದ ಸೇರಿದಂತೆ ಇತರರು ಇದ್ದರು. ಈ ಕುರಿತು ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್