ಅಪ್ಪ, ಅಪ್ಪ, ಅಪ್ಪ..: ಸಿದ್ದರಾಮಯ್ಯ ಪ್ರಾಸಬದ್ಧ ವಾಗ್ದಾಳಿ ಹೀಗಿತ್ತು!
ಈಶ್ವರಪ್ಪರನ್ನಲ್ಲದೆ ಕುಮಾರಸ್ವಾಮಿಯನ್ನು ಅರೆಸ್ಟ್ ಮಾಡಬೇಕಾ?
Team Udayavani, Apr 20, 2022, 6:29 PM IST
ಮೈಸೂರು: ಬಿಜೆಪಿಯವನ ಹತ್ತಿರ 40% ಕಮಿಷನ್ ಕೇಳಿದ್ದೀಯಲ್ಲ ಈಶ್ವರಪ್ಪ.ನಿನಗೆ ನಾಚಿಕೆ ಆಗೋದಿಲ್ವೇನಪ್ಪ.ನೀನು ಸಾರ್ವಜನಿಕ ಜೀವನದಲ್ಲಿ ಇರಬೇಕೇನಪ್ಪ.ಈಶ್ವರಪ್ಪ ನೀನು ಸಾರ್ವಜನಿಕ ಜೀವನದಲ್ಲಿ ಇರಲು ಲಾಯಕ್ ಅಲ್ಲಪ್ಪ… ಇದು ವಿಧಾನ ಸಭೆ ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಾಸಬದ್ಧವಾಗಿ ವಾಗ್ದಾಳಿ ನಡೆಸಿದ ಪರಿ.
ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಸಿ, ರಾಜ್ಯ ಸರ್ಕಾರದ 40% ಕಮಿಷನ್ ಹಗರಣದ ತನಿಖೆ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಈಶ್ವರಪ್ಪ ಅವರ ಬಂಧನಕ್ಕೆ ಆಗ್ರಹಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 40% ಕಮಿಷನ್, ಜಿಎಸ್ಟಿ ಇತರ ಎಲ್ಲ ಸೇರಿ ಉಳಿಯೋದು 25%.ಇದರಿಂದ ಕ್ವಾಲಿಟಿ ಕೆಲಸ ಮಾಡಲು ಸಾಧ್ಯವಾ. ಈ ರಾಜ್ಯ ಉಳಿಯಬೇಕಾದರೆ ಬಿಜೆಪಿಯನ್ನು ಕಿತ್ತೊಗೆಯಬೇಕು.ಇಲ್ಲದಿದ್ದರೆ ಸುಳ್ಳು ಹೇಳಿ ರಾಜ್ಯ ಹಾಳು ಮಾಡುತ್ತಾರೆ ಎಂದರು.
ಈಶ್ವರಪ್ಪರನ್ನ ಯಾಕೆ ಅರೆಸ್ಟ್ ಮಾಡಬೇಕು ಅಂತಾ ಎಚ್. ಡಿ. ಕುಮಾರಸ್ವಾಮಿ ಕೇಳುತ್ತಾರೆ. ಇನ್ನೇನು ನಿಮ್ಮನ್ನು ಅರೆಸ್ಟ್ ಮಾಡಬೇಕಾ? ವಿರೋಧ ಪಕ್ಷದಲ್ಲಿ ಇರುವವರು ಮಾತನಾಡುವ ಮಾತ ಇದು.ಈಶ್ವರಪ್ಪ 40% ಕಮಿಷನ್ ಪಡೆದಿದ್ದಾರೆ. ಅದಕ್ಕೆ ಅವರನ್ನ ಬಂಧಿಸಬೇಕು. ಇದನ್ನು ಸಂತೋಷ್ ಕುಟುಂಬಸ್ಥರೇ ಹೇಳಿದ್ದಾರೆ. ಸಂತೋಷ್ ಪಾಟೀಲ್ ಬಿಜೆಪಿ ಪಾರ್ಟಿಯವನು ಎಂದರು.
ನನ್ನ ಸಾವಿಗೆ ಈಶ್ವರಪ್ಪ ಕಾರಣ ಅಂತ ಡೆತ್ ನೋಟ್ ಇದೆ. ನಾನು, ಡಿ.ಕೆ. ಶಿವಕುಮಾರ್ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದೆವು. ಸಂತೋಷ್ ತಾಯಿ ಹಾಗೂ ಅತನ ಹೆಂಡತಿ ಈಶ್ವರಪ್ಪನ್ನ ನೇತು ಹಾಕಿ ಅಂದರು. ಈಶ್ವರಪ್ಪ ಒಬ್ಬ ಕೊಲೆಗಡುಕ.ಎಫ್ಐಆರ್ ನಲ್ಲಿ ಈಶ್ವರಪ್ಪ ಮೊದಲ ಆರೋಪಿ. ಆದರೆ ಕೇಸ್ ಭ್ರಷ್ಟಾಚಾರದ ಅಡಿಯಲ್ಲಿ ಹಾಕಿಲ್ಲ.ಇದಕ್ಕೆ ನಮ್ಮ ಪ್ರತಿಭಟನೆ. ಅದಕ್ಕೆ 10 ವರ್ಷ ಶಿಕ್ಷೆ ಇದೆ.ಬೇರೆ ಸಾಮಾನ್ಯ ಜನ ಮಾಡಿದ್ರೆ ಅರೆಸ್ಟ್ ಮಾಡುತ್ತಿದ್ದರು. ಈಶ್ವರಪ್ಪನನ್ನ ಅರೆಸ್ಟ್ ಮಾಡಬೇಕೋ ಬೇಡವೋ..? ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ
ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ