ಶಿರಸಿ: ಹೆಸ್ಕಾಂ ಸಿಬ್ಬಂದಿಗಳ ಮೇಲೆ ಜೇನು ನೊಣಗಳ ದಾಳಿ
Team Udayavani, Apr 7, 2022, 2:54 PM IST
ಸಾಂದರ್ಭಿಕ ಚಿತ್ರ ಮಾತ್ರ
ಶಿರಸಿ: ತಾಲ್ಲೂಕಿನ ತಾರಗೋಡಿನಲ್ಲಿ ಹೆಸ್ಕಾಂ ಸಿಬ್ಬಂದಿಗಳ ಮೇಲೆ ಜೇನು ನೊಣಗಳು ದಾಳಿ ನಡೆಸಿದ ಘಟನೆ ಗುರುವಾರ ನಡೆಸಿದೆ.
ವಿದ್ಯುತ್ ತಂತಿ ಸರಿಪಡಿಸಲು ಕಂಬ ಏರಿದಾಗ ಜೇನು ನೊಣಗಳು ದಾಳಿ ನಡೆಸಿದೆ. ಈ ವೇಳೆ ಕರ್ತವ್ಯದಲ್ಲಿ ಇದ್ದ ನಾಗರಾಜ್ ದೇವಾಡಿಗ, ತೇಜಸ್ ಹಾಗೂ ಯೋಗೇಶ ನಾಯ್ಕ ಅವರಿಗೆ ಜೇನು ನೊಣಗಳು ಕಡಿದಿದ್ದು, ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹೆಸ್ಕಾಂ ಅಧಿಕಾರಿಗಳು ಘಟನಾ ಸ್ಥಳಕೆ ಭೇಟಿ ನೀಡಿದ್ದಾರೆ.