ಕೌಶಲ ಸಮಯರಹಿತವಾದದ್ದು, ನಮಗೆ ನಾವೇ ಕೊಟ್ಟುಕೊಳ್ಳುವ ಉಡುಗೊರೆ: ಪ್ರಧಾನಿ ಮೋದಿ
ಕೋವಿಡ್ 19 ವೈರಸ್ ಮಹಾಮಾರಿ ಸಂದರ್ಭದಲ್ಲಿಯೂ ನಾವು ನಮ್ಮ ಕಾರ್ಯ ಶೈಲಿಯೂ ಬದಲಾಗುತ್ತಿದೆ.
Team Udayavani, Jul 15, 2020, 2:16 PM IST
ನವದೆಹಲಿ: ಕೌಶಲ (ನೈಪುಣ್ಯ) ಎನ್ನುವುದು ಸಮಯರಹಿತವಾದದ್ದು, ಇದರಿಂದಾಗಿ ನೀವು ಇನ್ನೊಬ್ಬರಿಗಿಂತ ಭಿನ್ನ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗುತ್ತದೆ…ಇದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ವಿಶ್ವ ಯುವ ಕೌಶಲ ದಿನದ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ದೇಶದ ಜನತೆಯನ್ನು ಉದ್ದೇಶಸಿ ಮಾತನಾಡುತ್ತ ಹೇಳಿದರು.
ಸ್ಕಿಲ್ ಇಂಡಿಯಾ ಮಿಷನ್ ಯೋಜನೆ ಜಾರಿಗೊಳಿಸಿದ ಇಂದಿಗೆ ಐದು ವರ್ಷಗಳಾಗಿದ್ದು, ಈ ನಿಟ್ಟಿನಲ್ಲಿ ಕೌಶಲದ ಬಗ್ಗೆ ವಿವರಿಸಿದ ಅವರು, ಒಂದು ಬಾರಿ ನಿಮ್ಮಲ್ಲಿರುವ ಕೌಶಲತೆ ಇತರರಿಗಿಂತ ಭಿನ್ನವಾಗಿ ನಿಲ್ಲಿಸುತ್ತದೆ. ಕೌಶಲ ಎನ್ನುವುದು ನಮಗೆ ನಾವೇ ಕೊಟ್ಟು ಕೊಳ್ಳುವ ಉಡುಗೊರೆ. ಅದು ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಕೌಶಲ ಸಮಯರಹಿತವಾದದ್ದು, ವಿಶಿಷ್ಟವಾದದ್ದು, ಇದು ನಿಮ್ಮನ್ನು ಇತರರಿಗಿಂತ ಭಿನ್ನವಾಗಿ ರೂಪಿಸುತ್ತದೆ ಎಂದರು.
ಇಂದಿನ ವಿಶ್ವ ಯುವ ಕೌಶಲ ದಿನದ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ನನ್ನ ಶುಭಾಶಯ ತಿಳಿಸುತ್ತೇನೆ. ಈ ಕೋವಿಡ್ 19 ವೈರಸ್ ಮಹಾಮಾರಿ ಸಂದರ್ಭದಲ್ಲಿಯೂ ನಾವು ನಮ್ಮ ಕಾರ್ಯ ಶೈಲಿಯೂ ಬದಲಾಗುತ್ತಿದೆ. ಕೆಲಸದ ವಿಧಾನವೂ ಬದಲಾಗುತ್ತಿದೆ. ಅಷ್ಟೇ ಅಲ್ಲ ತಂತ್ರಜ್ಞಾನ ಕೂಡಾ ಬದಲಾಗುತ್ತಿದೆ. ಇದರಿಂದ ಪರಿಣಾಮ ಬೀರುವಂತಾಗಿದೆ. ಆದರೆ ಯುವಕರು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೊಸ ಕೌಶಲದ ಜತೆಗೆ ಬದಲಾಗಬೇಕಾಗುತ್ತದೆ ಎಂದು ಮೋದಿ ಹೇಳಿದರು.
Addressing a conclave on World Youth Skills Day. https://t.co/2KMIQg0kUy
— Narendra Modi (@narendramodi) July 15, 2020
“ಉದ್ಯಮ ಹಾಗೂ ಮಾರುಕಟ್ಟೆಗಳು ಕ್ಷಿಪ್ರವಾಗಿ ಬದಲಾಗುತ್ತಿರುವ ಇಂತಹ ಸಂದರ್ಭದಲ್ಲಿ ನಾವು ಹೇಗೆ ಪ್ರಸ್ತುತರಾಗಲು ಸಾಧ್ಯ ಎಂದು ಜನರು ಕೇಳುತ್ತಿರುತ್ತಾರೆ…ಈ ಪ್ರಶ್ನೆ ಕೋವಿಡ್ 19 ವೈರಸ್ ನಂತಹ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗುತ್ತ ಹೋಗುತ್ತೆ ಯಾಕೆಂದರೆ ಇದಕ್ಕೆ ಸ್ಕಿಲ್, ರೀ ಸ್ಕಿಲ್ ಮತ್ತು ಅಪ್ ಸ್ಕಿಲ್ (ಕೌಶಲ, ನೂತನ ಕೌಶಲ ಮತ್ತು ಕೌಶಲಾಭಿವೃದ್ದಿ) ಮಂತ್ರವೇ ಪ್ರಸ್ತುತವಾಗಿದೆ” ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ