ಐಸಿಸಿ ವಾರ್ಷಿಕ ಕ್ರಿಕೆಟ್‌ ಪ್ರಶಸ್ತಿ ಘೋಷಣೆ: ಮಂಧನಾ, ಅಫ್ರಿದಿ ವರ್ಷದ ಕ್ರಿಕೆಟಿಗರು


Team Udayavani, Jan 24, 2022, 4:17 PM IST

1-1-sds

ದುಬಾೖ: ಐಸಿಸಿಯ ವಾರ್ಷಿಕ ಪ್ರಶಸ್ತಿಗಳ ಘೋಷಣೆಯಾಗಿದೆ. 2021ನೇ ಸಾಲಿನ ಸಾಧಕ ಕ್ರಿಕೆಟಿಗರ ಯಾದಿಯನ್ನು ಪ್ರಕಟಿಸಲಾಗಿದೆ.

ವನಿತಾ ತಂಡದ ಎಡಗೈ ಓಪನರ್‌ ಸ್ಮತಿ ಮಂಧನಾ ಈ ಯಾದಿಯಲ್ಲಿರುವ ಭಾರತದ ಏಕೈಕ ಕ್ರಿಕೆಟರ್‌ ಆಗಿದ್ದಾರೆ. ಭಾರತದ ಪುರುಷ ಕ್ರಿಕೆಟಿಗರಿಗೆ ಯಾವ ಪ್ರಶಸ್ತಿಯೂ ಒಲಿದಿಲ್ಲ.

ಸ್ಮತಿ ಮಂಧನಾ ವನಿತಾ ವಿಭಾಗದ “ವರ್ಷದ ಆಟಗಾರ್ತಿ’ ಗೌರವಕ್ಕೆ ಭಾಜನರಾಗಿದ್ದು, “ರಶೆಲ್‌ ಹೇವೊ ಫ್ಲಿಂಟ್‌ ಟ್ರೋಫಿ’ಯೊಂದಿಗೆ ಸಂಭ್ರಮಿ ಸಿದ್ದಾರೆ. ಪುರುಷರ ವಿಭಾಗದ “ವರ್ಷದ ಆಟಗಾರ’ ಪ್ರಶಸ್ತಿ ಪಾಕಿಸ್ಥಾನದ ಶಾಹೀನ್‌ ಶಾ ಅಫ್ರಿದಿ ಪಾಲಾಗಿದ್ದು, “ಸರ್‌ ಗ್ಯಾರ್‌ಫೀಲ್ಡ್‌ ಟ್ರೋಫಿ’ಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮಂಧನಾ ಸಾಧನೆಯ ಹಾದಿ
ವರ್ಷದ ಐಸಿಸಿ ವನಿತಾ ಟಿ20 ತಂಡದಲ್ಲೂ ಸ್ಥಾನ ಪಡೆದಿರುವ ಸ್ಮತಿ ಮಂಧನಾಗೆ “ವರ್ಷದ ಆಟಗಾರ್ತಿ’ ರೇಸ್‌ನಲ್ಲಿ ತೀವ್ರ ಪೈಪೋಟಿ ಎದುರಾಗಿತ್ತು. ಇಂಗ್ಲೆಂಡ್‌ನ‌ ಟಾಮಿ ಬ್ಯೂಮಂಟ್‌, ದಕ್ಷಿಣ ಆಫ್ರಿಕಾದ ಲಿಜೆಲ್‌ ಲೀ, ಐರ್ಲೆಂಡ್‌ನ‌ ಗ್ಯಾಬಿ ಲೂಯಿಸ್‌ ಅವರೆಲ್ಲ ಇಲ್ಲಿನ ಪ್ರಮುಖ ಸ್ಪರ್ಧಿಗಳಾಗಿದ್ದರು. ಈ ರೇಸ್‌ನಲ್ಲಿ ಮಂಧನಾ ಜಯಶಾಲಿಯಾದರು.

ಇದು ಸ್ಮತಿ ಮಂಧನಾಗೆ ಒಲಿದ 2ನೇ “ವರ್ಷದ ಆಟಗಾರ್ತಿ’ ಗೌರವ. 2018ರಲ್ಲಿ ಮೊದಲ ಸಲ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಜತೆಗೆ ಅಂದು ವರ್ಷದ ಏಕದಿನ ಆಟಗಾರ್ತಿ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು. ಹಾಗೆಯೇ ಮಂಧನಾ ಈ ಗೌರವಕ್ಕೆ ಪಾತ್ರರಾದ ಭಾರತದ ಕೇವಲ ಎರಡನೇ ಆಟಗಾರ್ತಿ. 2007ರಲ್ಲಿ ಜೂಲನ್‌ ಗೋಸ್ವಾಮಿಗೆ ಈ ಉನ್ನತ ಪ್ರಶಸ್ತಿ ಒಲಿದು ಬಂದಿತ್ತು.

ದಕ್ಷಿಣ ಆಫ್ರಿಕಾ ಎದುರಿನ ಸೀಮಿತ ಓವರ್‌ಗಳ ತವರಿನ ಸರಣಿಯಲ್ಲಿ ಮಂಧನಾ ಗಮನಾರ್ಹ ಪ್ರದರ್ಶನ ನೀಡಿದ್ದರು. 8 ಪಂದ್ಯಗಳಲ್ಲಿ ಭಾರತ ಕೇವಲ ಎರಡರಲ್ಲಿ ಜಯಿಸಿತ್ತು, ಈ ಎರಡರಲ್ಲೂ ಮಂಧನಾ ಕೊಡುಗೆ ಮಹತ್ವದ್ದಾಗಿತ್ತು. ಕ್ರಮವಾಗಿ 80 ಹಾಗೂ 48 ರನ್‌ ಹೊಡೆದು ಅಜೇಯರಾಗಿ ಉಳಿದಿದ್ದರು. ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ ನಲ್ಲಿ 78 ರನ್‌ ಬಾರಿಸಿದರೆ, ಏಕದಿನದ ಏಕೈಕ ಗೆಲುವಿನ ವೇಳೆ 49 ರನ್‌ ಮಾಡಿದ್ದರು.

ಆಸ್ಟ್ರೇಲಿಯ ವಿರುದ್ಧ ಕ್ಯಾನ್‌ಬೆರಾ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಶತಕ (127) ಬಾರಿಸಿದ ಮಂಧನಾ ಪಂದ್ಯಶ್ರೇಷ್ಠರಾಗಿಯೂ ಮೂಡಿಬಂದಿದ್ದರು.

ಅಫ್ರಿದಿ 78 ವಿಕೆಟ್‌ ಬೇಟೆ
ಪುರುಷರ ವಿಭಾಗದಲ್ಲಿ ವರ್ಷದ ಕ್ರಿಕೆಟಿಗನೆನಿಸಿಕೊಂಡ ಶಾಹೀನ್‌ ಶಾ ಅಫ್ರಿದಿ, 2021ರ 36 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 22.20 ಸರಾಸರಿಯೊಂದಿಗೆ 78 ವಿಕೆಟ್‌ ಉರುಳಿದ ಸಾಧನೆಗೈದಿದ್ದಾರೆ. ಟೆಸ್ಟ್‌ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಅಫ್ರಿದಿ ಸಾಧನೆ ಉನ್ನತ ಮಟ್ಟದಲ್ಲಿತ್ತು. ಅದರಲ್ಲೂ ಟಿ20 ವಿಶ್ವಕಪ್‌ನಲ್ಲಿ ಹೆಚ್ಚು ಘಾತಕವಾಗಿ ಪರಿಣಮಿಸಿದ್ದರು. ಇಲ್ಲಿ ಭಾರತವನ್ನು ಸೋಲಿಸುವಲ್ಲಿ ಅಫ್ರಿದಿ ಪಾತ್ರ ಮಹತ್ವದ್ದಾಗಿತ್ತು.

ಐಸಿಸಿ ಪ್ರಶಸ್ತಿ ಪುರಸ್ಕೃತರು-2022
– ವರ್ಷದ ಕ್ರಿಕೆಟಿಗ: ಶಾಹೀನ್‌ ಶಾ ಅಫ್ರಿದಿ (ಪಾಕಿಸ್ಥಾನ)
– ಟೆಸ್ಟ್‌ ಆಟಗಾರ: ಜೋ ರೂಟ್‌ (ಇಂಗ್ಲೆಂಡ್‌)
– ಏಕದಿನ ಆಟಗಾರ: ಬಾಬರ್‌ ಆಜಂ (ಪಾಕಿಸ್ಥಾನ)
– ಟಿ20 ಆಟಗಾರ: ಮೊಹಮ್ಮದ್‌ ರಿಜ್ವಾನ್‌ (ಪಾಕಿಸ್ಥಾನ)
– ಉದಯೋನ್ಮುಖ ಆಟಗಾರ: ಜಾನೆಮನ್‌ ಮಲಾನ್‌ (ದಕ್ಷಿಣ ಆಫ್ರಿಕಾ)
– ಅಸೋಸಿಯೇಟ್‌ ದೇಶದ ಆಟಗಾರ: ಜೀಶನ್‌ ಮಕ್ಸೂದ್‌ (ಒಮಾನ್‌)
– ಅಂಪಾಯರ್‌: ಮರಾçಸ್‌ ಎರಾಸ್ಮಸ್‌ (ದಕ್ಷಿಣ ಆಫ್ರಿಕಾ)
– ವರ್ಷದ ಆಟಗಾರ್ತಿ: ಸ್ಮತಿ ಮಂಧನಾ (ಭಾರತ)
– ಏಕದಿನ ಆಟಗಾರ್ತಿ: ಲಿಜೆಲ್‌ ಲೀ (ದಕ್ಷಿಣ ಆಫ್ರಿಕಾ)
– ಟಿ20 ಆಟಗಾರ್ತಿ: ಟಾಮಿ ಬ್ಯೂಮಂಟ್‌ (ಇಂಗ್ಲೆಂಡ್‌)
– ಉದಯೋನ್ಮುಖ ಆಟಗಾರ್ತಿ: ಫಾತಿಮಾ ಸನಾ (ಪಾಕಿಸ್ಥಾನ)
– ಅಸೋಸಿಯೇಟ್‌ ದೇಶದ ಆಟಗಾರ್ತಿ: ಮೇ ಝೆಪೆಡಾ (ಆಸ್ಟ್ರಿಯಾ)

 

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.