ಸುಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಹಡಗಿನ ಸಮಸ್ಯೆ ನಿವಾರಣೆ : ತನಿಖೆ ಆರಂಭ
Team Udayavani, Mar 30, 2021, 9:46 PM IST
ಸುಯೆಜ್: ಈಜಿಫ್ಟ್ ನ ಸುಯೆಜ್ ಕಾಲುವೆಯಲ್ಲಿ ವಾರದಿಂದಲೂ ಇದ್ದ ಸಮಸ್ಯೆ ನಿವಾರಣೆಯಾಗಿದೆ. ಇದರ ಬೆನ್ನಲ್ಲೇ ದೈತ್ಯ ಎವರ್ಗಿವನ್ ಹಡಗು ಕಾಲುವೆಯಲ್ಲಿ ಅಡ್ಡಡ್ಡವಾಗಿ ಸಿಲುಕಿದ್ದರ ಹಿಂದಿನ ಕಾರಣಗಳನ್ನು ಪತ್ತೆ ಹಚ್ಚುವ ಸಲುವಾಗಿ ತನಿಖೆ ಆರಂಭವಾಗಿದೆ.
ಈಜಿಪ್ಟ್ ಸರ್ಕಾರ ನೇಮಿಸಿರುವ ತಜ್ಞರ ಸಮಿತಿ ಈ ತನಿಖೆಯನ್ನು ನಡೆಸುತ್ತಿದೆ. ಹಡಗು ಅಡ್ಡಲಾಗಿ ಸಿಕ್ಕಿಹಾಕಿಕೊಂಡಿದ್ದಕ್ಕೆ ಹಡಗಿನ ಸಿಬ್ಬಂದಿಯ ಲೋಪದೋಷ ಕಾರಣವೇ, ಹಡಗಿನಲ್ಲಿದ್ದ ತಾಂತ್ರಿಕ ದೋಷ ಕಾರಣವೇ ಎಂಬಿತ್ಯಾದಿ ವಿಚಾರಗಳನ್ನು ಸಮಿತಿ ಪತ್ತೆ ಹಚ್ಚಲಿದೆ.
ಕಾಲುವೆಯ ದಡಕ್ಕೆ ಹಡಗು ಸಿಲುಕಿಕೊಂಡಿದ್ದರಿಂದ ಹಡಗಿನ ಕೆಳಭಾಗಕ್ಕೆ ತೀವ್ರ ಹಾನಿಯಾಗಿದ್ದು, ಅದರ ಲೆಕ್ಕಾಚಾರದ ಮೇರೆಗೆ ಕೆಲವಾರು ಮಾಹಿತಿಗಳು ಸಿಗುವ ಸಾಧ್ಯತೆಗಳಿವೆ. ಹಾಗಾಗಿ, ಹಡಗಿಗೆ ಆಗಿರುವ ಹಾನಿಯನ್ನು ಮೊದಲು ಲೆಕ್ಕಹಾಕಲಾಗುವುದು ಎಂದು ಹೆಸರನ್ನೇಳಲು ಇಚ್ಛಿಸದ, ತನಿಖಾ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ :ಭಾರತ-ಚೀನಾ ಗಡಿಯಿಂದೀಚೆ ಒಂದಿಂಚೂ ಜಾಗ ಕಳೆದುಕೊಂಡಿಲ್ಲ : ಸೇನಾ ಮುಖ್ಯಸ್ಥರ ಸ್ಪಷ್ಟನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು