“ವಿಜಯ್ ಹಜಾರೆ’ಯಿಂದ ಟಿ. ನಟರಾಜನ್ ಬಿಡುಗಡೆ
Team Udayavani, Feb 12, 2021, 1:00 AM IST
ಚೆನ್ನೈ: ಆಸ್ಟ್ರೇಲಿಯ ಪ್ರವಾಸದ ವೇಳೆ ಮೂರೂ ಮಾದರಿಯ ಅಂತಾ ರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಭಾರೀ ಯಶಸ್ಸು ಗಳಿಸಿದ ವೇಗಿ ಟಿ. ನಟರಾಜನ್ ಅವರನ್ನು ಬಿಸಿಸಿಐ ಕೋರಿಕೆಯಂತೆ ತಮಿಳುನಾಡಿನ “ವಿಜಯ್ ಹಜಾರೆ’ ಏಕದಿನ ಕ್ರಿಕೆಟ್ ತಂಡದಿಂದ ಬಿಡುಗಡೆಗೊಳಿಸಲಾಗಿದೆ.
“ವಿಜಯ್ ಹಜಾರೆ ಟೂರ್ನಿ’ಯಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಬೇಕಿದ್ದ ನಟರಾಜನ್ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಬಿಸಿಸಿಐ ಸೂಚಿಸಿತ್ತು. ಈ ಬಗ್ಗೆ ತಮಿಳು ನಾಡು ಕ್ರಿಕೆಟ್ ಸಂಸ್ಥೆಗೂ ಬಿಸಿಸಿಐ ಮನವಿ ಮಾಡಿತ್ತು.
“ಬಿಸಿಸಿಐ ಮನವಿಯನ್ನು ಸ್ವೀಕರಿಸಿದ್ದು, ಅದರಂತೆ ನಟರಾಜನ್ ಅವರನ್ನು ತಮಿಳುನಾಡು ತಂಡದಿಂದ ಬಿಡುಗಡೆ ಗೊಳಿಸಲಾಗಿದೆ’ ಎಂದು ತಮಿಳುನಾಡು ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿಯ ಅಧ್ಯಕ್ಷ ಎಸ್. ವಾಸುದೇವನ್ ತಿಳಿಸಿದ್ದಾರೆ. ನಟರಾಜನ್ ಸ್ಥಾನಕ್ಕೆ ಆರ್.ಎಸ್. ಜಗನ್ನಾಥ್ ಶ್ರೀನಿವಾಸ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ದ್ವಿತೀಯ ಟೆಸ್ಟ್ : ಜೇಮ್ಸ್ ಆ್ಯಂಡರ್ಸನ್ಗೆ ರೆಸ್ಟ್ ?
ಟೀಮ್ ಇಂಡಿಯಾದ ಭರವಸೆಯ ಬೌಲರ್ ಆಗಿರುವ ನಟರಾಜನ್ ಅವರನ್ನು ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಲ್ಲಿ ಆಡಿಸುವುದು ಬಿಸಿಸಿಐ ನಿರ್ಧಾ ರವಾಗಿದೆ. ಅಥವಾ ಅವರು ಕೊನೆಯ ಎರಡು ಟೆಸ್ಟ್ಗಳಿಗೆ ಆಯ್ಕೆಯಾಗಲೂಬಹುದು. ಹೀಗಾಗಿ ವಿಶ್ರಾಂತಿಯೊಂದಿಗೆ ಸಂಪೂರ್ಣ ಫಿಟ್ನೆಸ್ ಕಾಯ್ದುಕೊಳ್ಳುವಂತೆ ನಟರಾಜನ್ ಅವರಿಗೆ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ