ಟಿ20 ನಂ.3: ಆತ್ಮವಿಶ್ವಾಸದಲ್ಲಿ ಟೀಮ್‌ ಇಂಡಿಯಾ : ಇಂದು ತೃತೀಯ ಮುಖಾಮುಖೀ


Team Udayavani, Mar 16, 2021, 6:40 AM IST

ಟಿ20 ನಂ.3: ಆತ್ಮವಿಶ್ವಾಸದಲ್ಲಿ ಟೀಮ್‌ ಇಂಡಿಯಾ : ಇಂದು ತೃತೀಯ ಮುಖಾಮುಖೀ

ಅಹ್ಮದಾ ಬಾದ್: ಟೀಮ್‌ ಇಂಡಿಯಾ ತುಂಬು ಆತ್ಮ ವಿಶ್ವಾಸದಲ್ಲಿದೆ. ಇಂಗ್ಲೆಂಡ್‌ ಎದುರಿನ ದ್ವಿತೀಯ ಟಿ20 ಪಂದ್ಯದಲ್ಲಿ ಆಚರಿಸಿದ ವಿಜಯೋತ್ಸವವೇ ಇದಕ್ಕೆ ಕಾರಣ. ಇದರಿಂದ ತಂಡದ ಉತ್ಸಾಹ ನೂತನ ಎತ್ತರ ತಲುಪಿದೆ. ಇದೇ ಹುರುಪಿನಲ್ಲಿ ಮಂಗಳವಾರ ಮೂರನೇ ಮುಖಾಮುಖೀಗೆ ಅಣಿಯಾಗಿದ್ದು, ಗೆಲುವಿನ ಲಯದಲ್ಲಿ ಸಾಗುವ ಸೂಚನೆಯನ್ನು ರವಾನಿಸಿದೆ. ಇನ್ನೊಂದೆಡೆ ಮಾರ್ಗನ್‌ ಬಳಗ ಗೆಲುವಿನ ಮಾರ್ಗಕ್ಕೆ ಮರಳಲು ಸ್ಕೆಚ್‌ ಹಾಕುತ್ತಿದೆ. ಸಮಬಲರ ಕಾದಾಟ ಸಹಜವಾಗಿಯೇ ಟಿ20 ರೋಮಾಂಚನವನ್ನು ಹೆಚ್ಚಿಸಿದೆ.

ಮೊದಲ ಪಂದ್ಯದಲ್ಲಿ ಎಲ್ಲ ವಿಭಾಗ ಗಳಲ್ಲೂ ವೈಫ‌ಲ್ಯ ಅನುಭವಿಸಿ 8 ವಿಕೆಟ್‌ ಸೋಲಿಗೆ ತುತ್ತಾಗಿದ್ದ ಭಾರತ ಮರು ಪಂದ್ಯದಲ್ಲೇ ಗೆಲುವಿನ ಹಾದಿ ಕಂಡುಕೊಂಡದ್ದು ಧನಾತ್ಮಕ ಬೆಳವಣಿಗೆ. ಇಶಾನ್‌ ಕಿಶನ್‌ ಮೊದಲ ಪಂದ್ಯದಲ್ಲೇ ನಿರ್ಭೀತ ಬ್ಯಾಟಿಂಗ್‌ ನಡೆಸಿದ್ದು, ಸೊನ್ನೆ ಸುತ್ತಿದ ಬಳಿಕ ಕೊಹ್ಲಿ ನೈಜ ಆಟಕ್ಕೆ ಕುದುರಿದ್ದು, ಬೌಲಿಂಗ್‌ನಲ್ಲಿ ನಿಯಂತ್ರಣ ಸಾಧಿಸಿದ್ದೆಲ್ಲ ಭಾರತದ ಗೆಲುವಿನ ಪ್ರಮುಖ ಅಂಶಗಳಾಗಿದ್ದವು.

ರೋಹಿತ್‌ ಬರುವರೇ?
ಟೀಮ್‌ ಇಂಡಿಯಾದ ಸದ್ಯದ ಚಿಂತೆಯೆಂದರೆ ಕೆ.ಎಲ್‌. ರಾಹುಲ್‌ ಅವರ ಸತತ ವೈಫ‌ಲ್ಯ (1 ಮತ್ತು 0). ಇದರಿಂದ ಅವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಮುಂಬೈ ಇಂಡಿಯನ್ಸ್‌ನ ಸ್ಟಾರ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ ತಮ್ಮ ಸ್ಥಾನವನ್ನು ಭದ್ರಪಡಿಸುವ ಸೂಚನೆ ನೀಡಿರುವುದರಿಂದ ಹಾಗೂ ರೋಹಿತ್‌ ಹನ್ನೊಂದರ ಬಳಗವನ್ನು ಪ್ರವೇಶಿಸುವ ಸಾಧ್ಯತೆ ಇರುವುದರಿಂದ ರಾಹುಲ್‌ ಸ್ಥಾನ ಅಲುಗಾಡುತ್ತಿರುವುದು ಸುಳ್ಳಲ್ಲ.

ನಾಯಕ ಕೊಹ್ಲಿ ನೀಡಿದ ಹೇಳಿಕೆ ಪ್ರಕಾರ ರೋಹಿತ್‌ಗೆ ಮೊದಲೆರಡು ಪಂದ್ಯಗಳಲ್ಲಷ್ಟೇ ವಿಶ್ರಾಂತಿ ನೀಡಲಾಗಿದೆ. ರೋಹಿತ್‌ ಸೋಮವಾರ ಕಠಿನ ಅಭ್ಯಾಸ ನಡೆಸಿದ್ದನ್ನು ಕಂಡಾಗ 3ನೇ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತ ಎಂದೇ ಭಾವಿಸಬೇಕಾಗುತ್ತದೆ. ಅಕಸ್ಮಾತ್‌ ರೋಹಿತ್‌ ವಿಶ್ರಾಂತಿ ಮುಂದುವರಿದರಷ್ಟೇ ರಾಹುಲ್‌ ಸ್ಥಾನ ಉಳಿಸಿಕೊಳ್ಳಬಹುದು ಎಂಬುದು ಸದ್ಯದ ಲೆಕ್ಕಾಚಾರ. ಅಂದಮಾತ್ರಕ್ಕೆ ರಾಹುಲ್‌ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆ ಇರಲಿಕ್ಕಿಲ್ಲ. ಇಲ್ಲಿ ಅಯ್ಯರ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅವರನ್ನು ಗಟ್ಟಿಗೊಳಿಸುವುದು ತಂಡದ ಯೋಜನೆ ಆಗಿರಲಿದೆ.

ರವಿವಾರ ಸೂರ್ಯಕುಮಾರ್‌ ಟೀಮ್‌ ಇಂಡಿಯಾ ಪ್ರವೇಶಿಸಿದರೂ ಅವರಿಗೆ ಬ್ಯಾಟಿಂಗ್‌ ಅವಕಾಶ ಸಿಕ್ಕಿರಲಿಲ್ಲ. ಬ್ಯಾಟಿಂಗ್‌ ಸಾಮರ್ಥ್ಯ ನೋಡದೆ ಅವರನ್ನು ತಂಡದಿಂದ ಕೈಬಿಡುವುದು ಕೂಡ ಸೂಕ್ತವಲ್ಲ.

ಬೌಲಿಂಗ್‌ ಬದಲಾವಣೆ ಅಸಂಭವ
ಕೆಳ ಕ್ರಮಾಂಕದ ವರೆಗೂ ಬ್ಯಾಟಿಂಗ್‌ ಸಾಮರ್ಥ್ಯ ಹೊಂದಿರುವ ಇಂಗ್ಲೆಂಡನ್ನು 164ಕ್ಕೆ ನಿಯಂತ್ರಿಸಿದ್ದು ಭಾರತದ ಬೌಲರ್‌ಗಳ ಹೆಚ್ಚುಗಾರಿಕೆ. ಭುವನೇಶ್ವರ್‌, ಸುಂದರ್‌ ಮತ್ತು ಠಾಕೂರ್‌ ಪರಿಣಾಮಕಾರಿ ದಾಳಿ ಸಂಘಟಿಸಿದ್ದರು. ಫಿಟ್‌ನೆಸ್‌ಗೆ ಮರಳಿದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ 4 ಓವರ್‌ ಎಸೆಯುವ ಸಾಮರ್ಥ್ಯ ತೋರಿರುವುದು ಕೂಡ ಉತ್ತಮ ಬೆಳವಣಿಗೆ. ರವಿವಾರದ ಡೆತ್‌ ಓವರ್‌ಗಳಲ್ಲಿ ಭಾರತ ಉತ್ತಮ ಹಿಡಿತ ಸಾಧಿಸಿತ್ತು.

ಹೀಗಾಗಿ ಆತಿಥೇಯರ ಬೌಲಿಂಗ್‌ ಸರದಿಯಲ್ಲಿ ಬದಲಾವಣೆ ಗೋಚರಿಸುವ ಸಾಧ್ಯತೆ ಕಡಿಮೆ. ಸೈನಿ, ಚಹರ್‌ ಅವರೆಲ್ಲ ಸದ್ಯ ಕಾಯಬೇಕಾದುದು ಅನಿವಾರ್ಯ. ಸರಣಿಯಲ್ಲಿ ಮೇಲುಗೈ ಸಾಧಿಸಿದರೆ ಇವರಿಗೆ ಹಂತ ಹಂತವಾಗಿ ಅವಕಾಶ ಸಿಗಬಹುದು.

ಇಂಗ್ಲೆಂಡ್‌ ಗಾಯಗೊಂಡ ಹುಲಿ
ದ್ವಿತೀಯ ಪಂದ್ಯದಲ್ಲಿ ಎಡವಿದರೂ ನಂ.1 ಖ್ಯಾತಿಯ ಇಂಗ್ಲೆಂಡ್‌ ಅಪಾ ಯಕಾರಿ ತಂಡ ಎಂಬುದಲ್ಲಿ ಎರಡು ಮಾತಿಲ್ಲ. ಅದೀಗ ಗಾಯಗೊಂಡ ಹುಲಿ. ರಾಯ್‌ ಅವರಂತೂ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಜತೆಗೆ ಮಾಲನ್‌, ಮಾರ್ಗನ್‌, ಸ್ಟೋಕ್ಸ್‌, ಬಟ್ಲರ್‌… ಎಲ್ಲರೂ ಬಿಗ್‌ ಹಿಟ್ಟರ್. ಆಂಗ್ಲರಲ್ಲಿ ತಿರುಗಿ ಬೀಳುವ ತಾಕತ್ತು ಇದ್ದೇ ಇದೆ.

ದ್ವಿತೀಯ ಪಂದ್ಯದಲ್ಲಿ ಮಾರ್ಕ್‌ ವುಡ್‌ ಗಾಯಾಳಾಗಿ ಹೊರಗುಳಿದದ್ದು ಇಂಗ್ಲೆಂಡಿಗೆ ಹಿನ್ನಡೆಯಾಗಿ ಪರಿಣಮಿಸಿತ್ತು. ವುಡ್‌ ಮಂಗಳವಾರ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಮೊಯಿನ್‌ ಅಲಿ ಕೂಡ ಕಾಯುತ್ತಿದ್ದಾರೆ.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.