ಐಎಸ್ ಐ ರಣತಂತ್ರ: ತಾಲಿಬಾನ್ ನಾಯಕ ಹೈಬತುಲ್ಲಾ ಪಾಕ್ ಸೇನಾ ವಶದಲ್ಲಿ? ಗುಪ್ತಚರ ಇಲಾಖೆ
2016ರ ಮೇ ತಿಂಗಳಿನಲ್ಲಿ ಹೈಬತುಲ್ಲಾ ನನ್ನು ತಾಲಿಬಾನ್ ಮುಖ್ಯಸ್ಥನನ್ನಾಗಿ ನೇಮಕ ಮಾಡಲಾಗಿತ್ತು.
Team Udayavani, Aug 20, 2021, 4:30 PM IST
ಇಸ್ಲಾಮಾಬಾದ್/ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಧಿಕಾರವನ್ನು ತಮ್ಮ ವಶಕ್ಕೆ ಪಡೆದುಕೊಂಡ ನಂತರ ತಾಲಿಬಾನ್ ಪರಮೋಚ್ಛ ನಾಯಕ ಹೈಬತುಲ್ಲಾ ಅಕುಂಡ್ಜಾದ ಇನ್ನೂ ಯಾಕೆ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವುದಾಗಿ ವರದಿಯೊಂದು ತಿಳಿಸಿದೆ.
ಇದನ್ನೂ ಓದಿ:ಅಫ್ಘಾನ್: ಭಾರತದ ಎರಡು ರಾಯಭಾರ ಕಚೇರಿಗೆ ನುಗ್ಗಿ ಕಾರನ್ನು ಕೊಂಡೊಯ್ದ ತಾಲಿಬಾನ್!
ರಹಸ್ಯವಾಗಿ ಬಂಧನದಲ್ಲಿರುವ ಹೈಬತುಲ್ಲಾ ಕುರಿತು ವಿದೇಶಿ ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯನ್ನು ಪರಿಶೀಲಿಸುತ್ತಿರುವ ಭಾರತದ ಸರ್ಕಾರ ಮಾಹಿತಿಯೊಂದನ್ನು ಹೊರಹಾಕಿದೆ. ತಾಲಿಬಾನ್ ವರಿಷ್ಠ ನಾಯಕ ಹೈಬತುಲ್ಲಾ ಪಾಕಿಸ್ತಾನದ ಸೇನೆಯ ಹಿಡಿತದಲ್ಲಿರುವ ಸಾಧ್ಯತೆ ಹೆಚ್ಚಿದೆ ಎಂಬುದಾಗಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಹೇಳಿದೆ.
ಕಳೆದ ಆರು ತಿಂಗಳಿನಿಂದ ತಾಲಿಬಾನ್ ಬಂಡುಕೋರ, ಭಯೋತ್ಪಾದಕ ಹೈಬತುಲ್ಲಾ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಮೇ ತಿಂಗಳಿನಲ್ಲಿ ನಡೆದ ಈದ್ ಉಲ್ ಫಿತರ್ ಸಂದರ್ಭದಲ್ಲಿ ಮಾತ್ರ ಹೈಬತುಲ್ಲಾ ಕೊನೆಯದಾಗಿ ಬಹಿರಂಗ ಹೇಳಿಕೆ ನೀಡಿರುವುದಾಗಿ ವರದಿ ವಿವರಿಸಿದೆ.
ಈ ಪರಿಸ್ಥಿತಿಯನ್ನು ಪಾಕಿಸ್ತಾನ ಹೇಗೆ ನಿಭಾಯಿಸಲಿದೆ ಎಂಬ ಕುತೂಹಲ ಭಾರತಕ್ಕೂ ಇದ್ದಿರುವುದಾಗಿ ಮೂಲಗಳು ಹೇಳಿವೆ. ತಾಲಿಬಾನ್ ನಾಯಕ ಅಖ್ತರ್ ಮನ್ಸೂರ್ ನನ್ನು ಅಮೆರಿಕ ಡ್ರೋನ್ ದಾಳಿ ನಡೆಸಿ ಹತ್ಯೆಗೈದ ಬಳಿಕ 2016ರ ಮೇ ತಿಂಗಳಿನಲ್ಲಿ ಹೈಬತುಲ್ಲಾ ನನ್ನು ತಾಲಿಬಾನ್ ಮುಖ್ಯಸ್ಥನನ್ನಾಗಿ ನೇಮಕ ಮಾಡಲಾಗಿತ್ತು.
ಎಎಫ್ ಪಿ ವರದಿಯಲ್ಲಿ ವಿಶ್ಲೀಷಿಸಿದಂತೆ, ಹೈಬತುಲ್ಲಾ(50ವರ್ಷ) ತಾಲಿಬಾನ್ ಬಂಡುಕೋರ ಎಂಬುದಕ್ಕಿಂತ ಹೆಚ್ಚಾಗಿ ಕಾನೂನು ತಜ್ಞ ಎಂದೇ ಗುರುತಿಸಿಕೊಂಡಿದ್ದಾರೆ. ಈತನನ್ನು ನಂಬಿಕಸ್ಠ ಕಮಾಂಡರ್ ಎಂದು ಕೂಡಾ ಕರೆಯಲಾಗುತ್ತದೆ. ಲಷ್ಕರ್ ಎ ತೊಯ್ಬಾ ಹಾಗೂ ಜೈಶ್ ಎ ಮೊಹಮ್ಮದ್ ನಂತಹ ಉಗ್ರಗಾಮಿ ಸಂಘಟನೆಗಳು ತಾಲಿಬಾನ್ ಜತೆ ಕೈಜೋಡಿಸುತ್ತಿರುವ ಕುರಿತು ಭಾರತಕ್ಕೆ ಮಾಹಿತಿ ಲಭ್ಯವಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ
Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ
Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ