ನಿಜಕ್ಕೂ ಮೇಲುಗೈ ಸಾಧಿಸಿದ್ದು ಯಾರು? ಪಂಜ್ ಶೀರ್ ಕಣಿವೆಯ ಯುದ್ಧದಲ್ಲಿ ಏನಾಯ್ತು…

ಎಲ್ಲಾ ಪ್ರಜೆಗಳಿಗೂ ಸ್ವಾತಂತ್ರ್ಯ ಮತ್ತು ಹಕ್ಕು ಅಗತ್ಯವಿದೆ.

ನಾಗೇಂದ್ರ ತ್ರಾಸಿ, Sep 4, 2021, 11:40 AM IST

ನಿಜಕ್ಕೂ ಮೇಲುಗೈ ಸಾಧಿಸಿದ್ದು ಯಾರು? ಪಂಜ್ ಶೀರ್ ಕಣಿವೆಯ ಯುದ್ಧದಲ್ಲಿ ಏನಾಯ್ತು…

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿರುವ ನಡುವೆ ಕಾಬೂಲ್ ಉತ್ತರಕ್ಕಿರುವ ಪಂಜ್ ಶೀರ್ ಕಣಿವೆ ಪ್ರದೇಶವನ್ನು ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಮೂಲಗಳು ತಿಳಿಸಿವೆ. ಏತನ್ಮಧ್ಯೆ ಪಂಜ್ ಶೀರ್ ಕಣಿವೆ ಮುಖಂಡರು ತಾಲಿಬಾನ್ ಹೇಳಿಕೆಯನ್ನು ಅಲ್ಲಗಳೆದಿದೆ. ನಿಜಕ್ಕೂ ಪಂಜ್ ಶೀರ್ ನಲ್ಲಿ ಏನು ನಡೆಯುತ್ತಿದೆ ಎಂಬುದರ ಕಿರುನೋಟ ಇಲ್ಲಿದೆ…

ತಾಲಿಬಾನ್ ಪಡೆಗಳು ಪಂಜ್ ಶೀರ್ ನ ಆಯಕಟ್ಟಿನ ಸ್ಥಳದಲ್ಲಿ ಠಿಕಾಣಿ ಹೂಡಿದ್ದು, ಹಿಂದಿನ ಸರ್ಕಾರದ ಹಿರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಬೆನ್ನತ್ತಿದ್ದು, ಅವರಿಗೆ ಶಿಕ್ಷಿಸುವ ಕಾರ್ಯದಲ್ಲಿ ಮಗ್ನವಾಗಿರುವುದಾಗಿ ವರದಿ ತಿಳಿಸಿದೆ. ತಾಲಿಬಾನ್ ಆಡಳಿತವನ್ನು ವಿರೋಧಿಸುತ್ತಿರುವ ಪಂಜ್ ಶೀರ್ ನಲ್ಲಿ ಸ್ಥಳೀಯ ಮುಖಂಡ ಅಹ್ಮದ್ ಮಸೌದ್ ಹಾಗೂ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ನೇತೃತ್ವದಲ್ಲಿ ಪ್ರತಿದಾಳಿ ನಡೆಯುತ್ತಿದೆ.

ಪಂಜ್ ಶೀರ್ ಕಣಿವೆಯ ರಾಷ್ಟ್ರೀಯ ಪ್ರತಿರೋಧ ಪಡೆ (ಎನ್ ಆರ್ ಎಫ್) ತಾಲಿಬಾನ್ ಗೆ ಸಡ್ಡು ಹೊಡೆದಿದೆ. ಆದರೆ ಪಂಜ್ ಶೀರ್ ಕಣಿವೆಯನ್ನು ವಶಕ್ಕೆ ಪಡೆದಿರುವುದಾಗಿ ತಾಲಿಬಾನ್ ಬಂಡುಕೋರರು ಹೇಳಿಕೆ ನೀಡಿದ್ದು, ಎನ್ ಆರ್ ಎಫ್ ಪಡೆ ಹಿನ್ನಡೆ ಕಂಡಿರುವುದಾಗಿ ತಿಳಿಸಿದೆ.

ಪಂಜ್ ಶೀರ್ ಕಣಿವೆಯ ಎಲ್ಲಾ ಮಾರ್ಗಗಳು ನಮ್ಮ ನಿಯಂತ್ರಣದಲ್ಲಿಯೇ ಇದೆ ಎಂದು ಎನ್ ಆರ್ ಎಫ್ ಹೇಳಿಕೊಂಡಿದ್ದು, ಉಭಯ ಪಡೆಗಳ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ತಾಲಿಬಾನ್ ನ ನೂರಾರು ಬಂಡುಕೋರರು ಜೀವಕಳೆದುಕೊಂಡಿರುವುದಾಗಿ ವಿವರಿಸಿದೆ.

ತಾಲಿಬಾನ್ ಗಿಂತ ಎನ್ ಆರ್ ಎಫ್ ಎಷ್ಟು ಬಲಶಾಲಿ?

ಸ್ಥಳೀಯ ಎನ್ ಆರ್ ಎಫ್ ಪಡೆಯಲ್ಲಿ 10ರಿಂದ 15 ಸಾವಿರದಷ್ಟು ಸೈನಿಕರಿದ್ದಾರೆ. ಇವರೆಲ್ಲ ಅಹ್ಮದ್ ಮಸೌದ್ ಸಂಘಟಿಸಿದ ಬುಡಕಟ್ಟು ಸೈನಿಕರು. ಇದರಲ್ಲಿ ಅಮ್ರುಲ್ಲಾ ಸಲೇಹ್ ಮತ್ತು ಸಣ್ಣ ಬುಡಕಟ್ಟು ಜನಾಂಗದ ನಾಯಕರು ಸೇರಿದ್ದು, ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಕೆಲವರು ಜೀವ ಕಳೆದುಕೊಂಡಿದ್ದಾರೆ. ಆದರೆ ಈವರೆಗೂ ತಾಲಿಬಾನ್ ಪಡೆಗೆ ಯಾರೂ ಸೇರ್ಪಡೆಗೊಂಡಿಲ್ಲ ಎಂದು ಎನ್ ಆರ್ ಎಫ್ ತಿಳಿಸಿದೆ.

32ವರ್ಷದ ಅಹ್ಮದ್ ಮಸೌದ್ ಪ್ರಮುಖ ಮುಖಂಡರಾಗಿ ಹೊರಹೊಮ್ಮಿದ್ದಾರೆ. ಸೋವಿಯತ್ ಒಕ್ಕೂಟದ ವಿರುದ್ಧ ಹೋರಾಟ ನಡೆಸಿ ಜಯಶೀಲರಾಗಿದ್ದ ಅಹ್ಮದ್ ಶಾ ಮಸೌದ್ ಅಫ್ಘಾನಿಸ್ತಾನದ ಹೀರೋ ಆಗಿ ಬಿಂಬಿತರಾಗಿದ್ದರು. ನಂತರ ಅಹ್ಮದ್ ಶಾ 1990ರಲ್ಲಿ ತಾಲಿಬಾನ್ ಆಡಳಿತದ ವಿರುದ್ಧವೂ ಸಡ್ಡು ಹೊಡೆದಿದ್ದರು. ಹೀಗೆ ತಾಲಿಬಾನ್ ಆಡಳಿತಕ್ಕೆ ಸತತ ವಿರೋಧ ವ್ಯಕ್ತಪಡಿಸುತ್ತಿದ್ದ ಅಹ್ಮದ್ ಶಾ ಅವರನ್ನು 2001ರಲ್ಲಿ 9/11ರ ದಾಳಿ ನಡೆಯುವ ಎರಡು ದಿನದ ಮುನ್ನ ಶಾ ಅವರನ್ನು ತಾಲಿಬಾನ್, ಅಲ್ ಖೈದಾ ಉಗ್ರರು ಸಂಚು ನಡೆಸಿ ಹತ್ಯೆಗೈದಿದ್ದರು. ಇದೀಗ ತಂದೆ ಅಹ್ಮದ್ ಶಾ ಸ್ಥಾನದಲ್ಲಿ ಅಹ್ಮದ್ ಮಸೌದ್ ತಾಲಿಬಾನ್ ವಿರುದ್ಧದ ಹೋರಾಟ ಮುಂದುವರಿಸಿದ್ದಾರೆ.

ಅಹ್ಮದ್ ಮಸೌದ್ ಲಂಡನ್ ನ ಕಿಂಗ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದು, ನಂತರ ಸ್ಯಾಂಡುರಸ್ಟ್ ಮಿಲಿಟರಿ ಅಕಾಡೆಮಿಯಲ್ಲಿ ಪದವಿ ಗಳಿಸಿದ್ದರು. ಪಂಜ್ ಶೀರ್ ಕಣಿವೆ ಪ್ರತಿರೋಧ ಒಡ್ಡುತ್ತಿರುವ ಪಡೆಗಳು ನಿಪುಣರಾಗಿದ್ದು, ಶಸ್ತ್ರಾಸ್ತ್ರಗಳನ್ನು ಹೊಂದಿರುವ ಬಗ್ಗೆ ಫೋಟೋಗಳು ಹರಿದಾಡುತ್ತಿರುವುದಾಗಿ ವರದಿ ವಿವರಿಸಿದೆ.

ಎನ್ ಆರ್ ಎಫ್ ಗೆ ಬೇಕಾಗಿರೋದೇನು?

ಅಫ್ಘಾನಿಸ್ತಾನದಲ್ಲಿ ಪ್ರಜಾಸತ್ತಾತ್ಮಕವಾದ ಆಡಳಿತ ನೀಡುವ ರಾಜಕೀಯ ಪಕ್ಷ ಬೇಕಾಗಿದೆ. ಸಿಎನ್ ಎನ್ ಗೆ ನೀಡಿರುವ ಸಂದರ್ಶನ ನೀಡಿರುವ ಮಸೌದ್, ಪ್ರಜಾಪ್ರಭುತ್ವ ನಮಗೆ ಬೇಕಾಗಿದೆ. ಎಲ್ಲಾ ಪ್ರಜೆಗಳಿಗೂ ಸ್ವಾತಂತ್ರ್ಯ ಮತ್ತು ಹಕ್ಕು ಅಗತ್ಯವಿದೆ. ಇದರಲ್ಲಿ ಯಾವುದೇ ಧರ್ಮ ಮತ್ತು ಲಿಂಗಬೇಧಕ್ಕೆ ಅವಕಾಶ ಇರಬಾರದು ಎಂದು ತಿಳಿಸಿದ್ದರು.

ತಾಲಿಬಾನ್ ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸಿದೆ. ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಅಫ್ಘಾನಿಸ್ತಾನದಲ್ಲಿರುವ ಪುಶ್ತುನ್ ಸಮುದಾಯಯೇತರ ಜನರ ಸ್ವಾತಂತ್ರ್ಯ ಮತ್ತು ಹಕ್ಕುಗಳ ಬಗ್ಗೆ ಕಳವಳಕಾರಿಯಾಗಿದೆ ಎಂದು ಮಸೌದ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ತಾಲಿಬಾನ್ ಗೆ ಷರಿಯಾ ಕಾನೂನು ಬೇಕಾಗಿದೆ:

ಅಧಿಕಾರಕ್ಕೆ ಏರಿದ ತಾಲಿಬಾನ್ ಈಗಾಗಲೇ ಅಫ್ಘಾನಿಸ್ತಾನ ಇಸ್ಲಾಮಿಕ್ ಎಮಿರೇಟ್ಸ್ ಎಂದು ಘೋಷಿಸಿದೆ. ಅಫ್ಘಾನಿಸ್ತಾನದಲ್ಲಿ ಇರುವ ಪ್ರತಿಯೊಬ್ಬ ಅಫ್ಘಾನ್ ನಿವಾಸಿಗಳಿಗೆ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ತಾಲಿಬಾನ್ ಹೇಳಿತ್ತು. ಆದರೆ ತಾಲಿಬಾನ್ ಭರವಸೆ ಮೇಲೆ ವಿಶ್ವಾಲ ಇಲ್ಲ ಎಂದಿರುವ ಎನ್ ಆರ್ ಎಫ್, ಅಫ್ಘಾನಿಸ್ತಾನದ ಎಲ್ಲಾ ಜನರ ಸ್ವಾತಂತ್ರ್ಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದೆ.

ಟಾಪ್ ನ್ಯೂಸ್

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಹಾ! ಈ ಕಾಶಿ ಹಲ್ವಾ ಏನ್‌ ರುಚಿ ಅಂತೀರಾ,ಒಮ್ಮೆ ಹೀಗೆ ಮಾಡಿ ನೋಡಿ….

ಆಹಾ! ಈ ಕಾಶಿ ಹಲ್ವಾ ಏನ್‌ ರುಚಿ ಅಂತೀರಾ,ಒಮ್ಮೆ ಹೀಗೆ ಮಾಡಿ ನೋಡಿ….

13

ಗಲ್ಫ್ ಮರುಭೂಮಿಯಲ್ಲಿ 2 ವರ್ಷ ನರಕಯಾತನೆ: ʼಆಡುಜೀವಿತಂʼ ಸಿನಿಮಾದ ನಿಜವಾದ ಹೀರೋ ಇವರೇ…

ಜರ್ಮನಿ ಕನ್ನಡತಿಯ ಸ್ಫೂರ್ತಿಯ ಪಯಣ; ಏನಿದು ಮಿಸಸ್‌ ಇಂಡಿಯಾ ವರ್ಡ್‌ವೈಡ್‌ ?

ಜರ್ಮನಿ ಕನ್ನಡತಿಯ ಸ್ಫೂರ್ತಿಯ ಪಯಣ; ಏನಿದು ಮಿಸಸ್‌ ಇಂಡಿಯಾ ವರ್ಲ್ಡ್‌ವೈಡ್‌ ?

MS Dhoni: ಕ್ಯಾಪ್ಟನ್ಸಿ ಕಿರೀಟ ಕಳಚಿಟ್ಟ ಥಲಾ..; ಟ್ರೋಫಿಯೊಂದಿಗೆ ಯಶೋಗಾಥೆಯೊಂದು ಅಂತ್ಯ

MS Dhoni: ಕ್ಯಾಪ್ಟನ್ಸಿ ಕಿರೀಟ ಕಳಚಿಟ್ಟ ಥಲಾ..; ಟ್ರೋಫಿಯೊಂದಿಗೆ ಯಶೋಗಾಥೆಯೊಂದು ಅಂತ್ಯ

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.