ತಮಿಳಿಗರು ಕನ್ನಡ ವಿರೋಧಿಗಳಲ್ಲ


Team Udayavani, Mar 29, 2021, 7:00 AM IST

ತಮಿಳಿಗರು ಕನ್ನಡ ವಿರೋಧಿಗಳಲ್ಲ

ತಮಿಳಿಗರು ನಮ್ಮ ದೇಶದ ಸಂಸ್ಕೃತಿ ಬಗ್ಗೆ ಹೆಜ್ಜೆ ಹೆಜ್ಜೆಗೂ ನಂಬಿಕೆ ಇಟ್ಟುಕೊಂಡಿದ್ದಾರೆ. ನಾಸ್ತಿಕ ವಾದಿ ಗಳು ಅವರ ನಂಬಿಕೆಯನ್ನು ರಕ್ಷಿಸುತ್ತೇವೆಂದು ಅವ ರನ್ನು ವಂಚಿಸಿದ್ದಾರೆ. ಅವರು ನೂರಾರು ಕಿಲೋಮೀಟರ್‌ ಗಟ್ಟಲೇ ದೇವಸ್ಥಾನಗಳಿಗೆ ಪಾದಯಾತ್ರೆ ಮಾಡುತ್ತಾರೆ. ಪ್ರತೀ ಮನೆಯ ಮುಂದೆ ಪ್ರತೀ ದಿನ ರಂಗೋಲಿ ಹಾಕುವುದು ಅವರ ನಿತ್ಯದ ಸಂಪ್ರದಾಯ.

ತಮಿಳಿಗರು ಕನ್ನಡ ವಿರೋಧಿಗಳಲ್ಲ: ಹಿಂದುತ್ವ ತಮಿಳಿಗರ ರಕ್ತದಲ್ಲಿದೆ. ಭಾಷಾ ಸಮಸ್ಯೆಯನ್ನು ಅಪಹಾಸ್ಯ ಮಾಡಲಿಲ್ಲ: ಪ್ರೋತ್ಸಾಹಿಸಿದರು…. ತಮಿಳುನಾಡಿನಲ್ಲಿ ಜನ ಸಾಮಾನ್ಯರು ಬಹಳ ಒಳ್ಳೆಯವರಿದ್ದಾರೆ. ಸುಸಂಸ್ಕೃತರಿದ್ದಾರೆ.

ತಮಿಳಿಗರು ನಮ್ಮ ದೇಶದ ಸಂಸ್ಕೃತಿ ಬಗ್ಗೆ ಹೆಜ್ಜೆ ಹೆಜ್ಜೆಗೂ ನಂಬಿಕೆ ಇಟ್ಟು ಕೊಂಡಿದ್ದಾರೆ. ನಾಸ್ತಿಕ ವಾದಿ ಗಳು ಅವರ ನಂಬಿಕೆಯನ್ನು ರಕ್ಷಿಸುತ್ತೇವೆಂದು ಅವರನ್ನು ವಂಚಿಸಿದ್ದಾರೆ. ಅವರು ನೂರಾರು ಕಿಲೋಮೀಟರ್‌ಗಟ್ಟಲೇ ದೇವಸ್ಥಾನಗಳಿಗೆ ಪಾದಯಾತ್ರೆ ಮಾಡುತ್ತಾರೆ. ಪ್ರತೀ ಮನೆಯ ಮುಂದೆ ಪ್ರತೀ ದಿನ ರಂಗೋಲಿ ಹಾಕುವುದು ಅವರ ನಿತ್ಯದ ಸಂಪ್ರದಾಯ.

ಭಾಷೆಯ ಅಭಿಮಾನ ಅವರಿಗೆ ಹೆಚ್ಚಿದೆ. ನನಗೆ ಆರಂಭದಲ್ಲಿ ಭಾಷೆಯ ಸಮಸ್ಯೆ ಆಯಿತು. ವಣಕ್ಕಂ, ನಲ್ಲ ಇರ್ಕರಾ ? ಅಂಥ ಹೇಳಿತ್ತಿದ್ದೆ, ಎಣಕು ತಮಿಳು ವರಾದು ಅಂತ ಹೇಳುತ್ತಿದ್ದೆ. ಅದಕ್ಕೆ ಅವರು ಖುಷಿ ಪಡುತ್ತಿದ್ದರು. ಮೊದಲು ಅವರಿಗೆ ನಾನು ಹೃದಯದ (ಮಾತೃ) ಭಾಷೆಯಿಂದ ಮಾತನಾಡಲೇ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಲೋ ಎಂದು ಕೇಳುತ್ತಿದ್ದೆ. ಅವರು ಮಾತೃ ಭಾಷೆಯಲ್ಲಿಯೇ ಹೇಳಿ ನಡೆಯುತ್ತದೆ ಎನ್ನುತ್ತಾರೆ. ನಾನು ಕನ್ನಡದಲ್ಲಿ ಮಾತನಾಡಿ ದಾಗ ಅದನ್ನು ತಮಿಳಿಗೆ ತರ್ಜುಮೆ ಮಾಡಿದಾಗ ಜನರು ಕನ್ನಡವೇ ಅರ್ಥವಾಗುತ್ತದೆ ಎಂದು ಕೂಗುತ್ತಿದ್ದರು. ನಾನು ಬಹುತೇಕವಾಗಿ ಕನ್ನಡ, ತಮಿಳು ಹಾಗೂ ಇಂಗ್ಲಿಷ್‌ ಮಿಶ್ರಿತ ಕಂಗ್ಲಿಷ್‌ನಲ್ಲಿಯೇ ನನ್ನ ಭಾಷಣ ಮಾಡುತ್ತೇನೆ. ಅವರು ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಯಾರೂ ನನ್ನ ಭಾಷೆಯ ಬಗ್ಗೆ ಅಪಹಾಸ್ಯ ಮಾಡಿಲ್ಲ. ಹೊರಗಿನಿಂದ ನೋಡಿದರೆ ತಮಿಳಿಗರು ಕನ್ನಡ ಅಥವಾ ಬೇರೆ ಭಾಷೆಯ ವಿರೋಧಿಗಳು ಎಂದು ಬಿಂಬಿಸಲಾ ಗುತ್ತಿದೆ. ಆದರೆ ತಮಿಳಿಗರು ಕನ್ನಡದ ವಿರೋಧಿಗಳಲ್ಲ. ಅವರು ಕನ್ನಡವನ್ನೂ ಗೌರವಿಸುತ್ತಾರೆ.

ಅದರೊಂದಿಗೆ ತಮಿಳಿಗರ ಬಟ್ಟೆ ಹಾಕುವ ಪದ್ಧತಿ (ಡ್ರೆಸ್‌ ಕಲ್ಚರ್‌) ಜನರನ್ನು ಹತ್ತಿರ ಮಾಡಿಸುತ್ತದೆ. ಅಲ್ಲಿನ ವಾತಾ ವರಣಕ್ಕೆ ಪಂಚೆ ಶರ್ಟ್‌ ಹಾಕುವುದು ಅನಿವಾರ್ಯ, ನನಗೆ ಅವಕಾಶ ಸಿಕ್ಕಾಗಲೆಲ್ಲ ಪಂಚೆ, ಶರ್ಟ್‌ ಹಾಕಿಕೊಂಡು ಚುನಾವಣ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ಅದು ಅವರೊಂದಿಗೆ ಹತ್ತಿರವಾಗಲು ನನಗೆ ಸಹಕಾರಿಯಾಗಿದೆ.

ಜನರ ಜತೆ ಭಾವನಾತ್ಮಕವಾಗಿ ಬೆರೆ ಯಲು ಏನು ಬೇಕೋ ಅದನ್ನು ಮಾಡುವ ಪ್ರಯತ್ನ ನಡೆಸುತ್ತಿದ್ದೇನೆ. ನಮ್ಮ ಊರು ಪೊಂಗಲ್‌ ಅಂತ ಪ್ರತೀ ಊರಿನಲ್ಲೂ ಪೊಂಗಲ್‌ ಉತ್ಸವ ಮಾಡಿದೆವು. ಕೆಲವು ಕಡೆಗಳಲ್ಲಿ ಜಲ್ಲಿ ಕಟ್ಟು ಉತ್ಸವ ಸಂಘಟಿಸಿದೆವು. ತಮಿಳುನಾಡಿನ ಸಾಮಾಜಿಕ ಸ್ಥಿತಿ ಅಧ್ಯಯನ ಮಾಡಿ ಕುರುಬ, ಒಕ್ಕಲಿಗ, ಭೋವಿ, ವೀರಶೈವ ಸಮಾಜದ ಸಮಾವೇಶ ಮಾಡಿದೆವು. ಊಟಿ, ಕೊನ್ನೂರು ಪ್ರದೇಶದಲ್ಲಿ ಬಡಗ ಸಮಾವೇಶ ಮಾಡಿದೆವು. ಅದು ನಮ್ಮ ಕೊಡಗಿನ ಭಾಷೆಯ ರೀತಿಯಲ್ಲಿದೆ.

ಪರ್ಯಾಯ ಸ್ವೀಕರಿಸುವ ಗುಣವಿದೆ
ನಾವು ರಾಜಕೀಯವಾಗಿ ನಮ್ಮ ಹಿತಾಸಕ್ತಿ ಕಾಪಾಡಿಕೊಂಡು ಜನರಿಗೆ ಹತ್ತಿರ ಆಗುವ ಪ್ರಯತ್ನ ಮಾಡುತ್ತಿದ್ದೇವೆ. ಸುಮಾರು 53 ವರ್ಷದಿಂದ ಎಐಎಡಿಎಂಕೆ ಮತ್ತು ಡಿಎಂಕೆ ಅಧಿಕಾರ ನಡೆಸಿವೆ. 1965ರಲ್ಲಿ ನಡೆದ ಹಿಂದಿ ವಿರೋಧಿ ಚಳವಳಿ ನಡೆದ ಅನಂತರ ಡಿಎಂಕೆ ಉದಯವಾಯಿತು. ಆಗ ಪರ್ಯಾಯ ರಾಷ್ಟ್ರೀಯ ಪಕ್ಷ ಇಲ್ಲದ ಕಾರಣ ಸ್ಥಳಿಯ ರಾಜ ಕೀಯ ಪಕ್ಷಗಳು ಬಲ ಗೊಂಡವು. ಈಗ ತಮಿಳುನಾ ಡಿನ ಜನರು ಬಲವಾದ ರಾಷ್ಟ್ರೀಯ ಪಕ್ಷವನ್ನು ಹುಡುಕುತ್ತಿ ದ್ದಾರೆ. ಅವರೇನು ರಾಷ್ಟ್ರೀಯ ಪಕ್ಷಗಳ ವಿರೋಧಿಗಳಲ್ಲ. ತಮಿಳಿಗರು ಹಿಂದುತ್ವ ವಿರೋಧಿಗಳಲ್ಲ. ಜಗತ್ತಿನಲ್ಲಿ ಎಷ್ಟು ದೇವಸ್ಥಾನಗ ಳಿವೆಯೋ ಅದರ ಅರ್ಧ ಭಾಗ ತಮಿಳುನಾಡಿನಲ್ಲಿವೆ.

ಭಾಷೆ ಸಮಸ್ಯೆಯಾಗಲಿಲ್ಲ
ತಮಿಳು ಭಾಷೆಯಲ್ಲಿಯೇ ಸುಮಾರು ಮೂವತ್ತು ನಲವತ್ತು ಪದಗಳು ಕನ್ನಡ ಪದಗಳೇ ಇವೆ. ಕರ್ನಾಟಕ ದಲ್ಲಿಯೇ ಉತ್ತರ ಕರ್ನಾಟಕ ಕನ್ನಡ, ಮಂಗ ಳೂರು ಕನ್ನಡ, ಮಂಡ್ಯ ಕನ್ನಡ ಹೇಗೆ ವ್ಯತ್ಯಾಸ ಆಗುತ್ತದೊ ಅದೇ ರೀತಿ ಅಲ್ಲಿಯೂ ಭಾಷೆಯಲ್ಲಿ ವ್ಯತ್ಯಾಸ ಇದೆ.

ಸುಮಾರು ಏಳೆಂಟು ಕ್ಷೇತ್ರಗಳಲ್ಲಿ ಕನ್ನಡ ಭಾಷಿಕರೆ ಇದ್ದಾರೆ. ಹೊಸೂರು, ಊಟಿ, ಥೇಣಿ, ಭವಾನಿ ಕ್ಷೇತ್ರಗಳಲ್ಲಿ ಕನ್ನಡಿಗರೇ ಹೆಚ್ಚಿದ್ದಾರೆ. ಸಾಂಸ್ಕೃತಿಕವಾಗಿ ಹಾಗೂ ಚಾರಿತ್ರಿಕ ವಾಗಿಯೂ ನಾವು ಅವರಿಗೆ ಬಹಳ ಹತ್ತಿರ ಇದ್ದೇವೆ. ನಾವು ಯುಗಾದಿ ಆಚರಿಸುತ್ತೇವೆ. ಅವರು ಆಚರಿಸುತ್ತಾರೆ. ಅವರು ಸಂಕ್ರಾಂತಿ ಆಚರಿಸುತ್ತಾರೆ. ನಾವೂ ಆಚರಿಸುತ್ತೇವೆ. ಭೇದಗಳನ್ನು ಹುಟ್ಟು ಹಾಕಲು ರಾಜಕೀಯ ಪ್ರೇರಿತ ಪ್ರಯತ್ನ ನಡೆದಿದೆ. ಕನ್ನಡಿಗರು ಮತ್ತು ತಮಿಳು ನಾಡಿನ ವಿರೋಧದ ಬಗ್ಗೆ ಕಾವೇರಿ ಸಂದರ್ಭದಲ್ಲಿ ನಾನು ನೀಡಿದ ಹೇಳಿಕೆಯನ್ನು ಮುಂದಿಟ್ಟು ಅಲ್ಲಿ ಸಂಘರ್ಷ ಹುಟ್ಟು ಹಾಕುವ ಪ್ರಯತ್ನ ನಡೆಸಿದರು.

ಆಗ ನಾನೊಂದು ಪ್ರಶ್ನೆ ಕೇಳಿದೆ. ನಿಮ್ಮ ಹಾಗೂ ನಿಮ್ಮ ಪಕ್ಕದ ಮನೆಯವರ ನಡುವೆ ಜಗಳ ನಡೆದಾಗ ನೀವು ಯಾರ ಪರ ವಹಿಸುತ್ತೀರಿ ಎಂದೆ. ಅವರು ನಮ್ಮ ಮನೆ ಪರ ಅಂದರು, ನಿಮ್ಮ ಊರು ಹಾಗೂ ಪಕ್ಕದ ಊರಿನವರ ನಡುವೆ ಕಬಡ್ಡಿ ಪಂದ್ಯ ನಡೆದಾಗ ಯಾರ ಪರ ನಿಲ್ಲುತ್ತೀರಿ ಎಂದೆ, ನಮ್ಮ ಊರಿನ ಪರ ನಿಲ್ಲುತ್ತೇವೆ ಎಂದರು. ನಾನೂ ಹಾಗೆ, ನಮ್ಮ ರಾಜ್ಯದ ವಿಷಯ ಬಂದಾಗ ಕರ್ನಾಟಕದ ಪರ ನಿಲ್ಲುತ್ತೇನೆ. ದೇಶದ ವಿಷಯ ಬಂದಾಗ ತಮಿಳುನಾಡು, ಕರ್ನಾಟಕ ಎಲ್ಲರ ಪರವಾಗಿ ನಿಲ್ಲುತ್ತೇನೆ. ತಮಿಳುನಾಡಿ ಗಾಗಲಿ, ಕರ್ನಾಟಕಕ್ಕಾಗಲಿ ಅನ್ಯಾಯವಾಗುವು ದನ್ನು ನಾನು ಬೆಂಬಲಿಸುವುದಿಲ್ಲ ಎಂದು ಹೇಳಿದೆ. ನನ್ನ ವಾದವನ್ನು ಮೆಚ್ಚಿ ಚಪ್ಪಾಳೆ ಹೊಡೆದರು. ಭಾಷೆ ಜಗಳ ಆಡುವ ವಿಷಯವಲ್ಲ. ಅದು ಸಂಬಂಧ ಬೆಸೆಯುವ ವಿಷಯ ಎಂದು ಹೇಳಿದಾಗ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಾಟಾಳ್‌ ನಾಗರಾಜರನ್ನು ನೋಡಿದಾಗ ತಮಿಳಿಗರಿಗೆ ಕನ್ನಡಿಗರೆಲ್ಲ ಹೀಗೇನಾ ಅಂತ ಅನಿಸುತ್ತದೆ. ವೈಕೋನನ್ನು ನೋಡಿದಾಗ ಕನ್ನಡಿಗರಿಗೂ ತಮಿಳಿಗರೆಲ್ಲ ಹೀಗೇನಾ ಅಂತ ಅನಿಸುತ್ತದೆ. ಆದರೆ ಎಲ್ಲ ಕನ್ನಡಿಗರೂ ಹಾಗೂ ಎಲ್ಲ ತಮಿಳಿಗರು ಹಾಗಿಲ್ಲ ಅನ್ನುವುದು ವಾಸ್ತವ. ಭೇದ ಹುಟ್ಟು ಹಾಕುವವರಿಗೆ ಬೇಧ ಕಾಣಿಸುತ್ತದೆ. ಒಟ್ಟಾಗಿ ನೋಡು ವವರಿಗೆ ಒಟ್ಟಾಗಿ ಕಾಣಿಸುತ್ತದೆ. ನಾವು ತಮಿಳುನಾಡಿನ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಿಲ್ಲ. ಕೇವಲ 20 ಕ್ಷೇತ್ರಗಲ್ಲಿ ಸ್ಪರ್ಧಿಸಿದ್ದೇವೆ. ನಾವು ಅವರ ಭಾವನೆ ಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಹತ್ತಿರವಾಗುವ ಕೆಲಸ ಮಾಡುತ್ತಿದ್ದೇವೆ.

ಅರ್ಥವಾಗುತ್ತಿಲ್ಲ..
ನಾವು ತಾಯಿ ಭುವನೇಶ್ವರಿಯನ್ನು ಆರಾಧಿಸುತ್ತೇವೆ. ಭುವನೆೇಶ್ವರಿಯನ್ನು ಆರಾಧಿಸುತ್ತಿರುವವರು ವಿಜಯನಗರದ ಅರಸರು. ವಿಜಯ ನಗರ ಸಾಮ್ರಾಜ್ಯ ಹುಟ್ಟಿಕೊಂಡಿದ್ದೇ ಹಿಂದುತ್ವ ರಕ್ಷಿಸಲು. ಅದು ನಮಗೆ ಅರ್ಥವಾಗುತ್ತದೆ. ಆದರೆ ಸಿದ್ದರಾಮಯ್ಯನವರಿಗೆ ಅದು ಅರ್ಥವಾಗುತ್ತಿಲ್ಲ.

– ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ

ಟಾಪ್ ನ್ಯೂಸ್

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.