ಮೋದಿ ಹೇಳಿದ್ದ 10 % ಹೋಗಿ ಈಗ 40 % ಆಗಿದೆ : ಬೇಳೂರು ಗೋಪಾಲಕೃಷ್ಣ
ಲುಚ್ಚ ರೇಣುಕಾಚಾರ್ಯ ಬಿಜೆಪಿಗೆ ಕಂಟಕ
Team Udayavani, Apr 13, 2022, 1:33 PM IST
ಶಿವಮೊಗ್ಗ: ’40 ಪರ್ಸೆಂಟ್ ಲಂಚದ ಬಗ್ಗೆ ಸಂತೋಷ್ ದೆಹಲಿ ನಾಯಕರ ಗಮನ ಸೆಳೆದಿದ್ದ ಸಂತೋಷ್ ಪಾಟೀಲ್ ಆತ್ಮಹತ್ಯೆ ದುರಂತ’ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದಾರೆ.
‘ಹಿಂದೂ ವ್ಯಕ್ತಿಯೊಬ್ಬನ ಕೊಲೆಯಾಗಿದೆ.ಈಶ್ವರಪ್ಪ ನೈತಿಕ ಹೊಣೆ ಹೊತ್ತು, ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಪ್ರಧಾನಿ ಮೋದಿ ಶಿವಮೊಗ್ಗಕ್ಕೆ ಬಂದಾಗ ಕಾಂಗ್ರೆಸ್ ಗೆ ಹತ್ತು ಪರ್ಸೆಂಟ್ ಸರ್ಕಾರ ಎಂದು ಜರಿದಿದ್ದರು.ಈಗೇನಾಯ್ತು, 40 ಪರ್ಸೆಂಟ್ ಸರ್ಕಾರವಾಗಿದೆ’ ಎಂದು ಕಿಡಿ ಕಾರಿದರು.
‘ಹರ್ಷನ ಕೊಲೆಯಾದಾಗ ಹೇಗೆ ಸ್ವಾಮಿಜಿಗಳು ಸೇರಿದಂತೆ, ಎಲ್ಲರೂ ಬಂದಿದ್ದರೋ, ಹಾಗೆಯೇ, ಈಗಲೂ ಸಂತೋಷ್ ಮನೆಗೆ ಬರಬೇಕು. ಸಂತೋಷ್ ಕೂಡ ಒಬ್ಬ ಹಿಂದೂ ಕಾರ್ಯಕರ್ತ.ಸಂತೋಷ್ ಕೊಲೆಯೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಎಂದರು.
‘ಸಂತೋಷ್ ಆತ್ಮಹತ್ಯೆಯಲ್ಲಿ, ಕಾಂಗ್ರೆಸ್ ಪಿತೂರಿ ಇದೆ’ ಎಂದು ಲುಚ್ಚ ರೇಣುಕಾಚಾರ್ಯ ಹೇಳುತ್ತಾನೆ. ‘ಬಿಜೆಪಿಗೆ ಯತ್ನಾಳ್ ಮತ್ತು ರೇಣುಕಾಚಾರ್ಯ ಇಬ್ಬರೂ ಕಂಟಕ’ ಎಂದರು.
‘ನಮ್ಮ ಕಾಂಗ್ರೆಸ್ ಹೇಗೆ ಇದರಲ್ಲಿ ಶಾಮೀಲಾಗುತ್ತದೆ? ಹರ್ಷನ ಕೊಲೆಯಲ್ಲಿ ಕಾಂಗ್ರೆಸ್ ಪಾತ್ರವೇನು? ಇವೆಲ್ಲಾ ಹೇಳುವ ರೇಣುಕಾಚಾರ್ಯ ಅದೇಗೆ, ಬಿಜೆಪಿಯಲ್ಲಿದ್ದಾನೋ ಗೊತ್ತಿಲ್ಲ. ನಮ್ಮ ಕಾಂಗ್ರೆಸ್ ಪಕ್ಷದ ಬಗ್ಗೆ ಆರೋಪ ಮಾಡುವ ಇವರು, ಮೊದಲು ಅವರ ಪಕ್ಷದ ಬಗ್ಗೆ ನೋಡಿಕೊಳ್ಳಲಿ’ ಎಂದು ಕಿಡಿ ಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ