ಬಿಜೆಪಿ ಬಿಟ್ಟಿದ್ದೇನೆ ಹೊರತು ಸಂಘದ ವಿಚಾರಧಾರೆ ಬಿಟ್ಟಿಲ್ಲ: ಮಾಜಿ ಸಿಎಂ ಪಾರ್ಸೇಕರ್
ಬಿಜೆಪಿ ಟಿಕೆಟ್ ನೀಡಿದ್ದರೆ ಖಂಡಿತವಾಗಿಯೂ ಜಯಗಳಿಸುತ್ತಿದ್ದೆ
Team Udayavani, Apr 7, 2022, 5:58 PM IST
ಪಣಜಿ: ನಾನು ಬಿಜೆಪಿ ಪಕ್ಷವನ್ನು ಬಿಟ್ಟಿದ್ದೇನೆ ಹೊರತು ಸಂಘ ಪರಿವಾರದ ವಿಚಾರಧಾರೆಯನ್ನು ಬಿಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪಾರ್ಸೇಕರ್ ಹೇಳಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಂಘದ ಶಾಖೆಯಲ್ಲಿರುವಾಗ ಪಕ್ಷದ ಕೆಲಸ ಮಾಡಬೇಕು ಎಂದು ಸಂಘದ ವತಿಯಿಂದ ಹೇಳಲಾಗುತ್ತಿತ್ತು. ಈ ದೃಷ್ಟಿಯಿಂದ ನಾನು ಬಿಜೆಪಿಯ ಕೆಲಸ ಕಾರ್ಯ ನಿರ್ವಹಿಸಿದೆ. ಸಂಘ ಪರಿವಾರದ ವಿಚಾರಧಾರೆಯನ್ನು ನೋಡಿಯೇ ನಾನು ಬಿಜೆಪಿಗೆ ಬಂದಿದ್ದೆ. ಆದರೆ ಪಕ್ಷ ಬೆಳೆದಂತೆ ತಪ್ಪು ಕಲ್ಪನೆಗಳು ಕೂಡ ಬೆಳೆಯುತ್ತವೆ. ಕೆಲವು ವ್ಯಕ್ತಿಗಳು ನನ್ನನ್ನು ಪಕ್ಷದಿಂದ ದೂರವಿಡಲು ಪ್ರಯತ್ನ ನಡೆಸಿದರು ಎಂದು ಬೇಸರ ಹೊರ ಹಾಕಿದರು.
2017 ರ ವಿಧಾನಸಭಾ ಚುನಾವಣೆಯಲ್ಲಿಯೇ ನನ್ನನ್ನು ಪಕ್ಷದ ಸ್ಥಳೀಯ ಸಮಿತಿಯಿಂದ ದೂರವಿಡುವ ಪ್ರಯತ್ನ ನಡೆಸಲಾಯಿತು. ಇದರಿಂದಾಗಿ ನಾನು ದೂರವೇ ಉಳಿದೆ, ಪಕ್ಷಕ್ಕೆ ರಾಜೀನಾನೆಯನ್ನು ನೀಡಿದೆ ಎಂದರು.
2022 ರ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ನಾನು ಪಕ್ಷೇತರನಾಗಿ ಸ್ಫರ್ಧಿಸಿ ಪರಾಭವಗೊಂಡಿದ್ದರೂ ಸಹ ನನಗೆ 6,000 ಮತಗಳು ಬಿದ್ದಿವೆ, ಇದು ನನ್ನ ಗೆಲುವೇ ಆಗಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಾನು ಎಲ್ಲಿಯೂ ಕೂಡ ಬಹಿರಂಗ ಸಭೆ ನಡೆಸಿಲ್ಲ. ಆದರೂ ಕೂಡ ನನ್ನೊಂದಿಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನತೆ ಬೆಂಬಲ ನೀಡಿದ್ದಾರೆ. ಬಿಜೆಪಿ ನನಗೆ ಟಿಕೆಟ್ ನೀಡಿದ್ದರೆ ನಾನು ಖಂಡಿತವಾಗಿಯೂ ಜಯಗಳಿಸುತ್ತಿದ್ದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯ ದಿವಾಳಿ ಮಾಡಿ ಚೊಂಬು ತೋರಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ
Shiv sena ಪಕ್ಷದ ಗೀತೆಯಿಂದ ‘ಹಿಂದೂ’, ‘ಜೈ ಭವಾನಿ’ ಪದ ಕೈಬಿಡಲ್ಲ: ಉದ್ಧವ್
Protest; ಕೇಜ್ರಿವಾಲ್ ಸಕ್ಕರೆ ಮಟ್ಟ 300 ದಾಟಿದೆ.. ; ಆಮ್ ಆದ್ಮಿ ಪಕ್ಷ ಆಕ್ರೋಶ
Ram Navami: ಅಯೋಧ್ಯೆಯಲ್ಲಿ ಬಾಲರಾಮನ ಹಣೆಯನ್ನು ಸ್ಪರ್ಶಿಸಿದ ಸೂರ್ಯರಶ್ಮಿ!
Udupi: ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲುವುದು ಖಚಿತ – ಡಾ. ಆರತಿ ಕೃಷ್ಣ