ಲಗಾಮಿಲ್ಲದ ರಾಜಕೀಯಕ್ಕೆ ಜಾತಿಯೇ ಕಾವಲು


Team Udayavani, Apr 5, 2021, 6:00 AM IST

ಲಗಾಮಿಲ್ಲದ ರಾಜಕೀಯಕ್ಕೆ ಜಾತಿಯೇ ಕಾವಲು

ಈಶ್ವರಪ್ಪ ಹಾಗೂ ಯಡಿಯೂರಪ್ಪ ಅವರ ಪ್ರಕರಣದಲ್ಲಿ ಬಿಜೆಪಿ ಹೈಕಮಾಂಡ್‌ಗೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಭವಿಷ್ಯದಲ್ಲಿ ಅದರ ಪರಿಣಾಮ ಪಕ್ಷದ ಮೇಲಾಗುತ್ತದೆ ಎನ್ನುವ ಸೂಕ್ಷ್ಮ ಅರಿವಿಲ್ಲದೇನಿಲ್ಲ.

ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗೂ ಪ್ರಸಕ್ತ ವಿದ್ಯಮಾನಗಳನ್ನು ಸೂಕ್ಷ್ಮ ವಾಗಿ ಗಮನಿಸುತ್ತ ಹೋದರೆ ರಾಜಕಾರಣ ಯಾರ ಹಿಡಿತಕ್ಕೂ ಸಿಗದಂತೆ ಹೋಗುತ್ತಿದೆ ಎಂಬ ಭಾವನೆ ಮೂಡುತ್ತಿದೆ.

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣ ಹಾಗೂ ಆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೆಸರು ತಳಕು ಹಾಕಿಕೊಂಡಿ ರುವುದು. ಶಾಸಕ ಬಸನಗೌಡ ಯತ್ನಾಳ್‌ ಅವರ ಹೇಳಿಕೆ ಗಳು ಹಾಗೂ ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಬಹಿರಂಗವಾಗಿಯೇ ತಮ್ಮದೆ ಶಾಸಕಾಂಗ ಪಕ್ಷದ ನಾಯಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಬಹಿರಂಗವಾಗಿ ದೂರು ಸಲ್ಲಿಸಿ, ಅವರ ವಿರುದ್ಧ ನೇರವಾಗಿ ಸೆಡ್ಡು ಹೊಡೆದು ಬಂಡಾಯ ಸಾರಿರುವುದು ಎಲ್ಲವೂ ಪ್ರಸಕ್ತ ರಾಜಕೀಯ ಬೆಳವಣಿಗೆ ಯಾವ ದಿಕ್ಕಿನಡೆ ಹೋಗುತ್ತಿದೆ ಎನ್ನುವುದೇ ತಿಳಿಯದಂತಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ನೇರವಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ರಾಜ್ಯ ಪಾಲರಿಗೆ ದೂರು ನೀಡಿ, ಸರಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟು ಮಾಡುವಂತೆ ನಡೆದುಕೊಂಡಿ ದ್ದರೂ, ಪಕ್ಷದ ಹೈಕಮಾಂಡ್‌ ಪಂಚ ರಾಜ್ಯಗಳ ಚುನಾ ವಣೆ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪ ಚುನಾವಣೆ ಮುಗಿಯುವ ವರೆಗೂ ಯಾವುದೇ ಚರ್ಚೆ ಮಾಡದಿರಲು ನಿರ್ಧರಿಸಿರು ವುದು ಜಾತಿ ರಾಜಕಾರಣದ ಲೆಕ್ಕಾಚಾರ ಇದ್ದಂತಿದೆ.

ವಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆನ್ನಿಗಿರುವ ಕುರುಬ ಸಮುದಾಯವನ್ನು ಬಿಜೆಪಿ ಕಡೆಗೆ ಮುಖಮಾಡುವಂತೆ ಮಾಡಲು ಈಶ್ವರಪ್ಪ ಅವರನ್ನು ಮುಂದಿಟ್ಟುಕೊಂಡು ಬಿಜೆಪಿಯೇ ಎಸ್ಟಿ ಹೋರಾಟಕ್ಕೆ ತೆರೆ ಮರೆಯಲ್ಲಿ ನೀರೆರೆದು ಪೋಷಿ ಸುತ್ತಿದೆ ಎನ್ನುವ ಆರೋಪವನ್ನು ಸಿದ್ದರಾಮಯ್ಯ ನೇರವಾಗಿಯೇ ಮಾಡಿದ್ದಾರೆ. ಅದನ್ನು ಬಿಜೆಪಿ ನಾಯ ಕರು ಬಹಿರಂಗವಾಗಿ ಅಲ್ಲಗಳೆಯುವ ಯತ್ನವನ್ನೇನು ಮಾಡಿಲ್ಲ.

ಈಗ ಯಡಿಯೂರಪ್ಪ ಅವರ ವಿರುದ್ಧ ಈಶ್ವರಪ್ಪ ನೀಡಿರುವ ದೂರಿನ ಹಿಂದೆಯೂ ದಿಲ್ಲಿ ನಾಯಕರ ಬಲವಾದ ಕೈ ಇರುವ ಬಗ್ಗೆ ರಾಜ್ಯ ಬಿಜೆಪಿ ನಾಯಕ ರಲ್ಲಿಯೇ ಗುಮಾನಿ ಶುರುವಾಗಿದೆ. ಈಶ್ವರಪ್ಪ ಅವರು ಸ್ವಂತ ನಿರ್ಧಾರ ತೆಗೆದುಕೊಂಡಿರುವುದಕ್ಕಿಂತ ಪಕ್ಷದ ನಾಯಕತ್ವ ಹೇಳಿದ್ದಂತೆ ನಡೆದುಕೊಂಡಿದ್ದೇ ಹೆಚ್ಚು. ಇದರ ಹಿಂದೆ ಅವರಿಗೂ ಪರ್ಯಾಯ ನಾಯ ಕತ್ವದ ಕೂಗಿನಲ್ಲಿ ತಮ್ಮದೂ ಹೆಸರು ಸೇರ ಬೇಕೆಂಬ ಬಯಕೆಯೂ ಇದ್ದಿರಬಹುದು. ಮುಖ್ಯ ಮಂತ್ರಿ ಬದಲಾವಣೆ ಅಥವಾ ಯಡಿಯೂರಪ್ಪ ಅವರ ಅವಧಿ ಮುಗಿದ ಅನಂತರ ಬಿಜೆಪಿಯಲ್ಲಿ ಮುಂದಿನ ನಾಯಕತ್ವದ ಬಗ್ಗೆ ನಿರಂತರ ಚರ್ಚೆ ನಡೆ ಯುತ್ತಿದ್ದರೂ, ಈಶ್ವರಪ್ಪ ಅವರ ಹೆಸರು ಮುಖ್ಯ ಮಂತ್ರಿಯ ಸ್ಥಾನ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿ ಬರದಿರುವುದು, ಅವರಿಗೆ ಎಲ್ಲೋ ತೆರೆಗೆ ಸರಿಯು ತ್ತಿದ್ದೇನೆ ಎಂದು ಭಾಸವಾದಂತಿದೆ. ಅದೇ ಕಾರಣಕ್ಕೆ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗದಂತೆ ತಮ್ಮ ಬಯಕೆಯನ್ನು ಪರೋಕ್ಷವಾಗಿ ಹೊರಗೆಡವುವ ಯತ್ನವೂ ಇದರ ಹಿಂದೆ ಇದ್ದರೂ ಅಚ್ಚರಿ ಪಡುವಂ ತಿಲ್ಲ. ಏಕೆಂದರೆ, ಕುರುಬ ಸಮುದಾಯದ ಎಸ್ಟಿ ಹೋರಾಟವೂ ಅವರು ರಾಜಕೀಯ ಮೆಟ್ಟಿಲೇರಲು ಅನು ಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಸಿದ್ದರಾ ಮ್ಯಯ ಅವರ ಅನುಪಸ್ಥಿತಿಯಲ್ಲಿಯೇ ಯಶಸ್ವಿಗೊ ಳಿಸುವ ಯತ್ನ ನಡೆಸಿದ್ದರು.

ಈಶ್ವರಪ್ಪ ಹಾಗೂ ಯಡಿಯೂರಪ್ಪ ಅವರ ಪ್ರಕರಣದಲ್ಲಿ ಬಿಜೆಪಿ ಹೈಕಮಾಂಡ್‌ಗೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಭವಿಷ್ಯದಲ್ಲಿ ಅದರ ಪರಿಣಾಮ ಪಕ್ಷದ ಮೇಲಾಗುತ್ತದೆ ಎನ್ನುವ ಸೂಕ್ಷ್ಮ ಅರಿವಿಲ್ಲದೇನಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ, ಕುಟುಂಬ ರಾಜಕಾರಣ, ಆಪರೇಷನ್‌ ಕಮಲಕ್ಕೆ ಹಣದ ಆಮಿಷ ಒಡ್ಡಿರುವ ಪ್ರಕರಣದಲ್ಲಿ ಕೋರ್ಟ್‌ ತನಿಖೆಗೆ ಆದೇಶ ನೀಡಿ ರುವುದು. ಎಲ್ಲವೂ ಬಹಿರಂಗವಾಗಿದ್ದರೂ ಹೈಕ ಮಾಂಡ್‌ ಯಾವುದನ್ನೂ ನಿಯಂತ್ರಿಸಲಾಗದ ಪರಿಸ್ಥಿತಿಗೆ ಸಿಲುಕಿರುವುದರ ಹಿಂದೆಯೂ ಜಾತಿಯ ಭಯವಿದ್ದಂತೆ ಕಾಣಿಸುತ್ತದೆ.

ಇದೇ ರೀತಿ, ಬಿಜೆಪಿಯ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ನಿರಂತರ ವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ನೇರವಾಗಿ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ಬಗ್ಗೆ ನಿರಂತರ ಆರೋಪ ಮಾಡು ತ್ತಲೇ ಇದ್ದಾರೆ. ಇಷ್ಟಾದರೂ ಬಿಜೆಪಿ ಹೈಕ ಮಾಂಡ್‌ ಮಾತ್ರ ಜಾಣ ಮೌನ ವಹಿಸಿರುವುದಕ್ಕೂ ಪಂಚಮಸಾಲಿ ಸಮಾಜದ ಮಹಾ ಸಮಾವೇಶ ಕಾರಣ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಸಮಾವೇಶವನ್ನು ಅರ್ಧಕ್ಕೆ ಮೊಟಕುಗೊಳಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿ ಯೂರಪ್ಪ ಅವರು ಗಣಿ ಸಚಿವ ನಿರಾಣಿ ಅವರಿಗೆ ವಹಿಸಿದ್ದರೂ, ಸ್ವಾಮೀಜಿಗಳು ಮಾತ್ರ ನಿರಾಣಿ ಅವರ ಮಾತಿಗೆ ಬೆಲೆಕೊಡದೇ ಬಸನಗೌಡ ಪಾಟೀಲ್‌ ಯತ್ನಾಳ ಮಾತಿಗೆ ಬೆಲೆಕೊಟ್ಟು ಪಾದಯಾತ್ರೆ ಕೊನೆ ಗೊಳಿಸಿ ಬೃಹತ್‌ ಸಮಾವೇಶ ನಡೆಸಿ, ಸರಕಾರದ ವಿರುದ್ಧ ಧರಣಿಯನ್ನೂ ಮಾಡಿದ್ದು, ಬಿಜೆಪಿ ಹೈಕ ಮಾಂಡ್‌ ಯತ್ನಾಳ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆಯ ನ್ನಿಡುವಂತೆ ಮಾಡಿತು. ಒಂದು ವೇಳೆ ಮುರುಗೇಶ್‌ ನಿರಾಣಿ ಪಾದಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಿ ಸಮಾ ವೇಶ ನಡೆಯದಂತೆ ನೋಡಿಕೊಂಡಿದ್ದರೆ, ಬಿಜೆಪಿ ಶಾಸಕರ

ಪಟ್ಟಿಯಿಂದ ಯತ್ನಾಳ್‌ ಹೆಸರು ಆಗಲೇ ತೆಗೆದು ಹಾಕುವುದರಲ್ಲಿ ಅನುಮಾನವೇ ಇರಲಿಲ್ಲ.
ಸಚಿವ ಮುರುಗೇಶ್‌ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ್‌ ನಡುವೆ ನಡೆದಿರುವ ಆಂತರಿಕ ಸಂಘರ್ಷ ಕೇವಲ ಪಂಚಮಸಾಲಿ ಸಮುದಾಯದ ನಾಯಕತ್ವ ವಹಿಸಿಕೊಳ್ಳುವುದಕ್ಕಷ್ಟೇ ಸೀಮಿತವಾದಂ ತಿಲ್ಲ. ಬಿಜೆಪಿಯಲ್ಲಿ ಉಂಟಾದ ನಾಯಕತ್ವದ ಪ್ರಶ್ನೆಗೆ ತಾವು ಪರ್ಯಾಯ ಎನ್ನುವುದನ್ನು ಬಿಂಬಿಸುವ ಯತ್ನವೂ ನಡೆದಿದೆ.

ಸಮಸ್ತ ವೀರಶೈವ ಲಿಂಗಾಯತ ಸಮುದಾಯದ ನಾಯಕತ್ವದ ಹೆಸರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರಾಜಕಾರಣ ಮಾಡಿಕೊಂಡು ಬಂದಿದ್ದು, ಅದೇ ಅಸ್ತ್ರ ಬಳಸಿಕೊಂಡೇ ಪಕ್ಷದ ಹೈಕಮಾಂಡನ್ನು ನಿಯಂತ್ರಿಸಿಕೊಂಡು ಬಿಜೆಪಿಯ 75 ವರ್ಷ ಮೀರಿದವರ ಸಕ್ರೀಯ ರಾಜಕಾರಣದ ನಿಯಮ ಮೀರಿದರೂ ಅಧಿಕಾರದಲ್ಲಿ ಮುಂದುವ ರೆದಿದ್ದಾರೆ.
ಬಸನಗೌಡ ಪಾಟೀಲ್‌ ಯತ್ನಾಳ್‌, ಮರುಗೇಶ್‌ ನಿರಾಣಿ ಹಾಗೂ ಈಶ್ವರಪ್ಪ ಅವರ ನಡೆಯ ಹಿಂದೆ ಪರ್ಯಾಯದ ಕನಸಿರುವುದನ್ನು ಅಲ್ಲಗಳೆಯು ವಂತಿಲ್ಲ. ಅದಕ್ಕಾಗಿ ಸಮುದಾಯದ ಅಸ್ತ್ರವನ್ನು ಮುಂದಿಟ್ಟುಕೊಂಡಿರುವುದನ್ನೂ ತಳ್ಳಿ ಹಾಕುವಂತಿಲ್ಲ.

ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಎಲ್ಲರೂ ಅಧಿಕಾರದ ಗದ್ದುಗೆ ಏರಲು ಹಾಗೂ ಆರೋಪದಿಂದ ಪಾರಾಗಲು ಜಾತಿ ಬಲವನ್ನೇ ನೆಚ್ಚಿಕೊಳ್ಳುತ್ತಿರುವುದು ರಾಜಕೀಯ ಪಕ್ಷಗಳೂ ಅದೇ ಕಾರಣಕ್ಕೆ ಪಕ್ಷಕ್ಕೆ ಮುಜುಗರ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳದೇ ಇರುವುದು ಪ್ರಜಾಪ್ರಭುತ್ವಕ್ಕೆ ಮಾಡು ತ್ತಿರುವ ಅವಮಾನದಂತಾಗುತ್ತದೆ.

– ಶಂಕರ ಪಾಗೋಜಿ

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.