ದುಬಾೖ ನವದಂಪತಿಯ ಸುದೀರ್ಘ‌ ಮಧುಚಂದ್ರ


Team Udayavani, May 24, 2020, 9:25 PM IST

ದುಬಾೖ ನವದಂಪತಿಯ ಸುದೀರ್ಘ‌ ಮಧುಚಂದ್ರ

ಸಾಂದರ್ಭಿಕ ಚಿತ್ರ.

ಮಾಲೆ: ದುಬಾೖ ಮೂಲದ ಖಾಲೀದ್‌ (36) ಮತ್ತು ಪೆರಿ (35) ಪರಸ್ಪರ ಭೇಟಿಯಾಗಿ ಎಂಟು ವರ್ಷಗಳ ಬಳಿಕ ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಮಾ. 6ರಂದು ತಮ್ಮ ಬಂಧು-ಬಳಗದ ಸಮ್ಮುಖ ವಿವಾಹವಾಗಿದ್ದರು. ಕೆಲ ದಿನಗಳ ಬಳಿಕ ಅವರು ಮಧುಚಂದ್ರಕ್ಕೆಂದು ಮೆಕ್ಸಿಕೋದ ಕಾನ್‌ಕನ್‌ಗೆ ಹೊರಟರು. ಕೋವಿಡ್‌ ಆಗ ವಿಶ್ವಾದ್ಯಂತ ಹಬ್ಬಿರಲಿಲ್ಲ, ಚಾಚಿರಲಿಲ್ಲ.

ಮಾ. 19ರಂದು ಅವರು ಟರ್ಕಿ ಮೂಲಕ ಯುನೈಟೆಡ್‌ ಅರಬ್‌ ಎಮಿ ರೇಟ್ಸ್‌ (ಯುಎಇ)ನ ತಮ್ಮ ತವರೂರಿಗೆ ಮರಳುತ್ತಿದ್ದಾಗ ಕೋವಿಡ್‌ ವಿಶ್ವದೆಲ್ಲೆಡೆ
ಹರಡಲಾರಂಭಿಸಿತ್ತು. ಅವರು ಇಸ್ತಾಂಬುಲ್‌ನಲ್ಲಿ ಸಂಪರ್ಕ ವಿಮಾನವನ್ನು ಏರುವುದಲ್ಲಿದ್ದಾಗ ಅವರಿಗೆ ಅನುಮತಿ ನಿರಾ ಕರಿಸಲಾಯಿತು. ನಿಜಕ್ಕಾದರೆ ಅವರು ಮೆಕ್ಸಿಕೊದಿಂದ ಹೊರಡುತ್ತಿದ್ದಂತೆಯೇ ಟರ್ಕಿಯಲ್ಲಿ ಕೋವಿಡ್‌ಸಂಬಂಧಿ ನಿಯಮಗಳು ಜಾರಿಗೆ ಬಂದಿದ್ದವು.

ನವದಂಪತಿ ಎರಡು ದಿನಗಳ ಕಾಲ ವಿಮಾನ ನಿಲ್ದಾಣದಲ್ಲಿ ಅತಂತ್ರ ಸ್ಥಿತಿಯಲ್ಲಿ ಕಾಲ ಕಳೆಯಬೇಕಾಯಿತು. ಅನಂತರ ಅವರು ಸ್ವದೇಶಕ್ಕೆ ಮರಳುವ ದಾರಿ ಕಾಣದೆ ಮಧುಚಂದ್ರದ ಹೊಸ ತಾಣವಾಗಿ ಮಾಲ್ದಿವ್ಸ್‌ಗೆ ತೆರಳಲು ನಿರ್ಧರಿಸಿದರು.ಅಲ್ಲಿಗೆ ತಲಪಿದಾಗ ಅವರಿಗೆ ಅಲ್ಲಿ ಕೆಲವೇ ಪ್ರವಾಸಿಗರು ಉಳಿದಿರುವುದು ಗಮನಕ್ಕೆ ಬಂದಿತು ಮತ್ತು ಹೆಚ್ಚಿನವರು ಸ್ವದೇಶಕ್ಕೆ ಮರ‌ಳುವುದಕ್ಕಾಗಿ ವಿಮಾನಗಳಿಗೆ ಕಾಯುತ್ತಿದ್ದರು. ಅವರ ಹೊಟೇಲ್‌ನಲ್ಲಿದ್ದ ಉಳಿದವರು ನಿರ್ಗಮಿಸಿದ ಬಳಿಕ ಅವರನ್ನು ಇನ್ನೊಂದು ದ್ವೀಪಕ್ಕೆ ವರ್ಗಾಯಿಸಲಾಯಿತು. ಅಲ್ಲಿ ಕೂಡ ಇದೇ ಸ್ಥಿತಿ ಮರುಕಳಿಸಿತು. ಮಾಲ್ದೀವ್ಸ್‌ ಸರಕಾರ ವಿಹಾರಧಾಮವೊಂದರಲ್ಲಿ ಸ್ಥಾಪಿಸಿದ್ದ ವಿಶೇಷ ಕ್ವಾರಂಟೈನ್‌ನಲ್ಲಿ ಅವರು ಒಂದು ತಿಂಗಳ ಕಾಲ ಕಳೆದರು. ವಿಹಾರಧಾಮದಲ್ಲಿ ಅವರಂತೆ 70 ಮಂದಿ ಇದ್ದರು. ಈ ಪೈಕಿ ಅನೇಕರು ಹನಿಮೂನ್‌ಗೆ ಬಂದವರಾಗಿದ್ದರು.

ಸಿಕ್ಕಿಹಾಕಿಕೊಂಡ ಪ್ರವಾಸಿಗರು
ಮಾಲ್ದಿವ್ಸ್‌ನಲ್ಲಿ ಈಗ 300 ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದಾರೆ. ಹೊಸ ಪ್ರವಾಸಿಗರ ಆಗಮನದ ಮೇಲೆ ನಿಷೇಧ ಹೇರಲಾಗಿದೆ. ಖಾಲೀದ್‌ ಮತ್ತು ಪೆರಿ ದಂಪತಿ ದುಬಾೖಗೆ ಮರಳುವುದಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಆದರೂ ತಾವು ಒಂದು ಉತ್ತಮ ಜಾಗದಲ್ಲಿ ಸಿಕ್ಕಿಬಿದ್ದಿದ್ದೇವೆಂದು ಅವರು ಹೇಳುತ್ತಾರೆ. ಹೆಚ್ಚಾಗಿ ಅವರು ಸಮಯವನ್ನು ಕೊಠಡಿಯಲ್ಲೇ ಕಳೆಯುತ್ತಿದ್ದು ತಮ್ಮ ಲ್ಯಾಪ್‌ಟಾಪ್‌ ಮೂಲಕ ಕಚೇರಿ ಕೆಲಸ ಮಾಡಲಾರಂಭಿಸಿದ್ದಾರೆ. ಮಾಲ್ದಿವ್ಸ್‌ನಲ್ಲಿ ಮಳೆಯಾಗುತ್ತಿರುವುದರಿಂದ ಮತ್ತು ಈಗ ರಮ್ಜಾನ್‌ ಉಪವಾಸದ ಮಾಸವಾಗಿರುವುದರಿಂದ ಅವರಿಗೆ ಒಂದೆರಡು ಬಾರಿಗಿಂತ ಹೆಚ್ಚು ಸಲ ಸಮುದ್ರತೀರಕ್ಕೆ ಹೋಗಲು ಸಾಧ್ಯವಾಗಿಲ್ಲ.

ಈಗ ಅವರು ಸ್ವದೇಶಕ್ಕೆ ಮರಳುವುದಕ್ಕಾಗಿ ಯುಎಇ ಅಧಿಕಾರಿಗಳ ನೆರವು ಕೋರುತ್ತಿದ್ದಾರೆ. ಮೆಕ್ಸಿಕೊಕ್ಕೆ ಮಧುಚಂದ್ರಕ್ಕೆಂದು ತೆರಳಿದ್ದ ವೇಳೆ ತಮ್ಮ ಮಧುಚಂದ್ರ ಹೀಗೆ ದೀರ್ಘ‌ಕಾಲ ಮುಂದುವರಿಯಬಹುದೆಂದು ಅವರು ಕನಸಿನಲ್ಲೂ ಯೋಚಿಸಿರಲಿಕ್ಕಿಲ್ಲ.

ಟಾಪ್ ನ್ಯೂಸ್

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

police USA

USA: ಅಪಘಾತದಲ್ಲಿ ಭಾರತ ಮೂಲದ ಇಬ್ಬರ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.