ಹುಣಸೂರು: ಜನರ ಕಲ್ಲೇಟಿಗೆ ಸಿಲುಕಿ ನಾಲೆಯಲ್ಲಿ ಪರದಾಡಿದ ಕಾಡಾನೆಗಳು
Team Udayavani, Jan 10, 2022, 2:36 PM IST
ಹುಣಸೂರು: ಉದ್ಯಾನವನದಿಂದ ಕಾಡಾನೆಗಳು ದಿಕ್ಕುತಪ್ಪಿ ಕಾಡಿಗೆ ಹೋಗಲಾಗದೆ ಜನರ ಕಲ್ಲೇಟಿಗೆ ಹೆದರಿ ನಾಲೆಗೆ ಇಳಿದು ಮೇಲೆ ಹತ್ತಲಾಗದೆ ಅತ್ತಿಂದಿತ್ತ ಓಡಾಡಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಾಗರಹೊಳೆ ಉದ್ಯಾನವನದಿಂದ ಭಾನುವಾರ ರಾತ್ರಿ ಹೊರಬಂದಿದ್ದ ಆನೆಗಳ ಹಿಂಡು ಪೆಂಜಹಳ್ಳಿ, ಗುರುಪುರ, ಮಾಜಿ ಗುರುಪುರ ಗ್ರಾಮಗಳ ಜಮೀನುಗಳಲ್ಲಿ ರಾತ್ರಿ ವೇಳೆ ಮೇವು ಮೆಂದು ಮುಂಜಾನೆ ಕಾಡಿನತ್ತ ತೆರಳುತ್ತಿದ್ದ ವೇಳೆ ರೈತರು ಆನೆಗಳನ್ನು ಅಟ್ಟಾಡಿಸಿದ್ದು, ಈ ವೇಳೆ ಮುಖ್ಯ ನಾಲೆಗಿಳಿದಿದೆ.
ಬಳಿಕವೂ ಜನರು ನಾಲೆ ಸುತ್ತ ಜಮಾಯಿಸಿ, ಆನೆಗಳನ್ನು ಬೆದರಿಸಿದ್ದಾರೆ. ಯುವಕರು ಕಟ್ಟು ಹೊಡೆದು ಹೆದರಿಸಿದ್ದರಿಂದ ನಾಲೆ ಮೇಲೆ ಬರಲಾಗದೆ ಗಂಟೆಗಳ ಕಾಲ ಅತ್ತಿಂದಿತ್ತ ಓಡಾಡತೊಡಗಿದವು. ನಂತರ ಪೆಂಜಹಳ್ಳಿ ಭಾಗದಿಂದ ಉದ್ಯಾನವನದತ್ತ ತೆರಳಿದವು.