ಅತಂತ್ರವಾಗಿರುವ ದುರ್ಗಮುರ್ಗವ್ವ ಅಲೆಮಾರಿಗರ ಬದುಕು…

ಅಲೆಮಾರಿಗಳಿಗಿಲ್ಲ ಸರ್ಕಾರದ ಅಭಯ ಹಸ್ತದ ಭಾಗ್ಯ !

Team Udayavani, May 27, 2023, 5:45 PM IST

durgamma
ರಬಕವಿ-ಬನಹಟ್ಟಿ : ಕಲೆ ಎಲ್ಲರನ್ನು ಕೈ ಬೀಸಿ ಕರೆಯುವುದಿಲ್ಲ. ಅದು ತನ್ನ ಆರಾಧಕರಿಗೆ ಮಾತ್ರ ಕೈಗೆಟಕುತ್ತದೆ. ಅಂತಹ ದೇವಿ ಆರಾಧಕರಾದ ಅಲೆಮಾರಿ ದುರ್ಗಮುರ್ಗವ್ವರ ಬದುಕು ಕೂಡಾ ಅತ್ಯಂತ ಕಷ್ಟದಾಯಕವಾದದ್ದು. ಈ ಜನಾಂಗಕ್ಕೆ ವಿದ್ಯೆ ನೇವೇದ್ಯ, ಸ್ಥಿರವಾದ ನೆಲೆಯಿಲ್ಲ. ಸರ್ಕಾರದ ಯಾವ ಸೌಲಭ್ಯಗಳೂ ಇವರಿಗೆ ಸಿಗುತ್ತಿಲ್ಲ ಏಕೆಂದರೆ ಇವರಿಗೆ ನಿರ್ದಿಷ್ಟ ಸ್ಥಳ ಇರದಿರುವುದರಿಂದ ಮತ್ತು ಮತದಾರರ ಪಟ್ಟಿ ಸೇರಿದಂತೆ ಆಧಾರ್, ಮತದಾರರ ಗುರುತಿನ ಚೀಟಿ ಇವ್ಯಾವವೂ ಇಲ್ಲದ್ದರಿಂದ ಇವರು ಬದುಕಿರುವ ಸುಳಿವೂ ಆಡಳಿತ ಯಂತ್ರಕ್ಕೆ ಸಿಗುವುದಿಲ್ಲ. ಇವರ ಬದುಕು ಮಾತ್ರ ಅತಂತ್ರವಾಗಿದೆ.
ಮೂರು-ನಾಲ್ಕು ಕೂಡು ರಸ್ತೆಯ ಜಾಗೆಯಲ್ಲಿ ದುರ್ಗಾದೇವಿ ವಿಗ್ರಹವಿರುವ ಪೆಟ್ಟಿಗೆ ಇರಿಸಿಕೊಂಡು, ಕೈಯಲ್ಲಿನ ಚರ್ಮದ ರೊಡ್ಡುನಿಂದ ರಕ್ತ ಜಿನುಗುವಂತೆ ಹೊಡೆದುಕೊಳ್ಳುವ ಪೋತರಾಜ. ಆಹಾರೇ ದುರ್ಗಿ ಎನ್ನುತ್ತ ಡೋಲು ಬಡೆಯುತ್ತ ಈತನ ಸಹಚಾರಿಣಿ ಜೋಳಿಗೆ ಬಿಚ್ಚಿ ಗಲ್ಲಿಯ ಮನೆಮನೆಗಳಿಗೆ ತೆರಳಿ ದೇವಿಯ ಅಂಗಾರ(ಭಸ್ಮ)ನೀಡುತ್ತ, ಆಯಾ ಮನೆಗಳಿಂದ ಮೊರದಿಂದ ದವಸ-ಧಾನ್ಯಗಳನ್ನು ಪಡೆದು ಜೀವನ ನಿರ್ವಹಿಸುವ ಜನಾಂಗವೊಂದರ ಸಂಕ್ಷಿಪ್ತವಾದ ಮತ್ತು ನಿತ್ಯ ಬದುಕಿನ ಚಿತ್ರಣವಿದು.
ಪ್ರಾಚೀನ  ವೇದ ಕಾಲದಿಂದಲೂ ಶಕ್ತಿ ದೇವತೆಯಾಗಿರುವ ದುರ್ಗ-ಮುರ್ಗವ್ವನ ಕಾಯಕದಲ್ಲಿ ತೊಡಗಿದ ಜನಾಂಗಕ್ಕೆ ಇಂದಿಗೂ ಒಂದೆಡೆ ವಾಸಿಸುವ ಭಾಗ್ಯವಿಲ್ಲದೇ ಅತಂತ್ರ ಸ್ಥಿತಿಯಲ್ಲಿ ಅಲೆಮಾರಿ ಬದುಕನ್ನೆ ನಡೆಸುತ್ತ ಬಂದಿರುವ ಕುಟುಂಬಗಳು ಈ ವೃತ್ತಿಯ ಮೇಲೆ ಜೀವನ ನಡೆಸಲಾರದೇ ಇರುವ ಕಾರಣ ಇದೀಗ ಸಂಪೂರ್ಣ ನಶಿಸಿ ಹೋಗುತ್ತಿರುವ ಕಾಲ ಬಂದಿದೆ. ದುರ್ಗಮುರುಗ ಜನಾಂಗದ ಜನರು ನಗರ ಪ್ರದೇಶದಲ್ಲಂತು ಕಾಣಸಿಗುವದೇ ಇಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲೂ ಸಹಿತ ಬಲು ಅಪರೂಪ.
ದುರ್ಗ-ಮುರ್ಗವ್ವ ಎಂದರೆ, ಒಂದು ಪೆಟ್ಟಿಗೆಯಲ್ಲಿ ದೇವಿಯ ಮೂರ್ತಿ ಅದುವೇ ದುರ್ಗ-ಮುರ್ಗವ್ವ. ಏಳು ದೇವತೆಯರಾದ ಕುಡಚಿ ದುರ್ಗವ್ವ, ಬಿರಡಿ ಲಕ್ಕವ್ವ, ಸೀಮಿ ಲಕ್ಕವ್ವ, ಕುಡಚಿ ಮೈಲವ್ವ, ಅಡವಿ ಪ್ರೇಸ್ತಿ, ಚಿಂಚಲಿ ಮಾಯವ್ವ, ಘಟಪ್ರಭಾ ಹುಲಿಗೆವ್ವ ಹೀಗೆ ಏಳು ಪ್ರದೇಶದ ದೇವಿಗಳೊಂದಿಗೆ ಕೂಡಿದ ಏಕೈಕ ತಾಯಿ ದುರ್ಗ-ಮುರ್ಗವ್ವವೆಂಬ ಪ್ರತೀತಿ ಇದೆ ಎಂಬುದು ಈ ಅಲೆಮಾರಿ ಜನಾಂಗದ ಅಭಿಪ್ರಾಯವಾಗಿದೆ.
ಪೆಟ್ಟಿಗೆಯಲ್ಲಿ ಆದಿಶಕ್ತಿಯನ್ನು ಹೊತ್ತು ಆಯಾ ಗ್ರಾಮ ಅಥವಾ ನಗರಗಳಿಗೆ ಪ್ರತಿ ವರ್ಷ ತೆರಳುತ್ತಾರೆ. ಆಯಾ ಪ್ರದೇಶದಲ್ಲಿ ಮೊದಲು ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೈಲಿ, ಗನಜಲಿ, ತದ್ದ, ಜ್ವರ ಸೇರಿದಂತೆ ಇತರೆ ರೋಗಗಳು ಮಕ್ಕಳಿಗೆ ಬರಬಾರದೆಂಬ ಕಾರಣಕ್ಕೆ ಈ ದೇವಿಯನ್ನು ಗ್ರಾಮ ಪ್ರವೇಶ ಮಾಡಿಕೊಂಡು ಜನರು ಇಷ್ಟಾರ್ಥಗಳನ್ನು ಬೇಡಿಕೊಂಡು, ರೋಗಗಳನ್ನು ತಾಯಿ ಮಡಿಲಿಗೆ ಹಾಕುತ್ತಿದ್ದರು ಎಂಬ ವಾಡಿಕೆ.
ಇದಕ್ಕೆ ಸಂಬಂಧ ಇಬ್ಬರು-ಮೂರು ಜನ ಸೇವಕರು ಓರ್ವ ಹಲಗೆ ಅಥವಾ ಡೊಳ್ಳು ಬಾರಿಸುತ್ತಿದ್ದರೆ ಮತ್ತೊಬ್ಬ ಬಾರಕೋಲದಿಂದ ಬಡಿದುಕೊಳ್ಳುವದು. ಗಲ್ಲಿಗಳಲ್ಲಿ ದೇವಿಯನ್ನು ಪೆಟ್ಟಿಗೆಯಿಂದ ಜನತೆಗೆ ದರ್ಶನ ನೀಡಿ, ನಂತರ ರೊಡ್ಡಿನಿಂದ ಬಡಿದುಕೊಂಡರೆ ಇಡೀ ಪ್ರದೇಶ ರೋಗಮುಕ್ತ ಹೊಂದಿ ಆರೋಗ್ಯವಂತ ಕುಟುಂಬವಾಗುತ್ತವೆ ಎಂಬುದು ಜನ ನಂಬಿಕೆಯ ಪ್ರತೀತಿ.
ದುರ್ಗ-ಮುರ್ಗವ್ವ ಕಾಯಕದ ಜನಾಂಗದವರು ಆದಿವಾಸಿಗಳಾಗಿದ್ದಾರೆ. ಇವರಿಗೆ ಯಾವದೇ ನಿಗದಿತ ಪ್ರದೇಶ ಅಥವಾ ವಿಳಾಸವೆಂಬುದೇ ಇಲ್ಲ. ವರ್ಷವಿಡೀ ಗ್ರಾಮ ಹಾಗೂ ನಗರ ಸಂಚಾರ ಮಾಡುವ ಇವರು ದುರ್ಗಾ ಶಕ್ತಿಯ ಸೇವಕರೂ ಹೌದು ಎನ್ನಲಾಗಿದೆ. ಒಂದು ವೇಳೆ ಈ ದುರ್ಗ-ಮುರ್ಗವ್ವರ ತಂಡ ಗ್ರಾಮಗಳಿಗೆ ಆಗಮಿಸದೇ ಹೋದಲ್ಲಿ, ದೂರವಾಣಿ ಮೂಲಕ ಅಥವಾ ಸಂಬಂಸಿದವರಿಂದ ಇವರನ್ನು ಹುಡುಕಿ ಗ್ರಾಮಕ್ಕೆ ಆಗಮಿಸುವಂತೆ ಜನತೆ ವಿನಂತಿಸುತ್ತಾರೆಂದು ಹೇಳುತ್ತಾನೆ ದುರ್ಗಾಶಕ್ತಿ ಸೇವಕ ಲಕ್ಷ್ಮಣ.
ಹೆಚ್ಚಾಗಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿನ ಘಟಪ್ರಭಾ, ಸಂಕೇಶ್ವರ, ಜಮಖಂಡಿ ಹಾಗೂ ಮುಧೋಳ ಭಾಗಗಳಲ್ಲಿ ಈ ಕುಟುಂಬಗಳ ಜನಸಂಖ್ಯೆ ಹೆಚ್ಚಿವೆ ಎನ್ನಬಹುದು. ಇವರು ನಿತ್ಯ ಬದುಕಿಗೆ ಮಳೆ, ಗಾಳಿ, ಬಿಸಿಲು ಎನ್ನದೇ ತಮ್ಮ ಹೊಟ್ಟೆ ಪಾಡಿಗಾಗಿ ಜೀವನವನ್ನೇ ಸವೆಸುವ ಇಂತಹ ಜೀವಿಗಳ ಕಷ್ಟಕ್ಕೆ ಸರಕಾರ ಸ್ಪಂದಿಸಿ, ಇವರನ್ನು ಗುರುತಿಸುವಂತಾಗಬೇಕು.
`ಸುಮಾರು ೪-೫ ತಲೆಮಾರಿನಿಂದ ದುರ್ಗಾಶಕ್ತಿ ಸೇವೆಯಲ್ಲಿ ನಮ್ಮ ಕುಟುಂಬವಿದೆ. ಇದರಲ್ಲಿಯೇ ನಮ್ಮ ಕುಟುಂಬ ಮುನ್ನಡೆಯುತ್ತಿದ್ದು, ಮಕ್ಕಳೂ ಸಹಿತ ಇದೇ ಕಾಯಕದಲ್ಲಿ ಮುನ್ನಡೆಯುತ್ತಿದ್ದಾರೆ. ಆದ್ರೆ ಸರ್ಕಾರ ನಮ್ಮಂತ ಅಲೆಮಾರಿ ಕುಟುಂಬಗಳ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ ಸಹಾಯ-ಸೌಕರ್ಯ ಮಾಡಿದರೆ ಒಳಿತಾಗುವದು.
– ಲಕ್ಷ್ಮಣ ಚನ್ನದಾಸರ, ದುರ್ಗ-ಮುರ್ಗವ್ವ ಸೇವಕ.
`ಬದುಕು ಅತಂತ್ರವಾಗಿದೆ. ಸರ್ಕಾರ ಚೂರು-ಪಾರು ಮನೆ-ಮಾರು ನೀಡಿ, ಕುಟುಂಬ ನಿರ್ವಹಣೆಗೆ ಮಾಶಾಸನ ವ್ಯವಸ್ಥೆ ಕಲ್ಪಿಸಿದರೆ ಬದುಕನ್ನು ಸ್ವಲ್ಪಮಟ್ಟಿಗಾದರೂ ಕಟ್ಟಿಕೊಳ್ಳಬಹುದು. ಇಲ್ಲವಾದಲ್ಲಿ ಅಲೆಮಾರಿ ಜೀವನ ಕಟ್ಟಿಟ್ಟ ಬುತ್ತಿಯಾಗಿದೇರಿ.
 – ಸುಸಲವ್ವ ಚನ್ನದಾಸರ.
– ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.