ಮಾತುಕತೆಯಿಂದಷ್ಟೇ ಲಡಾಖ್ಗೆ ಪರಿಹಾರ: ವಿದೇಶಾಂಗ ಸಚಿವ
Team Udayavani, Feb 6, 2021, 11:00 PM IST
ನವದೆಹಲಿ: ಲಡಾಖ್ ಗಡಿಸ್ಥಿತಿ ಸಂಕೀರ್ಣವಾಗಿದೆ. ಮಿಲಿಟರಿ ಮಟ್ಟದ ಮಾತುಕತೆಗಳಿಂದಷ್ಟೇ ಇದಕ್ಕೆ ಪರಿಹಾರ ಸಿಗಬೇಕಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈಗಾಗಲೇ ಭಾರತ- ಚೀನಾದ ಹಿರಿಯ ಮಿಲಿಟರಿ ಕಮಾಂಡರ್ಗಳ ನಡುವೆ 9 ಸುತ್ತಿನ ಮಾತುಕತೆಗಳು ಮುಗಿದಿವೆ.
ಏನಾದರೂ ಫಲಪ್ರದ ಫಲಿತಾಂಶಗಳು ಸಿಗಬಹುದೆಂದು ನಾವೂ ನಿರೀಕ್ಷಿಸಿದ್ದೆವು. ಆದರೂ, ಇಲ್ಲಿಯವರೆಗೆ ಕಣ್ಣಿಗೆ ಬೀಳುವಂಥ ಯಾವುದೇ ಬೆಳವಣಿಗೆಗಳು ಘಟಿಸಿಲ್ಲ. ಹೀಗಾಗಿ ಮತ್ತಷ್ಟು ಸುತ್ತಿನ ಮಾತುಕತೆಯ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ನಕ್ಸಲ್ ನಿಗ್ರಹಕ್ಕೆ ಸಿಆರ್ಪಿಎಫ್ ಮಹಿಳಾ ‘ಕೋಬ್ರಾ’ ರೆಡಿ