ನಿಯಮ ಬಾಹಿರ ಹೆಡ್‌ಲೈಟ್‌ಗಳ ಬಳಕೆ ವ್ಯಾಪಕ

ಬೆಳಕಿನ ಪ್ರಖರತೆಯಿಂದ ಅಪಘಾತ ಇಲಾಖೆಯಿಂದ ಯಾವುದೇ ಕ್ರಮವಿಲ್ಲ !

Team Udayavani, May 28, 2023, 6:36 AM IST

headlight

ಬಂಟ್ವಾಳ: ವಾಹನಗಳಲ್ಲಿ ನಿರ್ದಿಷ್ಟ ಪ್ರಮಾಣದ ಪ್ರಖರತೆಯ ಹೆಡ್‌ಲೈಟ್‌ಗಳನ್ನೇ ಬಳಸಬೇಕು ಎಂದು ಸಾರಿಗೆ ಇಲಾಖೆಯ ನಿಯಮವಿದ್ದರೂ ಇಂದಿನ ದಿನಗಳಲ್ಲಿ ಮಿತಿಮೀರಿದ ಬೆಳಕು ಚೆಲ್ಲುವ ಹೆಡ್‌ಲೈಟ್‌ಗಳನ್ನು ಬಳಸಲಾಗುತ್ತಿದೆ. ಇದು ಬಹಳಷ್ಟು ಅಪಘಾತಗಳಿಗೆ ಕಾರಣವಾಗುತ್ತಿದ್ದು, ಕ್ರಮ ಕೈಗೊಳ್ಳಬೇಕಾದ ಪೊಲೀಸ್‌, ಪ್ರಾದೇಶಿಕ ಸಾರಿಗೆ ಸುಮ್ಮನಿರುವುದು ಜನಸಾಮಾನ್ಯರ ಅಸಮಾಧಾನಕ್ಕೆ ಕಾರಣವಾಗಿದೆ.

ಬಹುತೇಕ ಹೈಎಂಡ್‌ ಕಾರುಗಳಲ್ಲಿ ವ್ಯಾಪಕವಾಗಿ ನಿಯಮ ಮೀರಿದ ಹೆಡ್‌ಲೈಟ್‌ಗಳ ಬಳಕೆಯಾಗುತ್ತಿದ್ದು, ಅಂತಹ ಕಾರುಗಳು ಸಿಕ್ಕರೆ ಎದುರಿನಿಂದ ಬರುವ ವಾಹನಗಳ ಚಾಲಕರನ್ನು ದೇವರೇ ಕಾಪಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಅದರ ಪ್ರಖರ ಬೆಳಕು ಕಣ್ಣಿಗೆ ಬಿದ್ದರೆ ಸಂಪೂರ್ಣ ಕತ್ತಲೆ ಆವರಿಸಿ ಕ್ಷಣಕಾಲ ಎತ್ತ ಹೋಗಬೇಕು ಎಂದೂ ತಿಳಿಯದಾಗುತ್ತದೆ.

ಕಾರುಗಳನ್ನು ಖರೀದಿಸಿದ ಮಂದಿ ಅದನ್ನು ಮಾರ್ಪಾಡು (ಆಲೆóàಶನ್‌) ಮಾಡುವ ಸಂದರ್ಭದಲ್ಲಿ ಹೆಡ್‌ಲೈಟ್‌ ಸೇರಿದಂತೆ ಎಲ್ಲವನ್ನೂ ಬದಲಿಸುತ್ತಾರೆ. ಈ ವೇಳೆ ನಿಯಮ ಮೀರಿದ ವ್ಯಾಟ್ಸ್‌ ಗಳ ಹೆಡ್‌ಲೈಟ್‌ಗಳನ್ನು ಅಳವಡಿಸುತ್ತಾರೆ. ಇದರ ವಿರುದ್ಧ ಸಂಬಂಧಪಟ್ಟವರು ಕಾರ್ಯಾಚರಣೆಗೆ ಇಳಿಯದಿರುವ ಪರಿಣಾಮ ಅವುಗಳ ಬಳಕೆ ಹೆಚ್ಚುತ್ತಲೇ ಇದೆ.

ರಾತ್ರಿ ಪ್ರಯಾಣದ ಸಂದರ್ಭ ಪ್ರಖರ ಬೆಳಕಿನ ಹೆಡ್‌ಲೈಟ್‌ನ ವಾಹನ ಎದುರಾದರೆ ಸಂಪೂರ್ಣ ಕತ್ತಲ ಸ್ಥಿತಿ (ಬ್ಲೆ$çಂಡ್‌ನೆಸ್‌) ಸೃಷ್ಟಿಯಾಗಿ ನಮ್ಮ ಮುಂದೆ ಯಾರಾದರೂ ಹೋಗುತ್ತಿದ್ದಾರೆಯೇ, ಬೇರೆ ವಾಹನಗಳು ಇವೆಯೇ, ಮುಂದೆ ರಸ್ತೆ ಸರಿ ಇದೆಯೇ ಎಂಬಿತ್ಯಾದಿ ಯಾವ ವಿಚಾರಗಳೂ ಗಮನಕ್ಕೆ ಬಾರದೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ವಾಹನ ವೇಗವಾಗಿದ್ದರೆ ಚಾಲಕನ ನಿಯಂತ್ರಣ ಕಳೆದುಕೊಳ್ಳುವ ಅಪಾಯವೂ ಇರುತ್ತದೆ.

ದ್ವಿಚಕ್ರ ವಾಹನಗಳು, ಕಾರುಗಳು, ರಾತ್ರಿ ವೇಳೆ ಘಟ್ಟದ ಮೇಲಿನಿಂದ ಕರಾವಳಿಗೆ ತರಕಾರಿ ಇತ್ಯಾದಿ ಸರಕು ಸಾಗಿಸುವ ವಾಹನಗಳಲ್ಲಿ ಇಂತಹ ನಿಯಮ ಬಾಹಿರ ಹೆಡ್‌ಲೈಟ್‌ಗಳ ಬಳಕೆ ಹೆಚ್ಚಾಗಿ ಕಂಡುಬರುತ್ತಿದೆ. ಹೈಎಂಡ್‌ ಕಾರುಗಳು ಪ್ರಭಾವಿಗಳ ಕೈಯಲ್ಲೇ ಇರುವುದರಿಂದ ಇಲಾಖೆ ಸುಮ್ಮನಿದೆಯೇ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ದ್ವಿಚಕ್ರ ವಾಹನ, ಇತರ ವಾಹನಗಳಲ್ಲಿ ಹೋಗುವ ಸಾಮಾನ್ಯರು ತಪ್ಪು ಮಾಡಿದಾಗ ಗಲ್ಲಿ ಗಲ್ಲಿಗಳಲ್ಲಿ ನಿಂತು ತಪಾಸಣೆ ಮಾಡುವ ಪೊಲೀಸ್‌ ಇಲಾಖೆ ಇಂತಹ ವಾಹನಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸುವಂತಾಗಿದೆ.

ಕಿರಣ್‌ ಸರಪಾಡಿ

ಟಾಪ್ ನ್ಯೂಸ್

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್‌

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್‌

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ

Udupi ಮಾದಕ ವ್ಯಸನಮುಕ್ತ ಜಿಲ್ಲೆಗೆ ವೈದ್ಯಕೀಯ ಕ್ಷೇತ್ರದ ಕೊಡುಗೆ ಅತ್ಯಾವಶ್ಯಕ

Udupi ಮಾದಕ ವ್ಯಸನಮುಕ್ತ ಜಿಲ್ಲೆಗೆ ವೈದ್ಯಕೀಯ ಕ್ಷೇತ್ರದ ಕೊಡುಗೆ ಅತ್ಯಾವಶ್ಯಕ

1-fdsdsa

ODI: ಭಾರತದ ಎದುರು ವೈಟ್‌ವಾಶ್‌ ತಪ್ಪಿಸಿಕೊಂಡ ಆಸೀಸ್ ; 66 ರನ್ ಗಳ ಜಯ

1-cssadsa

Karwar; ಯುದ್ಧವಿಮಾನ ಮ್ಯೂಸಿಯಂ ಸ್ಥಾಪನೆಗೆ ಸಿದ್ಧತೆಗಳು ಪೂರ್ಣ

kejriwal-2

Kejriwal ಬಂಗಲೆ ವಿವಾದ : ಸಿಬಿಐ ತನಿಖೆಗೆ ಗೃಹ ಸಚಿವಾಲಯ ಆದೇಶ

Cauvery issue ರಾಜಕಾರಣ ಬೇಡ: ಸಚಿವ ಮಧು ಬಂಗಾರಪ್ಪ

Cauvery issue ರಾಜಕಾರಣ ಬೇಡ: ಸಚಿವ ಮಧು ಬಂಗಾರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

h d kumaraswamy

NICE: ನೈಸ್‌ ಸಂತ್ರಸ್ತರಿಗೆ ಭೂಮಿ ಮರಳಿಸಲು ಬೃಹತ್‌ ಹೋರಾಟ:ಕುಮಾರಸ್ವಾಮಿ

high court karnataka

High Court: ಗುಂಪು ಗಲಭೆ ಸಂತ್ರಸ್ತರಿಗೆ ಪರಿಹಾರ ಹೆಚ್ಚಳ

devegouda

Politics: ಒಂದೇ ಕುಟುಂಬ ಅಧಿಕಾರದಲ್ಲಿ ಇರಬೇಕೆಂಬ ಕಾರಣಕ್ಕಾಗಿ ಕೈ ರಾಜಕಾರಣ: ದೇವೇಗೌಡ

dr MC SUDHAKAR

Karnataka: ಮುಂದಿನ ವರ್ಷ SEP ಜಾರಿ: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌

1-cssadsa

Karwar; ಯುದ್ಧವಿಮಾನ ಮ್ಯೂಸಿಯಂ ಸ್ಥಾಪನೆಗೆ ಸಿದ್ಧತೆಗಳು ಪೂರ್ಣ

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್‌

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್‌

1-ssad

Women’s Hockey : ಸಂಗೀತಾ ಹ್ಯಾಟ್ರಿಕ್‌; ಸಿಂಗಾಪುರ ವಿರುದ್ಧ 13-0 ಗೆಲುವು

drought

Karnataka: ಬರ ನಿರ್ವಹಣೆ: ಕೇಂದ್ರ, ರಾಜ್ಯ ಸರಕಾರಗಳು ಕಾರ್ಯೋನ್ಮುಖವಾಗಲಿ

ASSAM MEGHALAY

Assam-Meghalaya: ಗಡಿ ಸಂಘರ್ಷ ಬಿಲ್ಲು-ಬಾಣದ ದಾಳಿ, ವ್ಯಕ್ತಿಗೆ ಗಾಯ

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.