ಎಂದೆಂದಿಗೂ ಪ್ರಸ್ತುತ ವಿಶ್ವ ಮಾನವ ಸಂದೇಶ


Team Udayavani, Feb 16, 2021, 6:00 AM IST

ಎಂದೆಂದಿಗೂ ಪ್ರಸ್ತುತ ವಿಶ್ವ ಮಾನವ ಸಂದೇಶ

ಜಗತ್ತು ಇಂದು ಗೊಂದಲದ ಗೂಡಾಗಿದೆ. ಮನುಷ್ಯ ಪ್ರಬುದ್ಧವಾದ ಬುದ್ಧಿಮತ್ತೆಯನ್ನು ಪಡೆದ ಜೀವಿ ಎಂಬ ಹೆಗ್ಗಳಿಕೆ ಹೊಂದಿದ್ದರೂ ಮನುಜ ಕುಲವನ್ನು ಕಾಡುವ ಮೂಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗಿಲ್ಲ ಎಂಬುದು ಸೋಜಿಗದ ವಿಚಾರ. ಧರ್ಮದ ಆಧಾರದ ಮೇಲೆ ಇಂದು ಜಗತ್ತು, ದೇಶ ಗಳು, ಹಳ್ಳಿಗಳು ಅಷ್ಟೇ ಏಕೆ ಬಡಾವಣೆಗಳು ಕೂಡ ಒಡೆದ ಮನೆಯಾಗಿವೆ. ಪ್ರಾಬಲ್ಯಕ್ಕಾಗಿ ಪ್ರಯತ್ನಗಳು ನಡೆಯುತ್ತ ಲೋಕದ ಅಶಾಂತಿಗೆ ಕಾರಣವಾಗಿವೆ.

ಮಾನವನ ವಿಕಾಸದ ಹಾದಿಯನ್ನು ಅವಲೋಕಿಸಿ ದರೆ, ಕಾಲಕಾಲಕ್ಕೆ ಮಹಾಪುರುಷರು ಆಗಿಹೋಗಿ ದ್ದಾರೆ. ಕೆಲವರ ಚಿಂತನೆಗಳು ಬೆಳೆದು ಧರ್ಮಗಳಾಗಿವೆ. ಒಟ್ಟು ಸೇರಿ ಬದುಕಬೇಕೆಂಬ ಆಶಯದ ಮಹಾತ್ಮರ ವಾಣಿಗಳು ತಲೆಮಾರುಗಳ ಬಳಿಕ ಮಾದಕವಾಗಿ ಸಮಾಜಕ್ಕೆ ಮಾರಕಗಳಾಗುತ್ತಿರುವುದನ್ನು ಇಂದಿನ ಜನಾಂಗದ ಗ್ರಹಿಕೆಯ ಕೊರತೆಗಳೆನ್ನಬೇಕೇ? ಮತದ ಹೆಸರಿನಲ್ಲಿ ಯುದ್ಧಗಳು, ಜಾಗತಿಕ ಕ್ಷೋಭೆ, ಭಯೋ ತ್ಪಾದನೆ ಸಾಮಾನ್ಯವಾಗುತ್ತಿದ್ದು, ಜಾಗತಿಕ ಅಶಾಂತಿಗೆ ಹೇತುಗಳಾಗಿವೆ. ಈ ಸಂದರ್ಭದಲ್ಲಿ “ವಿಶ್ವ ಮಾನವ ಸಂದೇಶ’ ಪ್ರಸ್ತುತವೆನಿಸುತ್ತದೆ.

ಹುಟ್ಟುವ ಪ್ರತೀ ಮಗುವೂ ವಿಶಾಲ ಮನೋಧರ್ಮ ವನ್ನು ತನ್ನದಾಗಿಸಿಕೊಂಡು ಹುಟ್ಟುತ್ತದೆ. ಅದಕ್ಕೆ ಸಿಗುವ ಆರಂಭಿಕ ಅನುಭವ ಮತ್ತು ಬೋಧನೆಯಂತೆ ಮಗು ಬೆಳೆಯುತ್ತದೆ. ಇಂದಿನ ಪೈಪೋಟಿಯಲ್ಲಿ ವರ್ಣ, ಜಾತಿ, ಮತ, ದೇಶಗಳ‌ ಕಟ್ಟುಪಾಡುಗಳಿಂದ ಮಗುವಿನ ಮನಸ್ಸು ಪ್ರಭಾವಿತವಾಗುತ್ತದೆ. ಆ ಅಚ್ಚಿನಲ್ಲಿ ಬೆಳೆದ ಮಗು ಒಂದು ಸಂಕುಚಿತ ಮನೋಧರ್ಮದಲ್ಲಿ ಬೆಳೆಯುತ್ತಾ ಜಾಡ್ಯವನ್ನು ಅಂಟಿಸಿಕೊಳ್ಳುತ್ತದೆ.

ಮತಗಳು ಬೇರೆ ಬೇರೆ ಕಾಲಮಾನದ ಅವತರಣಿಕೆ ಗಳು. ಅಂದಿನ ಪರಿಸ್ಥಿತಿಗೆ ಅನುಸಾರವಾಗಿ ಧರ್ಮದ ಚಿಂತನೆಗಳು ಹರಳುಕಟ್ಟುವುದು ಸ್ವಾಭಾವಿಕವೂ ಸೂಕ್ತವೂ ಆಗಿದೆ. ಬದಲಾವಣೆ ಯುಗ ಧರ್ಮ. ಆದ್ದ ರಿಂದ ಮತೀಯ ಚಿಂತನೆಗಳು ಬದಲಾಗುತ್ತಿರುವ ಕಾಲಕ್ಕೆ ಅನುಸಾರವಾಗಿ ತಮ್ಮ ಚಿಂತನೆಗಳನ್ನು ಮರು ಚಿಂತನೆಗೊಳಪಡಿಸುವುದು ಅಗತ್ಯ. ಹಾಗಾಗದಿದ್ದರೆ ಅದರ ಚಿಂತನೆಗಳು ಪ್ರಸ್ತುತತೆಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಪಾದಿಸುವ “ವಿಶ್ವ ಮಾನವ ಸಂದೇಶ’ ಆಕರ್ಷಕವೆನಿಸುತ್ತದೆ.

ಕುವೆಂಪು ಅವರ ಜಾತ್ಯತೀತ ಮನೋಭಾವದಿಂದ ಮೂಡಿಬಂದ ಆಶಯವೇ ವಿಶ್ವಮಾನವ ಸಂದೇಶ ವಾಗಿದೆ. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಮಗು ಹುಟ್ಟುವಾಗ ವಿಶ್ವಮಾನವ, ಬೆಳೆಯುತ್ತಾ ಅಲ್ಪ ಮಾನವನಾಗುತ್ತಾನೆ ಎಂದು ಅವರು ವಿಷಾದಿಸುತ್ತಾರೆ. ವಿಶ್ವ ಮಾನವ ಸಂದೇಶ ಸರಳ. ಮನುಜ ಕುಲ, ವಿಶ್ವ ಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಇವುಗಳ ಮೇಲೆ ಈ ದರ್ಶನ ನಿಂತಿದೆ. ಮಾನವ ಕುಲ ಎಂದರೆ ಎಲ್ಲರೂ ಒಂದೇ ಕುಲದ ಸದಸ್ಯರೆನ್ನುವ ತಿಳಿವಳಿಕೆ. ವಿಶ್ವ ಪಥವೆಂದರೆ ಎಲ್ಲರ ಗುರಿ ವಿಶ್ವದ ಒಳಿತನ್ನು ಸಾಧಿಸುವುದು. ಸರ್ವೋದಯವೆಂದರೆ ಒಬ್ಬ ವ್ಯಕ್ತಿಯ ಪ್ರಗತಿ ಮಾತ್ರವಲ್ಲ, ಇಡೀ ಜಗತ್ತಿನ ಏಳಿಗೆ. ಸಮನ್ವಯ ಎಂದರೆ ಪರಸ್ಪರ ಸಿಡಿದು ಹೋಗುವುದಲ್ಲ;

ಮನುಷ್ಯರೊಳಗೆ ಬೆಳೆಯಬೇಕಾದ ತಿಳಿವಳಿಕೆ, ಹೊಂದಾಣಿಕೆ. ಪೂರ್ಣದೃಷ್ಟಿ ಎಂದರೆ ಮಿತ-ಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ, ಪಾರಮಾರ್ಥಿಕ ಎಲ್ಲವನ್ನೂ ಭಗವದ್‌ ದೃಷ್ಟಿಯಿಂದ ಕಾಣುವ ವಿಶಾಲ ದೃಷ್ಟಿ. ಆದರ್ಶ ಸಮಾಜವೆಂದರೆ ಸಮಾನತೆಯ ಮೇಲೆ ನಿಂತ ಸಮಾಜ ಎಂದು ಸರಳವಾಗಿ ಅರ್ಥೈಸಬಹುದು. ಇದೇ ಮೂಲ ಸಂದೇಶವನ್ನು ಪಂಪನ “ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಕಾವ್ಯದ ಮಾತು ಸಾರುತ್ತದೆ. ಇದು ಸಾಧ್ಯವಾಗಬೇಕಾದರೆ ಇಂದಿನ ಮತ, ಉಪಮತಗಳ ಸೀಳು ಕೊನೆಗೊಳ್ಳಬೇಕು.

ಉತ್ತಮ ವಿದ್ಯಾಭ್ಯಾಸ ಪ್ರತಿಯೊಬ್ಬನಿಗೆ ತನ್ನ ದೇವರನ್ನು ಕಂಡುಕೊಳ್ಳಲು ಸಹಾಯ ಮಾಡಬೇಕು. ವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟಾಗ ಪ್ರತಿಯೊಬ್ಬರೂ ತಮ್ಮ ದೇವರನ್ನು ಕಂಡುಕೊಳ್ಳಲು ಶಕ್ತರಾಗುತ್ತಾರೆ. ಇಂತಹ ಸನ್ನಿವೇಶದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಮತಗಳಾಗಲು ಸಾಧ್ಯ! ಮತವೆನ್ನುವುದು ಪ್ರತಿಯೊಬ್ಬನ ಖಾಸಗಿ ಆವಿಷ್ಕಾರ. ಇಂತಹ ವಿಶ್ವಮಾನವ ದರ್ಶನದಲ್ಲಿ ಮತ ಪ್ರಾಬಲ್ಯವನ್ನು ಸಾಧಿಸಲು ಪೈಪೋಟಿ ಇಲ್ಲ. ಹುಟ್ಟಿದ ಪ್ರತೀ ಮಗುವನ್ನು ವಿಶ್ವ ಮಾನವನನ್ನಾಗಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯೂ ತುರ್ತೂ ಆಗಿದೆ. ಇಂದು ಎದುರಿಸುತ್ತಿರುವ ಕೆಲವು ಸಮಸ್ಯೆಗಳಿಗೆ ಉತ್ತರವನ್ನು ಇದು ತನ್ನ ಬಸಿರಲ್ಲಿ ಹೊತ್ತಿದೆ.

ಪ್ರತಿಯೊಬ್ಬರಲ್ಲೂ ದೇವರಿದ್ದಾನೆ
ವಿಶ್ವ ಮಾನವ ಸಂದೇಶದ ಮೂಲ ಬೀಜವನ್ನು ಸ್ವಾಮಿ ವಿವೇಕಾನಂದರ ಚಿಂತನೆಗಳಲ್ಲಿ ಕಾಣಬಹುದು. ಸ್ವಾಮಿ ವಿವೇಕಾನಂದರು ತಮ್ಮ ಶಿಕಾಗೋ ಭಾಷಣದಲ್ಲಿ ಮಾನವ ಸಮಾನತೆಯನ್ನೂ ವ್ಯಕ್ತಿ ಸ್ವಾತಂತ್ರ್ಯವನ್ನೂ ಪ್ರತಿಪಾದಿಸಿದರು. ಪ್ರತಿಯೊಬ್ಬರಲ್ಲೂ ದೇವರಿದ್ದಾನೆ. ಆದ್ದರಿಂದ ಪ್ರತಿಯೊಬ್ಬರಿಗೂ ತಾನು ಕಂಡುಕೊಂಡ ದೇವರನ್ನು ಪೂಜಿಸುವ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಅವರು ವರ್ಣ ಮತ್ತು ಜಾತಿವಾದವನ್ನು ವಿರೋಧಿಸಿ, ಸಮಾನತೆಯನ್ನು ಪ್ರತಿಪಾದಿಸಿದರು. ಅವರು ರಾಮಕೃಷ್ಣ ಮಿಶನ್‌ ಸ್ಥಾಪಿಸಿ ತನ್ನ ಗುರುಗಳ ಚಿಂತನೆಗಳನ್ನೂ ತನ್ನ ದೃಷ್ಟಿಕೋನದಲ್ಲಿ ವಿಶ್ವಾದ್ಯಂತ ಪ್ರತಿಪಾದಿಸುತ್ತಾ ಬಂದರು. ರಾಮಕೃಷ್ಣ ಪರಮಹಂಸರ ಭಕ್ತರಾದ ಕುವೆಂಪು ಅವರು ಈ ಮೂಲ ಸಾರದ ಆಧಾರದ ಮೇಲೆ ವಿಶ್ವ ಮಾನವ ಸಂದೇಶವನ್ನು ತಮ್ಮ ಸಾಹಿತ್ಯದಲ್ಲೂ ಚಿಂತನೆಗಳಲ್ಲೂ ಪ್ರತಿಪಾದಿಸಿದರು. ಅವರ ಈ ಚಿಂತನೆಗಳು ಇಂದಿನ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ.

– ಡಾ| ಕೊಳ್ಚಪ್ಪೆ ಗೋವಿಂದ ಭಟ್‌, ತಿಲಕ್‌ ನಗರ

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.