ದೇವಾಲಯಗಳಲ್ಲಿ ತೀರ್ಥವಿಲ್ಲ; ಕೇಂದ್ರ ಸರಕಾರದಿಂದ ಹೊಸ ಮಾರ್ಗಸೂಚಿ


Team Udayavani, Jun 5, 2020, 6:10 AM IST

ದೇವಾಲಯಗಳಲ್ಲಿ ತೀರ್ಥವಿಲ್ಲ;  ಕೇಂದ್ರ ಸರಕಾರದಿಂದ ಹೊಸ ಮಾರ್ಗಸೂಚಿ

ಹೊಸದಿಲ್ಲಿ: ದೇಶದ ಎಲ್ಲ ಆರಾಧನಾಲಯಗಳು, ಮಾಲ್‌, ಹೊಟೇಲ್‌ ಜೂ.8ರಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

ದೇವಸ್ಥಾನಗಳಲ್ಲಿ ಪ್ರಸಾದ, ತೀರ್ಥ ವಿತರಣೆಗೆ ಅವಕಾಶವಿಲ್ಲ. ವಿಗ್ರಹಗಳನ್ನೂ ಮುಟ್ಟುವಂತಿಲ್ಲ. 65 ವರ್ಷ ಮೇಲಿನ, 10 ವರ್ಷ ಕೆಳಗಿನವರು, ಗರ್ಭಿಣಿಯರು ಸಾಧ್ಯವಾದಷ್ಟು ಮನೆಯಲ್ಲೇ ಇರಲಿ ಎಂದು ಇದರಲ್ಲಿ ಉಲ್ಲೇಖೀಸಲಾಗಿದೆ.

6 ಅಡಿ ದೈಹಿಕ ಅಂತರ ಕಾಪಾಡಿಕೊಳ್ಳುವುದು, ಕಡ್ಡಾಯ ಮಾಸ್ಕ್, ಒಳ ಪ್ರವೇಶಿಸುವಾಗ ಕೈ-ಕಾಲು ತೊಳೆಯುವುದು, ಆರೋಗ್ಯ ಸೇತು ಆ್ಯಪ್‌ ಹೊಂದಿರುವುದು ಮುಂತಾದ ನಿಯಮಗಳನ್ನು ಎಲ್ಲ ಕಡೆಯೂ ಅನುಸರಿಸುವಂತೆ ಸೂಚಿಸಲಾಗಿದೆ. ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್‌ ಮತ್ತು ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ. ರೋಗ ಲಕ್ಷಣ ಇದ್ದವರಿಗೆ ಪ್ರವೇಶ ನಿಷೇಧಿಸಲಾಗಿದೆ.

ಶಾಪಿಂಗ್‌ ಮಾಲ್‌
ಸಾಮಾನ್ಯ ನಿಯಮಾವಳಿಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮವನ್ನು ಮಾಲ್‌ ಗಳು ತೆಗೆದುಕೊಳ್ಳಬೇಕು. ವ್ಯಾಲೆಟ್‌ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸುವ ವೇಳೆಯೂ ಸೂಕ್ತ ನಿಯಮಗಳನ್ನು ಪಾಲಿಸಬೇಕು. ವಾಹನಗಳ ಸ್ಟೇರಿಂಗ್‌,ಡೋರ್‌ ಹ್ಯಾಂಡಲ್‌ಗ‌ಳು, ಕೀಲಿಕೈ ಇತ್ಯಾದಿಗಳನ್ನು ಸೋಂಕು ನಿವಾರಕಗ ಳಿಂದ ಸ್ವತ್ಛಗೊಳಿಸಬೇಕು. ಶೌಚಾಲಯಗಳು, ಕುಡಿಯುವ ನೀರು, ಕೈತೊಳೆಯುವ ನೀರಿರುವ ಪ್ರದೇಶಗಳನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು.

ಫುಡ್‌ ಕೋರ್ಟ್‌ಗಳಲ್ಲಿ
ಶೇ. 50ಕ್ಕಿಂತ ಹೆಚ್ಚು ಆಸನಗಳು ಭರ್ತಿಯಾಗದಂತೆ ನೋಡಿಕೊಳ್ಳಬೇಕು, ಆಹಾರ ಆರ್ಡರ್‌ ಮಾಡಲು ಸಂಪರ್ಕರಹಿತ ವಿಧಾನ ಮತ್ತು ಡಿಜಿಟಲ್‌ ಪಾವತಿಗೆ ಒತ್ತು ಕೊಡಬೇಕು, ಅಡುಗೆ ಮನೆಯಲ್ಲಿಯೂ ಸಿಬಂದಿ ಸೂಕ್ತ ಶಾರೀರಿಕ ಅಂತರ ಕಾಯ್ದುಕೊಳ್ಳಬೇಕು.

ಸೋಂಕುಪೀಡಿತರು ಪತ್ತೆಯಾದರೆ?
ಮಾಲ್‌ಗ‌ಳು, ಫುಡ್‌ ಕೋರ್ಟ್‌ಗಳ ಆವರಣದಲ್ಲಿ ಸೋಂಕುಪೀಡಿತ ಅಥವಾ ಶಂಕಿತ ವ್ಯಕ್ತಿ ಪತ್ತೆಯಾದರೆ ಕೂಡಲೇ ಆತನನ್ನು ಪ್ರತ್ಯೇಕಿಸಿದ ಕೋಣೆಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ.

ರೆಸ್ಟಾರೆಂಟ್‌ಗಳಲ್ಲಿ: ಪಾರ್ಸೆಲ್‌ಗೆ ಒತ್ತು ನೀಡಬೇಕು, ಆಹಾರ ಡೆಲಿವರಿ ಮಾಡುವ ಸಿಬಂದಿ ಗ್ರಾಹಕರ ಮನೆ ಬಾಗಿಲಿನ ಹೊರಗೆ ಆಹಾರದ ಪ್ಯಾಕೆಟ್‌ ಇಟ್ಟು ವಾಪಸಾಗಬೇಕು.ಗ್ರಾಹಕರ ಕೈಗೆ ನೇರವಾಗಿ ಆಹಾರ ಹಸ್ತಾಂತರಿಸುವಂತಿಲ್ಲ. ಪ್ರತಿ ಸಿಬಂದಿಯನ್ನು ರೆಸ್ಟಾರೆಂಟ್‌ನವರೇ ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸ ಬೇಕು. ಬಳಸಿ ಬಿಸಾಡಬಹುದಾದ ಮೆನುಗಳನ್ನು ಬಳಸಿದರೆ ಉತ್ತಮ. ಬಟ್ಟೆಯ ನ್ಯಾಪಿRನ್‌ ಬದಲು ಉತ್ತಮ ಗುಣಮಟ್ಟದ ಪೇಪರ್‌ ನ್ಯಾಪಿRನ್‌ ಬಳಕೆಗೆ ಒತ್ತು ನೀಡಬೇಕು.

ಏನೇನು ನಿಯಮಗಳು?
-ಪ್ರಸಾದ ವಿತರಣೆ/ತೀರ್ಥ ನೀಡುವಂತಿಲ್ಲ.
-ಕೈ-ಕಾಲು ತೊಳೆದು ಪ್ರವೇಶಿಸಬೇಕು.
-ಮೂರ್ತಿ/ಪವಿತ್ರ ಗ್ರಂಥ ಸ್ಪರ್ಶಿಸುವಂತಿಲ್ಲ.
-ಹೆಚ್ಚು ಸಂಖ್ಯೆಯ ಜನರು ಸೇರುವಂತಿಲ್ಲ, ಸಾಮೂಹಿಕ ಭಜನೆ, ಗಾಯನ ಸಲ್ಲದು.
-ಎಲ್ಲರಿಗೂ ಒಂದೇ ಮ್ಯಾಟ್‌ ಹಾಸುವಂತಿಲ್ಲ, ಭಕ್ತರು ಸ್ವತಃ ಮ್ಯಾಟ್‌ ತರಬಹುದು.
-ಅನ್ನದಾನ ವ್ಯವಸ್ಥೆಯಿದ್ದರೆ ಅಲ್ಲೂ ಶಾರೀರಿಕ ಅಂತರ ಕಾಪಾಡಿಕೊಳ್ಳಬೇಕು.
=ಪಾದರಕ್ಷೆಗಳನ್ನು ಭಕ್ತರು ತಮ್ಮ ವಾಹನ ದೊಳಗೆ ಬಿಟ್ಟು ಬರುವುದು ಉತ್ತಮ.
ಕ್ಯೂ ನಿರ್ವಹಣೆಗಾಗಿ ನಿರ್ದಿಷ್ಟ ಮಾರ್ಕಿಂಗ್‌ಮಾಡಿ ಅಂತರ ಕಾಯಬೇಕು.
ಆರಾಧನಾಲಯಗಳಲ್ಲಿ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಕಲ್ಪಿಸಬೇಕು.

ಟಾಪ್ ನ್ಯೂಸ್

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

rain

IMD; ದೇಶದಲ್ಲಿ ಈ ಬಾರಿ ಮುಂಗಾರಿನಲ್ಲಿ ಹೆಚ್ಚು ಮಳೆ: ಹವಾಮಾನ ಇಲಾಖೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

12-

Gangolli: ರಿಕ್ಷಾ-ಕಾರು ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.