ಭಾರತ ರತ್ನ ಪ್ರಣಬ್‌ ಮುಖರ್ಜಿ ನಡೆದು ಬಂದ ಹಾದಿ


Team Udayavani, Aug 31, 2020, 8:47 PM IST

36

ಮಣಿಪಾಲ: ಭಾರತದ ರಾಜಕೀಯ ಇತಿಹಾಸದಲ್ಲಿ ಐದು ದಶಕಗಳ ಕಾಲ ಸೇವೆ ಸಲ್ಲಿಸಿದವರು ಪ್ರಣಬ್ ಮುಖರ್ಜಿ. ಮುಖರ್ಜಿ ಅವರು ಬೆಂಗಾಲಿ ಕುಟುಂಬದಲ್ಲಿ 1935ರ ಡಿಸೆಂಬರ್ 11ರಂದು ಮಿರಾಟಿ ಹಳ್ಳಿಯಲ್ಲಿ ಜನಿಸಿದ್ದರು. ಇವರ ತಂದೆ ಕಾಮಾದಾ ಕಿಂಕರ್ ಮುಖರ್ಜಿ ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತಾಯಿ ರಾಜಲಕ್ಷ್ಮಿ ಮುಖರ್ಜಿ.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಆಗಿರುವ ಮುಖರ್ಜಿ ಭಾರತ ಸರ್ಕಾರದಲ್ಲಿ ಹಲವಾರು ಪ್ರಮುಖ ಸಚಿವ ಸ್ಥಾನ ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2009ರಿಂದ 2012ರವರೆಗೆ ವಿತ್ತ ಸಚಿವರಾಗಿ ಅವ ಕಾರ್ಯನಿರ್ವಹಿಸಿದ್ದರು. 2019ರಲ್ಲಿ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಗೆ ಮುಖರ್ಜಿ ಭಾಜನರಾಗಿದ್ದರು. 2012ರಿಂದ 2017ರವರೆಗೆ ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.  ಇಲ್ಲಿ ಅವರು ನಡೆದು ಬಂದ ಹಾದಿಯ ಕಿರು ಪರಿಚಯ ನೀಡಲಾಗಿದೆ.

ಜನನ: ಬ್ರಿಟಿಷ್‌ ಭಾರತದ ಅವಧಿಯಲ್ಲಿ ಬಂಗಾಲ ಪ್ರಾಂತ್ಯದಲ್ಲಿ (ಪಶ್ಚಿಮ ಬಂಗಾಲದ ಬಿರಭೂಮ್‌ ಜಿಲ್ಲೆ) 1935ರ ಡಿಸೆಂಬರ್‌ 11ರಂದು ಜನನ.
ತಂದೆ: ಕೆ.ಕೆ. ಮುಖರ್ಜಿ (ಸ್ವಾತಂತ್ರ್ಯ ಚಳುವಳಿಗಾರ) ತಾಯಿ: ರಾಜ್‌ಲಕ್ಷ್ಮೀ ಮುಖರ್ಜಿ
ಶಿಕ್ಷಣ: ಸುರಿಯಲ್ಲಿನ ವಿದ್ಯಾಸಾಗರ ಕಾಲೇಜಿನಲ್ಲಿ ಶಿಕ್ಷಣ, ಕೋಲ್ಕತ್ತಾ ವಿಶ್ವವಿದ್ಯಾಲಯ. ಎಂಎ (ಇತಿಹಾಸ), ಡಿಬ್ರುರ್ಗ ವಿ.ವಿ., ಅಸ್ಸಾಂ ಇದರಿಂದ ಅಂತಾರಾಷ್ಟ್ರೀಯ ವ್ಯವಹಾರ ವಿಷಯದ ಮೇಲೆ ಸ್ನಾತಕೋತ್ತರ ಪದವಿ. University of Wolverhampton ನಿಂದ 2011ರಲ್ಲಿ ಡಿಲಿಟ್‌ ಪದವಿ
ವೃತ್ತಿ: ಆರಂಭದಲ್ಲಿ ಕೋಲ್ಕತಾದ ಪೋಸ್ಟ್‌ ಆ್ಯಂಡ್‌ ಟೆಲಿಗ್ರಾಫ್ ಕಚೇರಿಯಲ್ಲಿ ಕ್ಲರ್ಕ್‌ ಆಗಿ ಸೇವೆ. “ದೇಶಿರ್‌ ದಕ್‌ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯ, ಕೋಲ್ಕತ್ತಾದ ವಿದ್ಯಾಸಾಗರ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನ ವಿಷಯದ ಉಪನ್ಯಾಸಕರಾಗಿ (ಸಹಾಯಕ ಪ್ರಾಧ್ಯಾಪಕ) ಸೇವೆ.
ಹವ್ಯಾಸ: ತೋಟಗಾರಿಕೆ, ಡೈರಿ ಬರೆಯುವುದು, ಸಂಗೀತ, ಸಾಹಿತ್ಯ
ಆಹಾರ ಅಭ್ಯಾಸ: ಶಾಖಾಹಾರಿ ಆಹಾರವನ್ನು ಇಷ್ಟಪಡುವ ಪ್ರಣಬ್‌, ಮಾಂಸಹಾರಿಯೂ ಹೌದು. ಬೆಂಗಾಲಿ ಶೈಲಿ ಪಾಯಸ, ಪತ್ನಿ ಕೈರುಚಿ ಇಷ್ಟಪಡುತ್ತಿದ್ದರು.
ವಿವಾಹ: 1957ರ ಜುಲೈ 13ರಂದು ಸುವ್ರಾ ಮುಖರ್ಜಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ. ಶರ್ಮಿಷ್ಟಾ ಮುಖರ್ಜಿ, ಅಭಿಜಿತ್‌ ಮುಖರ್ಜಿ ಹಾಗೂ ಇಂದ್ರಜಿತ್‌ ಮುಖರ್ಜಿ ಎಂಬ ಮೂವರು ಮಕ್ಕಳ ತುಂಬು ಕುಟುಂಬ.
1969: ಇಂದಿರಾ ಗಾಂಧಿ ಅವರ ವಿಶೇಷ ಚಿತ್ತದಿಂದ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ಆಯ್ಕೆ.
1973: ಇಂದಿರಾ ಗಾಂಧಿ ಅವರ ಸಂಪುಟದಲ್ಲಿ ಸಚಿವ.
1975-77: ಅವಧಿಯ ಆಂತರಿಕ ತುರ್ತು ಪರಿಸ್ಥಿತಿ ವೇಳೆ ಆರೋಪಕ್ಕೆ ಗುರಿಯಾದವರಲ್ಲಿ ಇವರೂ ಒಬ್ಬರು.
1982-84: ಹಣಕಾಸು ಸಚಿವ, 1980ರಿಂದ 85ರ ವರೆಗೆ ರಾಜ್ಯಸಭೆಯ ನಾಯಕರಾಗಿಯೂ ಸೇವೆ.
1984: ಯೂರೋನಮಿ ಮ್ಯಾಗಜಿನ್‌ ಪ್ರಣವ್‌ ಮುಖರ್ಜಿಯನ್ನು ಜಗತ್ತಿನ ಅತ್ಯುತ್ತಮ ಹಣಕಾಸು ಸಚಿವ
1984: ಇಂದಿರಾ ಗಾಂಧಿ ಹತ್ಯೆ. ಕೈತಪ್ಪಿದ ಪ್ರಧಾನಿ ಪಟ್ಟ
1986-89: ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್‌ ಎಂಬ ಸ್ವಂತ ಪಕ್ಷದ ಸ್ಥಾಪನೆ.
1989: ರಾಜೀವ್‌ ಗಾಂಧಿ ಅವರ ಜತೆ ಸಂಧಾನ ಕಾಂಗ್ರೆಸ್‌ನೊಂದಿಗೆ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್‌ ವಿಲಿನಗೊಳಿಸಿದರು.
1991: ರಾಜೀವ್‌ ಗಾಂಧಿ ಹತ್ಯೆ. ಬಳಿಕ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್‌ ಅವರಿಂದ ಅವರನ್ನು ಯೋಜನಾ ಆಯೋಗದ ಮುಖ್ಯಸ್ಥರಾಗಿ ಮುಖರ್ಜಿ ನೇಮಕ.
1995: ಪಿ.ವಿ. ನರಸಿಂಹರಾವ್‌ ಸರಕಾರದಲ್ಲಿ ವಿದೇಶಾಂಗ ಸಚಿವ, ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾಗಿ ಗುರುತಿಸಿಕೊಂಡ ಮುಖರ್ಜಿ.
1995: ಸೋನಿಯಾ ಗಾಂಧಿ ಅವರ ರಾಜಕೀಯ ಮಾರ್ಗದರ್ಶಕರಾಗಿ ನೇಮಕ. 1998ರಲ್ಲಿ ಸೋನಿಯಾ ಕಾಂಗ್ರೆಸ್‌ ಅಧ್ಯಕ್ಷರಾಗುವಲ್ಲಿ ಪ್ರಮುಖ ಪಾತ್ರ.
2004: ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಪ್ರೊಗ್ರೇಸ್ಸಿವ್‌ ಅಲೈಯನ್ಸ್‌ (ಯುಪಿಎ) ಸರಕಾರ 2004ರಲ್ಲಿ ಮರಳಿ ಅಧಿಕಾರಕ್ಕೆ.
2004: ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ನಿಂತು ಗೆದ್ದು ಬಂದ ಮುಖರ್ಜಿ.
2012: 2004ರಿಂದ ಅವರು ರಾಜೀನಾಮೆ ನೀಡುವ ವರೆಗೂ (2012) ಪ್ರಧಾನಿ ಮನಮೋಹನ್‌ ಸಿಂಗ್‌ ಸರಕಾರದಲ್ಲಿ ಎರಡನೇ ವ್ಯಕ್ತಿಯಾಗಿಯೇ ಗುರುತಿಸಿಕೊಳ್ಳುತ್ತಾರೆ.
2004-06: ರಕ್ಷಣಾ ಖಾತೆ, 2006-09ರ ವರೆಗೆ ವಿದೇಶಾಂಗ ಖಾತೆ, 2009ರಿಂದ 2012ರ ವರೆಗೆ ಹಣಕಾಸು ಖಾತೆ ನಿರ್ವಹಣೆ.
2004-12: ಸರಕಾರದ ಹಲವು ಸಮಿತಿಗಳ ಮುಖ್ಯಸ್ಥರಾಗಿಯೂ ಮತ್ತು ಲೋಕಸಭಾ ನಾಯಕರಾಗಿಯೂ ಸೇವೆ.
2010: ವಿಶ್ವಬ್ಯಾಂಕ್‌ ಮತ್ತು ಐಎಂಎಫ್ ಪರಿಗಣಿಸುವ ಎಮರ್ಜಿಂಗ್‌ ಮಾರ್ಕೆಟ್ಸ್‌ ದಿನ ಪತ್ರಿಕೆ ನಡೆಸಿರುವ ಸಮೀಕ್ಷೆಯಲ್ಲಿ ಏಷ್ಯಾದಲ್ಲಿನ ವರ್ಷದ ಹಣಕಾಸು ಸಚಿವ ಪುರಸ್ಕಾರ.
2012: ಜುಲೈನಲ್ಲಿ ಯುಪಿಎ ಮೈತ್ರಿ ಕೂಟದಿಂದ ಮುಖರ್ಜಿ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ನಾಮನಿರ್ದೇಶನ. ಪ್ರತಿಸ್ಪರ್ಧಿ ಪಿ.ಎ.ಸಂಗ್ಮಾ ಅವರನ್ನು ಭಾರೀ ಮತಗಳ ಅಂತರದಲ್ಲಿ ಸೋಲಿಸಿ ಭಾರತದ ಮೊದಲ ಪ್ರಜೆಯಾಗಿ ಆಯ್ಕೆ.
2017: ಮುಖರ್ಜಿ ಅವರ ರಾಷ್ಟ್ರಪತಿ ಅವಧಿ ಮುಕ್ತಾಯವಾದ ಬಳಿಕ ಅವರು ಮತ್ತೆ ರಾಷ್ಟ್ರಪತಿ ಮರುಚುನಾವಣೆಯಲ್ಲಿ ಅಭ್ಯರ್ಥಿಯಾಗಲು ನಕಾರ.
2017: ವಯೋಸಹಜ ಆರೋಗ್ಯ ಸಮಸ್ಯೆಯ ಕಾರಣ ರಾಜಕೀಯದಿಂದ ನಿವೃತ್ತಿ.
2017: ಜುಲೈ 25ರಂದು ಅವರ ರಾಷ್ಟ್ರಪತಿ ಅವಧಿ ಮುಕ್ತಾಯ.
2018: ಜೂನ್‌ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಸಮಾರಂಭದಲ್ಲಿ ಭಾಗಿ.
2019: ಭಾರತದ ಅತ್ಯುನ್ನತ “ಭಾರತ ರತ್ನ’ ಪುರಸ್ಕಾರ

 

 

 

 

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.