ಮರದಲ್ಲಿ ಅಡಗಿದ್ದ ಜವರಾಯ: ಕಾರು ಚಾಲಕ ದಾರುಣ ಸಾವು
Team Udayavani, Jan 2, 2022, 12:24 PM IST
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಅಡ್ಡಹೊಳೆ ಸಮೀಪದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಇಂಜಿನ್ ಪರೀಕ್ಷಿಸುತ್ತಿದ್ದ ಕಾರಿನ ಚಾಲಕನ ಮೇಲೆ ಮರ ಬಿದ್ದು ದಾರುಣವಾಗಿ ಸಾವನ್ನಪಿದ ಘಟನೆ ನಡೆದಿದೆ.
ಮಂಗಳೂರಿನ ಪಾವಂಜೆಯಿಂದ ಕುಟುಂಬ ಸಮೇತ ಬೆಂಗಳೂರಿಗೆ ತೆರಳುತ್ತಿದ್ದ ಸುರೇಶ್ ನಾವಡ (42) ಮೃತ ದುರ್ದೈವಿ.
ಪತ್ನಿ ಹಾಗೂ ಇಬ್ಬರು ಮಕ್ಕಳು ಕಾರಿನಿಂದ ಕೆಳಗಿಳಿದಿದ್ದರು. ಸ್ಚಲ್ಪ ದೂರವಿದ್ದ ಕಾರಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿಯಿಂದ ಬೆಂಗಳೂರಿಗೆ ತೆರಳುತ್ತಿರುವ ವೇಲೆ ಅಡ್ಡಹೊಳೆ ಸಮೀಪ ಇಂಜಿನ್ನಲ್ಲಿ ಶಬ್ದ ಬಂದ ಹಿನ್ನೆಲೆ ಚಾಲಕ ಕಾರು ನಿಲ್ಲಿಸಿ, ಬಾನೆಟ್ ತೆರೆದು ಪರೀಕ್ಷಿಸುತ್ತಿದ್ಸದ ವೇಳೆ ದೂಪದ ಮರದ ಬೃಹತ್ ಕೊಂಬೆ ಏಕಾಏಕಿ ಬಿದ್ದಿದೆ.
ನೆಲ್ಯಾಡಿ ಹೊರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ