ತಿರುಪತಿ: ಸ್ಥಳೀಯರಿಗಷ್ಟೇ ವೈಕುಂಠ ದರ್ಶನ ಟಿಕೆಟ್ ವಿತರಿಸಲು ಟಿಟಿಡಿ ನಿರ್ಧಾರ
Team Udayavani, Dec 19, 2020, 9:17 PM IST
ತಿರುಪತಿ: ಪ್ರಸಕ್ತ ವರ್ಷ ವೈಕುಂಠ ದ್ವಾರ ದರ್ಶನ ಟೋಕನ್ಗಳನ್ನು ಕೇವಲ ಸ್ಥಳೀಯ ಭಕ್ತರಿಗಷ್ಟೇ ವಿತರಿಸಲು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ನಿರ್ಧರಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಲಿಪಿರಿ ಸಮೀಪದ ವಿಷ್ಣು ನಿವಾಸ ಮತ್ತು ಭೂದೇವಿ ಸಂಕೀರ್ಣದಲ್ಲಿ ಸರ್ವದರ್ಶನ ಟೋಕನ್ ವಿತರಣೆಯ ಕೌಂಟರ್ಗಳು ಡಿ.21(ಸೋಮವಾರ) ಸಂಜೆ 5 ಗಂಟೆಗೆ ಮುಚ್ಚಲಿವೆ. ಡಿ.22, 23 ಮತ್ತು 24ರ ದರ್ಶನ ಟೋಕನ್ಗಳನ್ನು ಕೂಡ ಸೋಮವಾರಕ್ಕೂ ಮುನ್ನವೇ ವಿತರಿಸಲಾಗುತ್ತದೆ. ತಿರುಪತಿಯ 5 ನಿಗದಿತ ಪ್ರದೇಶಗಳಲ್ಲಿ ಟೋಕನ್ ಲಭ್ಯವಿದ್ದು, ಸ್ಥಳೀಯರು ತಮ್ಮ ಆಧಾರ್ ಕಾರ್ಡ್ ತೋರಿಸಿ ಸರ್ವದರ್ಶನ ಟೋಕನ್ ಖರೀದಿಸಬಹುದು ಎಂದು ಟಿಟಿಡಿ ಹೇಳಿದೆ.
ಇದೇ ವೇಳೆ, ತಿರುಚನೂರಿನ ಶ್ರೀ ಪದ್ಮಾವತಿ ದೇವಿ ದೇಗುಲದ ದರ್ಶನದ ಸಮಯವನ್ನು ಇನ್ನೂ 1 ಗಂಟೆ ವಿಸ್ತರಿಸಲಾಗಿದೆ. ಈ ಮೊದಲು ಬೆಳಗ್ಗೆ 7.30ರಿಂದ ರಾತ್ರಿ 7ರವರೆಗೆ ದರ್ಶನಕ್ಕೆ ಅವಕಾಶವಿತ್ತು. ಈಗ ಅದನ್ನು ರಾತ್ರಿ 8ರವರೆಗೆ ವಿಸ್ತರಿಸಲಾಗಿದೆ. ಏಕನಾಥ ಸೇವೆ ರಾತ್ರಿ 8.30ಕ್ಕೆ ನಡೆಯಲಿದೆ ಎಂದು ಟಿಟಿಡಿ ತಿಳಿಸಿದೆ.
ಇದನ್ನೂ ಓದಿ:ಬ್ಯಾಂಕ್ ವಂಚನೆ ಪ್ರಕರಣ : ಟ್ರಾನ್ಸ್ಸಿಟಿ ವಿರುದ್ಧ ತನಿಖೆ ಆರಂಭಿಸಿದ ಸಿಬಿಐ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು