ಒಂದೆಡೆ ಅನ್ನಬ್ರಹ್ಮ , ಇನ್ನೊಂದೆಡೆ ನಾದಬ್ರಹ್ಮನ ಸಂಕೇತ…


Team Udayavani, Feb 18, 2021, 5:45 AM IST

ಒಂದೆಡೆ ಅನ್ನಬ್ರಹ್ಮ , ಇನ್ನೊಂದೆಡೆ ನಾದಬ್ರಹ್ಮನ ಸಂಕೇತ…

ಉಡುಪಿ: ಉಡುಪಿಯ ಶ್ರೀಕೃಷ್ಣ ಅನ್ನಬ್ರಹ್ಮ, ಪಂಢರಪುರದ ವಿಟ್ಟಲ ನಾದಬ್ರಹ್ಮ ಎಂಬ ಮಾತಿದೆ. ಬುಧವಾರ ಇವೆರಡೂ ಮಾತಿಗೆ ಉಡುಪಿ ಸಾಕ್ಷಿಯಾಯಿತು.

ಶ್ರೀಕೃಷ್ಣನ ಸನ್ನಿಧಿಯಲ್ಲಿ ಮುಂದೆ ಪರ್ಯಾಯ ಪೀಠಾರೋಹಣ ಮಾಡಲಿರುವ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಪರ್ಯಾಯ ಪೂರ್ವಭಾವಿಯಾಗಿ ನಡೆಸುವ ಅಕ್ಕಿ ಮುಹೂರ್ತವನ್ನು ನಡೆಸಿದರು. ಅನ್ನಸಂತರ್ಪಣೆಗೆ ಬೇಕಾದ ಸಿದ್ಧತೆಯ ಸಂಕೇತ ಇದಾಗಿದೆ. ಇದೇ ವೇಳೆ ರಥಬೀದಿಗೆ ಅನತಿ ದೂರದಲ್ಲಿರುವ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ 120ನೆಯ ಭಜನ ಸಪ್ತಾಹ ಮಹೋತ್ಸವ ಶುಭಾರಂಭಗೊಂಡಿತು. ವಾರಪೂರ್ತಿ ಇಲ್ಲಿ ನಾಮ ಸಂಕೀರ್ತನೆ, ತಾಳದ ಸದ್ದು ನಡೆಯುತ್ತಿರುತ್ತವೆ. ಇಲ್ಲಿನ ಸಪ್ತಾಹದಲ್ಲಿ ವಿಶೇಷ ಪೂಜೆಗೊಳ್ಳುವುದು ಪಂಢರಪುರದ ವಿಟ್ಟಲ ರುಖುಮಾಯಿ. ಈ ನಾದಸಂಕೀರ್ತನೆಯ ಸಪ್ತಾಹ ಉತ್ಸವವನ್ನು ಕಾಶೀ ಮಠದ ಶ್ರೀಸಂಯಮೀಂದ್ರತೀರ್ಥ ಶ್ರೀಪಾದರು ದೀಪಪ್ರಜ್ವಲಿಸಿ ಉದ್ಘಾಟಿಸಿದರು.

ಕೃಷ್ಣಾಪುರ ಮಠ ಮತ್ತು ರಥಬೀದಿಯಲ್ಲಿ ಬುಧವಾರ ಬೆಳಗ್ಗೆ ವಾದ್ಯ – ಮಂತ್ರ ಘೋಷ, ನಗಾರಿ, ಕದೋನಿಗಳ ಸುದ್ದಿ ಕೇಳುತಿದ್ದರೆ, ವೆಂಕಟರಮಣ ದೇವಸ್ಥಾನದ ಪರಿಸರದಲ್ಲಿ ಭಜನೆಯ ಸದ್ದು ಕೇಳುತ್ತಿತ್ತು.

ವಿವಿಧ ಮಠಾಧೀಶರು ಕೃಷ್ಣಾಪುರ ಮಠದಿಂದ ಗೌರವ ಸ್ವೀಕರಿಸಿ ಶುಭ ಹಾರೈಸಿದರು. ಮಾಜಿ ಸಚಿವ ವಿನಯಕುಮಾರ ಸೊರಕೆ, ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಡಾ|ಲಕ್ಷ್ಮೀನಾರಾಯಣ ಭಟ್‌, ಗಣ್ಯರಾದ ಹರಿಕೃಷ್ಣ ಪುನರೂರು, ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ, ವಾಸುದೇವ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಪ್ರದೀಪಕುಮಾರ ಕಲ್ಕೂರ, ಭುವನಾಭಿರಾಮ ಉಡುಪ, ಕೆ.ಶ್ರೀಪತಿ ಭಟ್‌ ಮೂಡಬಿದಿರೆ, ಕುಂಭಾಸಿ ದೇವಸ್ಥಾನದ ಶ್ರೀರಮಣ ಉಪಾಧ್ಯಾಯ, ಸೂರ್ಯನಾರಾಯಣ ಉಪಾಧ್ಯಾಯ ಮೊದಲಾದವರು ಪಾಲ್ಗೊಂಡಿದ್ದರು.

ಭಜನೆ ಮಹತ್ವ
ಭಜನ ಸಪ್ತಾಹ ಆರಂಭಗೊಂಡ ಹಿನ್ನೆಲೆಯಲ್ಲಿ ಭಜನೆ/ ಭಗವಂತನ ನಾಮಸಂಕೀರ್ತನೆ ಮಹತ್ವವನ್ನು ಕಾಶೀ ಮಠಾಧೀಶರು ಮತ್ತು ಪೇಜಾವರ ಮಠಾಧೀಶರು ಹೀಗೆ ಉಭಯ ಶ್ರೀಗಳು ವೆಂಕಟರಮಣ ದೇವಸ್ಥಾನದಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ನಡೆದ ಸಭೆಯಲ್ಲಿ ಸಾರಿದರು.

ಭಗವಂತ ಭಕ್ತಿಗೆ ಮಾತ್ರ ಒಲಿಯುತ್ತಾನೆ. ಭಗವಂತ ಮತ್ತು ಭಕ್ತರ ನಡುವಿನ ಕೊಂಡಿ ಭಕ್ತಿ. ಭಜನೆಯಲ್ಲಿ ಮಾತ್ರ ಭಗವಂತ ಮತ್ತು ಭಕ್ತರ ನಡುವೆ ಯಾವುದೇ ಮಧ್ಯವರ್ತಿಗಳ ಅಗತ್ಯವಿರುವುದಿಲ್ಲ, ನೇರ ಸಂವಹನ ಸಾಧ್ಯ. ಭಕ್ತರ ಒಗ್ಗೂಡುವಿಕೆಯೂ ಸಾಧ್ಯ. ಏಕೆಂದರೆ ಒಬ್ಬರೇ ಹಾಡಿದರೆ ಅದು ಹಾಡುಗಾರಿಕೆ ಆಗುತ್ತದೆ. ಎಲ್ಲರು ಜತೆಗೂಡಿ ಹಾಡಿದರೆ ಭಜನೆ ಆಗುತ್ತದೆ ಎಂದು ಶ್ರೀವಿಶ್ವಪ್ರಸನ್ನತೀರ್ಥರು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ನೂತನ ದೀಪಸ್ತಂಭವನ್ನು ಮತ್ತು ಸಮಾರಾಧನೆಗಾಗಿ ನಿರ್ಮಿಸಿದ ಪಾತ್ರೆಗಳನ್ನು ಸ್ವಾಮೀಜಿ ದೇವರಿಗೆ ಸಮರ್ಪಿಸಿದರು.

ಅನ್ನದಾನದ ಮಹತ್ವ
ಕೃಷ್ಣಾಪುರ ಮಠದಲ್ಲಿ ಪೂಜೆ ಮುಗಿಸಿ ಅಕ್ಕಿ ಮುಡಿಯ ಮೆರವಣಿಗೆಯಲ್ಲಿ ಸಾಗಿದ ಶ್ರೀವಿದ್ಯಾಸಾಗರತೀರ್ಥರು ಚಂದ್ರಮೌಳೀಶ್ವರ, ಅನಂತೇಶ್ವರ, ಕೃಷ್ಣ- ಮುಖ್ಯಪ್ರಾಣರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಸಿ ಕೃಷ್ಣಾಪುರ ಮಠದಲ್ಲಿ ಹಾಕಿದ ಚಿನ್ನದ ಮಂಟಪದಲ್ಲಿ ಅಕ್ಕಿಮುಡಿ ಇರಿಸಿ ಮುಹೂರ್ತ ನಡೆಸಿದರು. ಅನ್ನದಾನಕ್ಕೆ ಮಹತ್ವ ಇರುವುದರಿಂದ ಇದಕ್ಕಾಗಿ ಸಂಗ್ರಹಿಸುವ ಅಕ್ಕಿ ಮುಹೂರ್ತಕ್ಕೂ ಮಹತ್ವವಿದೆ ಎಂದು ಕೃಷ್ಣಾಪುರ ಶ್ರೀಗಳು ಹೇಳಿದರು.

ಮನಸ್ಸಿನ ಶುದ್ಧತೆಗೆ ಭಜನೆ ಕಾರಣ
ಗೌಡ ಸಾರಸ್ವತ ಬ್ರಾಹ್ಮಣರು ಮೂಲತಃ ಕಾಶ್ಮೀರದವರು/ ಉತ್ತರ ಭಾರತದವರು. ಆದರೆ ನಮ್ಮ ಪೂರ್ವಿಕರು ವೆಂಕಟರಮಣನನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಇಲ್ಲಿನ ಭಜನ ಸಪ್ತಾಹಕ್ಕೆ 120 ವರ್ಷಗಳ ಇತಿಹಾಸವಿದೆ. “ಕಲಿಯುಗದಲ್ಲಿ ಹರಿ ನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವವು…’, “ಹರಿಭಜನೆ ಮಾಡೋ…’ ಎಂದು ದಾಸರು ಹೇಳಿದ್ದಾರೆ. ನಾಮ ಸಂಕೀರ್ತನೆ ಪಾಪನಾಶಕ ಎಂದು ವಾದಿರಾಜಸ್ವಾಮಿಗಳು ಹೇಳಿದ್ದಾರೆ. ಬಂಧನಕ್ಕೂ, ಮೋಕ್ಷಕ್ಕೂ ಮನಸ್ಸೇಕಾರಣ. ಮನಸ್ಸಿನ ಶುದ್ಧತೆಗೆ ಭಜನೆ ಕಾರಣವಾಗುತ್ತದೆ ಎಂದು ಶ್ರೀಸಂಯಮೀಂದ್ರತೀರ್ಥರು ಬಣ್ಣಿಸಿದರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.