ಶ್ರೀಕೃಷ್ಣಾಷ್ಟಮಿ ವಿಶೇಷ : ಉಡುಪಿ ಶ್ರೀಕೃಷ್ಣಮಠದಲ್ಲಿ ಬಾಲಕೃಷ್ಣಾಲಂಕಾರ
Team Udayavani, Aug 30, 2021, 5:40 PM IST
ಉಡುಪಿ : ಶ್ರೀಕೃಷ್ಣಮಠದಲ್ಲಿ ದಿನವೂ ಬಗೆಬಗೆಯ ಅಲಂಕಾರಗಳನ್ನು ಶ್ರೀಕೃಷ್ಣನಿಗೆ ಮಾಡಿ ಪೂಜಿಸುವ ಕ್ರಮವಿದೆ. ಈ ಬಾರಿ ಶ್ರೀಕೃಷ್ಣಜನ್ಮಾಷ್ಟಮಿ/ ಕೃಷ್ಣ ಜಯಂತಿ ಪ್ರಯುಕ್ತ ಸೋಮವಾರ ಬಾಲಕೃಷ್ಣನ ಅಲಂಕಾರ ಮಾಡಿ ಪೂಜಿಸಲಾಯಿತು. ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಅಲಂಕಾರ ಪೂಜೆ ನಡೆಸಿದರೆ, ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನಡೆಸಿದರು.
ಮಥುರಾ ಪಟ್ಟಣದ ಸೆರೆಮನೆಯಲ್ಲಿ ವಸುದೇವ – ದೇವಕಿಯರಿಗೆ ಶ್ರೀಕೃಷ್ಣ ಹುಟ್ಟಿದ್ದರೂ ಈತನನ್ನು ಮುದ್ದಿಸಿ ಬೆಳೆಸುವ ಅವಕಾಶ ಸಿಕ್ಕಿದ್ದು ಗೋಪಾಲಕರಾದ ನಂದಗೋಪ- ಯಶೋದೆಯರಿಗೆ. ಕಶ್ಯಪ – ಅದಿತಿ ಋಷಿ ದಂಪತಿಗಳು ಅವರು ತಪಸ್ಸು ಮಾಡಿ ಬೇಡಿಕೊಂಡಂತೆ ವಸುದೇವ ದೇವಕಿಯಾಗಿ ಜನಿಸಿ ಶ್ರೀಕೃಷ್ಣ ಪರಮಾತ್ಮನನ್ನು ಪಡೆದರು ಎಂದು ಪುರಾಣಗಳು ಸಾರುತ್ತವೆ. ಕೃಷ್ಣನ ಸೂಚನೆಯಂತೆ ಮಗುವನ್ನು ವಸುದೇವ ರಾತ್ರಿ ಯಮುನಾ ನದಿ ದಾಟಿ ನಂದಗೋಪ- ಯಶೋದೆಯರು ಇರುವ ವ್ರಜ ಭೂಮಿಗೆ (ಬೃಂದಾವನ) ಕರೆದೊಯ್ಯುತ್ತಾನೆ. ಅಲ್ಲಿ ಹುಟ್ಟಿದ ಹೆಣ್ಣು ಶಿಶುವನ್ನು ತಂದು ಸೆರೆಮನೆಯಲ್ಲಿ ಇರಿಸುತ್ತಾನೆ.
ಹೀಗೆ ಕೃಷ್ಣನನ್ನು ಸಾಕಿ ಆಡಿಸುವ ಭಾಗ್ಯ ದೊರಕಿದ್ದು ಯಶೋದೆಗೆ. ಬಾಲಕೃಷ್ಣನಾಗಿ ತೋರಿದ ಲೀಲೆಗಳು ಅನೇಕ. ಯಶೋದೆಗೆ ಅತಿ ಪ್ರೀತಿಪಾತ್ರನಾದ, ತುಂಟಾಟಗಳನ್ನು ನಡೆಸಿದ ಕೃಷ್ಣನನ್ನು ಆತನ ಜನ್ಮದಿನದಂದು ಬಾಲಕೃಷ್ಣನಾಗಿ ಅಲಂಕರಿಸಿ ಪೂಜಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ