ದೀಪಾವಳಿಗೆ ಪಟಾಕಿ ಹಚ್ಚಬೇಕೆ? : ಸರಕಾರದ ಮಾರ್ಗಸೂಚಿ ಅನುಸರಿಸಿ
Team Udayavani, Oct 30, 2021, 3:07 PM IST
ಬೆಂಗಳೂರು : ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ ಆಚರಣೆಗೆ ರಾಜ್ಯ ಸರಕಾರ ಶನಿವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮಾರ್ಗಸೂಚಿಗಳು ಇಂತಿವೆ
ಸುಪ್ರೀಂ ಕೋರ್ಟ್ ಆದೇಶದಂತೆ ‘ಹಸಿರು ಪಟಾಕಿ’ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪಟಾಕಿಗಳನ್ನು ಮಾರಾಟ ಮಾಡಲು ಮತ್ತು ಹಚ್ಚಲು ಅವಕಾಶವಿಲ್ಲ.
ಅಧಿಕೃತ ಪರವಾನಿಗೆ ಪಡೆದವರು ಮಾತ್ರ ವಸತಿ ಪ್ರದೇಶಗಳಿಂದ ದೂರ ಇರುವ ಬಯಲು ಪ್ರದೇಶ ಇಲ್ಲ ಮೈದಾನದಂತಹ ನಿಗದಿತ ಸ್ಥಳಗಳಲ್ಲಿ ಹಸಿರು ಪಟಾಕಿ ಮಾರಬಹುದು.
ಹಸಿರು ಪಟಾಕಿ ಮಳಿಗೆಗಳನ್ನು ನವೆಂಬರ್ 01 ರಿಂದ 10 ವರೆಗೆ ಮಾತ್ರ ತೆರೆಯಬಹುದು.
ಮಳಿಗೆಗಳಲ್ಲಿ ಗಾಳಿಯಾಡುವಂತಿರಬೇಕು ಮತ್ತು ಒಂದು ಮಳಿಗೆಯಿಂದ ಇನ್ನೊಂದು ಮಳಿಗೆಗೆ 6 ಮೀಟರ್ ಅಂತರವಿರಬೇಕು.
ಇಲಾಖೆ ನೀಡಿದ ಪರವಾನಿಗೆ ಪತ್ರ ವನ್ನು ಸಾರ್ವಜನಿಕರಿಗೆ ಕಾಣುವಂತೆ ಇಡಬೇಕು.
ಮಳಿಗೆಯ ಸುತ್ತಮುತ್ತ ಜನದಟ್ಟಣೆಯಾಗದಂತೆ ನೋಡಿಕೊಳ್ಳಬೇಕು, ಪ್ರತಿ ನಿತ್ಯ ಸ್ಯಾನಿಟೈಜ್ ಮಾಡಬೇಕು. ವ್ಯಾಪಾರಸ್ಥರು ಮತ್ತು ಖರೀದಿ ಮಾಡುವವರಿಗೆ ಮಾಸ್ಕ್ ಕಡ್ಡಾಯ.
ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆ, ಸೆಕ್ಷನ್ 188 ಅಡಿಯಲ್ಲಿ ಶಿಸ್ತು ಮತ್ತು ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.