ಲೀಗಲ್ ನೊಟೀಸ್ ಗೆ ನಾವು ಹೆದರಲ್ಲ: ಬಿಜೆಪಿ ವಿರುದ್ಧ ಕಿಡಿಕಾರಿದ ಈಶ್ವರ್ ಖಂಡ್ರೆ
Team Udayavani, Jul 31, 2020, 3:42 PM IST
ಬೆಂಗಳೂರು: ಕೋವಿಡ್ -19 ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ವಿರುದ್ಧ ಬಿಜೆಪಿ ಲೀಗಲ್ ನೊಟೀಸ್ ಕಳುಹಿಸಿದ್ದು, ಇಂತಹ ಲೀಗಲ್ ನೊಟೀಸ್ ಗೆ ನಾವು ಹೆದರಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ನಾವು ಆರೋಪ ಮಾಡಿದ್ದು ಸರ್ಕಾರದ ವಿರುದ್ದ. ಉತ್ತರ ಕೊಡಬೇಕಾಗಿದ್ದು ಸರ್ಕಾರವೇ ಹೊರತು ಇನ್ಯಾರೋ ಪಕ್ಷದವರಲ್ಲ. ಲೀಗಲ್ ನೊಟೀಸ್ ಮೂಲಕ ನಮ್ಮ ಬಾಯಿ ಮುಚ್ಚಿಸುತ್ತೇವೆ ಅಂದುಕೊಂಡರೆ ಅದು ಭ್ರಮೆ ಮಾತ್ರ. ಇಂಥ ಲೀಗಲ್ ನೊಟೀಸ್ ಗೆಲ್ಲ ನಾವು ಹೆದರೋದಿಲ್ಲ ನಮಗೂ ಕಾನೂನು ಹೋರಾಟ ಮಾಡುವುದಕ್ಕೆ ಗೊತ್ತಿದೆ ಎಂದು ಖಂಡ್ರೆ ಹೇಳಿದ್ದಾರೆ.
ಇದನ್ನೂ ಓದಿ: 2000 ಕೋಟಿ ರೂ. ಆರೋಪ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗೆ ಬಿಜೆಪಿಯಿಂದ ಲೀಗಲ್ ನೋಟಿಸ್
ಬಿಜೆಪಿಯ ಈ ನಡೆಯಲ್ಲಿ ಸಂಪೂರ್ಣ ರಾಜಕೀಯ ದುರುದ್ದೇಶವೇ ಕಾಣಿಸುತ್ತಿದೆ. ಅವರು ಲೀಗಲ್ ನೊಟೀಸ್ ಕೊಟ್ಟಿದ್ದಾರಲ್ಲ, ನಾವು ಕೋರ್ಟ್ ಗೇ ದಾಖಲೆ ಕೊಡುತ್ತೇವೆ, ಕೋರ್ಟ್ ನಲ್ಲೇ ಅವರು ಉತ್ತರ ಕೊಡಲಿ. ಇಂಥಹ ಬೆದರಿಕೆಗಳಿಗೆಲ್ಲ ನಮ್ಮ ಪಕ್ಷ ಬೆದರುವುದಿಲ್ಲ ಎಂದು ಖಂಡ್ರೆ ಹೇಳಿದರು.