ಬಂಗಾಲ, ಅಸ್ಸಾಂನಲ್ಲಿಂದು “ಬೀಪ್‌’ ಸದ್ದು :2 ರಾಜ್ಯಗಳ 77 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ


Team Udayavani, Mar 27, 2021, 7:15 AM IST

ಬಂಗಾಲ, ಅಸ್ಸಾಂನಲ್ಲಿಂದು “ಬೀಪ್‌’ ಸದ್ದು :2 ರಾಜ್ಯಗಳ 77 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ಕೋಲ್ಕತಾ: ಜೈಶ್ರೀರಾಮ್‌ನಿಂದ ದುರ್ಯೋಧನನ ತನಕ, ಹೆಲಿಕಾಪ್ಟರ್‌ನಿಂದ ವ್ಹೀಲ್‌ ಚೇರ್‌ವರೆಗೆ, ಔಟ್‌ಸೈಡರ್‌ನಿಂದ ಭೂಮಿ ಪುತ್ರನ ಕಡೆಗೆ, “ಆಟ ಶುರು’ವಿನಿಂದ (ಖೇಲಾ ಹೋಬ್‌) “ವಿಕಾಸ್‌ ಶುರು’ ಘೋಷಣೆವರೆಗೆ, ವರ್ಣರಂಜಿತ ಮತ್ತು ಸಿಡಿಲಬ್ಬರದ ಪ್ರಚಾರಕ್ಕೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಲದಲ್ಲಿ ಶನಿವಾರ ಮೊದಲ ಹಂತದ ಮತದಾನದ “ಬೀಪ್‌’ ಸದ್ದು ಮೊಳಗಲಿದೆ.

ಒಟ್ಟು 5 ಜಿಲ್ಲೆಗಳ 30 ಸ್ಥಾನಗಳಿಗೆ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದೆ. ಬುಡಕಟ್ಟು ಜನಾಂಗದವರೇ ಹೆಚ್ಚು ನೆಲೆಕಂಡಿರುವ ಪಶ್ಚಿಮ ಮಿಡ್ನಾಪುರ ಭಾಗ-1, ಪೂರ್ವ ಮಿಡ್ನಾಪುರ ಭಾಗ-2, ಬಂಕುರಾ, ಝಾರ್‌ಗ್ರಾಮ್‌ ಮತ್ತು ಪುರುಲಿಯಾ ಜಿಲ್ಲೆಗಳ ಮತದಾರರ ಬೆರಳುಗಳಿಗೆ ಇಂದು ಶಾಯಿ ಅಚ್ಚಾಗಲಿದೆ.

191 ಅಭ್ಯರ್ಥಿಗಳ ಹಣೆಬರಹ: 73 ಲಕ್ಷಕ್ಕೂ ಅಧಿಕ ಮತದಾರರು ಕಣದಲ್ಲಿರುವ 191 ಅಭ್ಯರ್ಥಿಗಳ ಹಣೆಬರಹ ತೀರ್ಮಾನಿಸಲಿದ್ದಾರೆ. ಟಿಎಂಸಿ ಮತ್ತು ಬಿಜೆಪಿಯ 29 ಅಭ್ಯರ್ಥಿಗಳು ಅಖಾಡದಲ್ಲಿದ್ದರೆ, ಎಡಪಕ್ಷ- ಕಾಂಗ್ರೆಸ್‌- ಐಎಸ್‌ಎಫ್ ಮೈತ್ರಿಯ 30 ಅಭ್ಯರ್ಥಿಗಳು ಮತ ಪರೀಕ್ಷೆ ಎದುರಿಸಲಿದ್ದಾರೆ. 2016ರಲ್ಲಿ ಈ 30 ಸ್ಥಾನಗಳಲ್ಲಿ ಟಿಎಂಸಿ-27, ಕಾಂಗ್ರೆಸ್‌-2, ಆರ್‌ಎಸ್‌ಪಿ-1 ಸಾಧನೆ ಮೆರೆದಿದ್ದವು.

ಭದ್ರತೆ ಹೇಗಿದೆ?: ಕಳೆದ 2-3 ವರ್ಷಗಳಿಂದ ರಾಜಕೀಯ ಕಗ್ಗೊಲೆ, ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಪ. ಬಂಗಾಳದಲ್ಲಿ ಕೇಂದ್ರ ಭದ್ರತಾ ಪಡೆ ವಿಶೇಷ ಭದ್ರತೆ ಆಯೋಜಿಸಿದೆ. ಒಂದು ಕಾಲದಲ್ಲಿ ನಕ್ಸಲರ ಹಾವಳಿಯಿಂದ ನಲುಗಿದ್ದ ಮಹಲ್‌ ಜಂಗಲ್‌ನ ಬೂತ್‌ಗಳಿಗೆ ಭಾರೀ ಭದ್ರತೆ ನೀಡಲಾಗಿದೆ. ಕೇಂದ್ರ ಭದ್ರತಾಪಡೆಯ 684 ತುಕಡಿಗಳು, 10,288 ಮತ ಕೇಂದ್ರಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾದು, ಶಾಂತಿಯುತ ಮತದಾನಕ್ಕೆ ಶ್ರಮಿಸಲಿವೆ. ಪ. ಬಂಗಾಳದ ಒಟ್ಟು 294 ವಿಧಾನಸಭಾ ಕ್ಷೇತ್ರಗಳಿಗೆ 8
ಹಂತಗಳಲ್ಲಿ ಮತದಾನ ನಡೆಯಲಿದೆ.

ಇವಿಎಂ ಬಟನ್‌ ಒತ್ತಲು ಅಸ್ಸಾಂ ರೆಡಿ
ದಿಸ್ಪುರ: ರಾಜಕೀಯ ಪಕ್ಷಗಳ ಭಾರೀ ಟೀಕಾಮಳೆ ಕಂಡಿದ್ದ “ಟೀ’ ನಾಡು ಅಸ್ಸಾಂನಲ್ಲೂ ಶನಿವಾರ ಮೊದಲ ಹಂತದ ಮತದಾನ ನಡೆಯಲಿದೆ. ಒಟ್ಟು 126 ವಿಧಾನಸಭಾ ಕ್ಷೇತ್ರಗಳ ಪೈಕಿ 47 ಸ್ಥಾನಗಳಿಗೆ ಮತಪರೀಕ್ಷೆ ಸಾಗಲಿದೆ. ಈ ಕ್ಷೇತ್ರಗಳಲ್ಲಿ ಒಟ್ಟು 81,09,815 ಮತದಾರರು 264 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. 40,77,210 ಪುರುಷರು, 40,32,481 ಮಹಿಳೆಯರು, 114 ತೃತೀಯ ಲಿಂಗಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಸಿಎಂ ಸರ್ಬಾನಂದ ಸೋನೊವಾಲ್‌, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ರಿಪುನ್‌ ಬೊರೊ ಸೇರಿದಂತೆ ಪ್ರಮುಖ ಸಚಿವರು, ಮಾಜಿ ಮಂತ್ರಿಗಳ ಭವಿಷ್ಯವನ್ನು ಮತದಾರ ನಿರ್ಧರಿಸಲಿದ್ದಾನೆ. ಜೊಹ್ರಾತ್‌, ಮಾಜುಲಿ, ಸಿಬ್‌ಸಾಗರ್‌, ನಝಿರಾ, ದುಲಿಯಜಾನ್‌, ಗೋಹ್‌ಪುರ, ಬೊಕಖಾತ್‌ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಒಟ್ಟು 479 ಮತಕೇಂದ್ರಗಳನ್ನು ಮಹಿಳಾ ಅಧಿಕಾರಿಗಳೇ ಮುನ್ನಡೆಸುತ್ತಿರುವುದು ಈ ಬಾರಿಯ ವಿಶೇಷ. ಕೇಂದ್ರ ಭದ್ರತಾ ಪಡೆಗಳೊಂದಿಗೆ ರಾಜ್ಯ ಪೊಲೀಸರೂ ಮತಕೇಂದ್ರಗಳಿಗೆ ಭದ್ರತೆ ಒದಗಿಸಲಿದ್ದಾರೆ. ಅಸ್ಸಾಂ ಒಟ್ಟು 3 ಹಂತಗಳ ಮತದಾನಕ್ಕೆ ಸಾಕ್ಷಿಯಾಗಲಿದೆ.

ಲವ್‌, ಲ್ಯಾಂಡ್‌ ಜೆಹಾದ್‌ ವಿರುದ್ಧ ಕಾನೂನು: ಶಾ
ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಪುನಃ ಅಧಿಕಾರಕ್ಕೆ ಬಂದರೆ ಲವ್‌ ಮತ್ತು ಲ್ಯಾಂಡ್‌ ಜೆಹಾದ್‌ ವಿರುದ್ಧ ಕಾನೂನು ಜಾರಿಗೊಳಿಸುತ್ತೇವೆ. ಅಲ್ಲದೆ, ಎಲ್ಲ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಗೂ ಉಚಿತವಾಗಿ ಸ್ಕೂಟಿ ನೀಡುತ್ತೇವೆ ಎಂದು ಗೃಹ ಸಚಿವ ಅಮಿತ್‌ ಶಾ ಘೋಷಿಸಿದ್ದಾರೆ. ಅಸ್ಸಾಂನ ಕಾಮರೂಪ ಜಿಲ್ಲೆಯಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ವಿವಾಹಕ್ಕಾಗಿ ಬಲವಂತದಿಂದ ಮತಾಂತರ ನಡೆಸುವವರ ಮತ್ತು ಸ್ಥಳೀಯ ಅಸ್ಸಾಮಿಗಳ ಭೂಮಿಯನ್ನು ಕಸಿದುಕೊಳ್ಳುವರ ವಿರುದ್ಧ ನಾವು ಕಠಿನ ಕಾನೂನು ಜಾರಿಗೆ ತರುತ್ತೇವೆ’ ಎಂದು ಹೇಳಿದರು. “ಈಗಾಗಲೇ ಪಕ್ಷದ ನೇತೃತ್ವದ ಆಡಳಿತ ಅಸ್ಸಾಂನಲ್ಲಿ ದಂಗೆಮುಕ್ತ, ಭಯೋತ್ಪಾದನೆಮುಕ್ತ ವಾತಾವರಣ ಸೃಷ್ಟಿಸಿದೆ. ಜಾಬ್‌ ಹಬ್‌ ಆಗಿಯೂ ರಾಜ್ಯವನ್ನು ಪರಿವರ್ತಿಸಿದೆ’ ಎಂದು ಮೆಚ್ಚುಗೆ ಸೂಚಿಸಿದರು.

ಕೊರೊನಾ ಭೂತದಿಂದ ಬೂತ್‌ಗಳು ಸೇಫ್
ಕೊರೊನಾ ಭೀತಿ ನಡುವೆ ಚುನಾವಣೆ ನಡೆಯುತ್ತಿರುವ ಕಾರಣ, ಆಯೋಗ ಎಲ್ಲ ಇವಿಎಂ ಯಂತ್ರಗಳನ್ನೂ ಮುಂಚಿತವಾಗಿ ಸ್ಯಾನಿಟೈಸ್‌ ಮಾಡಿದೆ. ನೆಗೆಟಿವ್‌ ದೃಢಪಟ್ಟ ಸಿಬ್ಬಂದಿಯನ್ನಷ್ಟೇ ಬೂತ್‌ಗಳಿಗೆ ನೇಮಿಸಿದೆ. ಕಡ್ಡಾಯ ಮಾಸ್ಕ್ ಧಾರಣೆ, ಮತ ಹಾಕುವ ಮುನ್ನ ಮತ್ತು ನಂತರ ಕೈಗಳನ್ನು ಸ್ಯಾನಿಟೈಸ್‌ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಾಮಾಜಿಕ ಅಂತರ  ಕಾಯ್ದುಕೊಂಡು ಮತಹಾಕಲು ಸೂಚಿಸಲಾಗಿದೆ.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.