ನಾವೇಕೆ ನಂದಾದೀಪವನ್ನು ಬೆಳಗಬೇಕು?


Team Udayavani, Apr 4, 2020, 6:00 AM IST

ನಾವೇಕೆ ನಂದಾದೀಪವನ್ನು ಬೆಳಗಬೇಕು?

ಹಳೆ ಬಾಳು ಸತ್ತಿತ್ತು ಕೊನೆ ಬಾಳು ಸುಟ್ಟಿತ್ತು ಹೊಸಬಾಳು ಹುಟ್ಟಿತ್ತು ದೀಪ ಹಚ್ಚಾ|
ಸಾವಿನ ಒಳಸಂಚು ಮಾಯದ ಕಣ್ಣು ಮಿಂಚು ನಿನ್ನೆದುರು ನಂದಿತು ದೀಪ ಹಚ್ಚಾ||
– ಕವಿ ಎಸ್‌.ವಿ. ಪರಮೇಶ್ವರ ಭಟ್ಟರು ಹೀಗೆ ಹಾಡಿದ್ದರು.

ಪ್ರಕೃತಿ ಆರಾಧಕ ಮಾನವನಿಗೆ ಸೂರ್ಯನೇ ಕಣ್ಣಿಗೆ ಕಾಣುವ ದೇವರು. ಸೂರ್ಯನ ಕಿರಣ ಗಳಿಗೆ ಔಷಧೀಯ ಗುಣವಿರುವುದು ನಮಗೆಲ್ಲ ಗೊತ್ತಿ ರುವ ಸಂಗತಿಯೇ. ಕಲ್ಲಿನ ಆಯುಧಗಳನ್ನು ಚೂಪು ಮಾಡಿಕೊಳ್ಳುವಾಗ ಅಕಸ್ಮಾತ್‌ ಆದ ಬೆಂಕಿಯ ಅವಿಷ್ಕಾರದಿಂದಾಗಿ ಮಾನವನ ಅಲೆಮಾರಿ ಬದುಕು ಬದಲಾಯಿತು, ನಾಗರಿಕತೆಯ ಕಿಡಿ ಬೆಳಗಿತು. ಕಾಡಿನಲ್ಲಿ, ರಾತ್ರಿಯ ಕಗ್ಗತ್ತಲೆಯಲ್ಲಿ ಕಾಡು ಪ್ರಾಣಿಗಳನ್ನು ಹತ್ತಿಕ್ಕಲು ದೀಪದ ಜ್ವಾಲೆ ಅವನಿಗೆ ಖಂಡಿತ ಸಹಾಯ ಮಾಡಿದ್ದಿರಬಹುದು.
ಕಾಲಕ್ರಮೇಣ ಅಗ್ನಿಯ ಸಂರಕ್ಷಣೆಗಾಗಿ ಹೆಣ್ಣು ಮನೆ ಯಲ್ಲಿ ನಿಂತು ಗೃಹಿಣಿಯಾದಳು. ಗಂಡು ಬೇಟೆಯಾಡಲು ಕಾಡಿಗೆ ಹೋಗುವುದು ರೂಢಿಯಾಯಿತು. ಅದರ ಪ್ರತೀಕವಾಗಿ ನಾಗರಿಕತೆಯ ತೊಟ್ಟಿಲಾದ ಹಿಂದೂ ಧರ್ಮದಲ್ಲಿ ಸಂಜೆ ದೀಪ ಹಚ್ಚುವ ಪದ್ಧತಿ ರೂಢಿಯಾಗಿದ್ದಿರಬಹುದು.
ದೀಪದ ಜ್ವಾಲೆ ಊಧ್ವಮುಖೀ. ಜ್ಞಾನ ಎತ್ತರಕ್ಕೆ ಪ್ರಜ್ವಲಿಸಲಿ ಎಂಬುದರ ದ್ಯೋತಕ.
ಎಲ್ಲ ಧರ್ಮಗಳಲ್ಲೂ ಇದೆ

ಮನಸ್ಸು, ಶರೀರ, ಬುದ್ಧಿ ಮತ್ತು ನಮ್ಮನ್ನಾಳುವ ಚೈತನ್ಯ ಶಕ್ತಿ- ಈ ನಾಲ್ಕೂ ಸೇರಿ ಆರೋಗ್ಯವಾಗುತ್ತದೆ. ಎಲ್ಲ ಧರ್ಮಗಳೂ ಇವು ಗಳನ್ನು ಉದ್ದೀಪನಗೊಳಿಸುವ ಕ್ರಿಯೆಗಳಿಗೆ ಮಹತ್ವ ನೀಡಿವೆ. ಮೇಣ ತಾನು ಕರಗಿ ಬೆಳಕು ಚೆಲ್ಲುವುದು ತ್ಯಾಗದ, ಪರಿಶ್ರಮದ ನಂಬಿಕೆಯಾಗಿದೆ. ಮೇಣ ದಂತಿರುವ ನಮ್ಮ ಶರೀರ, ಪ್ರಾಪಂಚಿಕವಾಗಿ ತ್ಯಾಗ- ಪರಿಶ್ರಮದಲ್ಲಿ ಬದುಕಲಿ ಎಂಬುದು ಸಂಕೇತ.

ಅಧ್ಯಯನಕ್ಕೆ ಸಿಲುಕದ, ಅಗೋಚರ ಅಧ್ಯಾತ್ಮಿಕ ತೃಪ್ತಿಯನ್ನು ಮನುಷ್ಯನ ಮನಸ್ಸು ದೀಪದ ಬೆಳಕಿನಲ್ಲಿ ಕಂಡುಕೊಳ್ಳುತ್ತದೆ. ಕಾಣದ ದೇವರನ್ನು ದೀಪದ ಬೆಳಕಿನಲ್ಲಿ ಕಾಣುವ ಪ್ರಯತ್ನದಲ್ಲಿ ಮನುಷ್ಯ ಮನಃಶಾಂತಿಯನ್ನು ಕಂಡುಕೊಂಡಿರುವುದೇ ದೀಪ ಬೆಳಗುವುದಕ್ಕಿರುವ ಮಹತ್ವವನ್ನು ಸಾರುತ್ತದೆ.

ಇಂದು ಪ್ರಕೃತಿಯೇ ನಮ್ಮ ಮುಂದೆ ಇರಿಸಿರುವ ಮಹಾ ಸವಾಲನ್ನು ನಾವು ಗೆಲ್ಲಬೇಕಾದರೆ ನಿಸರ್ಗದ ಮಹಾಶಕ್ತಿಗೆ ವಿನಮ್ರವಾಗಿ ತಲೆಬಾಗುವ ಅರಿವು ನಮ್ಮಲ್ಲಿ ಉಂಟಾಗಬೇಕು. ಆ ಅರಿವೇ ಈ ಬೆಳಕು. ನಾನು ಒಂಟಿಯಲ್ಲ. ನನ್ನೊಂದಿಗೆ ಬೆಳಕಿದೆ ಎನ್ನುವ ಪ್ರಜ್ಞೆಯೂ ಇದು ಹೌದು.

- ಡಾ| ಶುಭಾ ಮಧುಸೂಧನ್‌
ಮನೋಚಿಕಿತ್ಸಾ ವಿಜ್ಞಾನಿ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.