ತನ್ನಿಷ್ಟದಂತೆ ಬ್ಲೌಸ್ ಯಾಕೆ ಹೊಲಿದಿಲ್ಲ ಎಂದು ಪತಿ ಬೈದಿದ್ದಕ್ಕೆ ನೇಣಿಗೆ ಶರಣಾದ ಪತ್ನಿ!
ಪತ್ನಿ ವಿಜಯಲಕ್ಷ್ಮಿ ಬಳಿ ತಾನು ಹೇಳಿದಂತೆ ಹೊಲಿದುಕೊಡುವಂತೆ ತಿಳಿಸಿರುವುದಾಗಿ ವರದಿ ವಿವರಿಸಿದೆ.
Team Udayavani, Dec 7, 2021, 2:55 PM IST
ಹೈದರಾಬಾದ್: ತಾನು ಹೇಳಿದಂತೆ ಬ್ಲೌಸ್ (ರವಿಕೆ) ಹೊಲಿದು ಕೊಟ್ಟಿಲ್ಲ ಯಾಕೆ ಪತಿ ಬೈದಿದ್ದಕ್ಕೆ ಕೋಪಗೊಂಡು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನ ಅಂಬರ್ ಪೇಟ್ ನಲ್ಲಿ ನಡೆದಿದೆ.
ಇದನ್ನೂ ಓದಿ:ಪರಿಷತ್ ನಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲವಿಲ್ಲ: ಹೆಚ್ ಡಿಕೆ ಮಾತಿಗೆ ನೋ ಕಮೆಂಟ್ ಎಂದ ಸಿಎಂ
ಎನ್ ಡಿಟಿವಿ ವರದಿ ಪ್ರಕಾರ, ಹೈದರಾಬಾದ್ ನ ಅಂಬರ್ ಪೇಟ್ ನ ಗೋಲ್ನಾಕಾ ತಿರುಮಲ ನಗರ್ ಪ್ರದೇಶದಲ್ಲಿ ವಿಜಯಲಕ್ಷ್ಮಿ ಹಾಗೂ ಪತಿ, ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಪತಿ ಟೈಲರ್ ವೃತ್ತಿ ಮಾಡುತ್ತಿದ್ದು, ತನ್ನಷ್ಟದಂತೆ ಬ್ಲೌಸ್ ಹೊಲಿದಿಲ್ಲ ಎಂಬ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.
ಶ್ರೀನಿವಾಸ್ ಸೀರೆ ಮತ್ತು ಬ್ಲೌಸ್ ಮೆಟಿರೀಯಲ್ಸ್ ಅನ್ನು ಮನೆ, ಮನೆಗೆ ಮಾರಾಟ ಮಾಡುತ್ತಿದ್ದು, ಮನೆಯಲ್ಲಿ ಬ್ಲೌಸ್ ಹೊಲಿದುಕೊಡುತ್ತಿದ್ದರು. ಮನೆಯಲ್ಲಿ ಪತ್ನಿಯೂ ಬ್ಲೌಸ್ ಹೊಲಿಯುವ ಕೆಲಸ ಮಾಡುತ್ತಿದ್ದಳು. ಏತನ್ಮಧ್ಯೆ ಪತ್ನಿ ಹೊಲಿದ ಬ್ಲೌಸ್ ಸರಿಯಾಗಿಲ್ಲ ಎಂದು ಪತಿ ಶ್ರೀನಿವಾಸ್ ಹೇಳಿದ್ದು, ಮತ್ತೊಮ್ಮೆ ಹೊಲಿಗೆ ಬಿಡಿಸಿ ಬ್ಲೌಸ್ ಹೊಲಿಯುವಂತೆ ಹೇಳಿದ್ದರು. ಬಳಿಕ ಶ್ರೀನಿವಾಸ್ ಬ್ಲೌಸ್ ನ ಹೊಲಿಗೆ ತೆಗೆದುಕೊಟ್ಟು, ಪತ್ನಿ ವಿಜಯಲಕ್ಷ್ಮಿ ಬಳಿ ತಾನು ಹೇಳಿದಂತೆ ಹೊಲಿದುಕೊಡುವಂತೆ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಇದರಿಂದ ಅಸಮಾಧಾನಗೊಂಡ ವಿಜಯಲಕ್ಷ್ಮೀ ಮನೆಯ ಕೋಣೆಯೊಳಗೆ ಹೋಗಿ ಲಾಕ್ ಮಾಡಿಕೊಂಡಿದ್ದಳು. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಬೆಡ್ ರೂಂ ಬಂದ್ ಆಗಿರುವುದನ್ನು ಕಂಡು, ಬಾಗಿಲು ಬಡಿದ್ದರು, ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲವಾಗಿತ್ತು. ನೆರಮನೆಯವರು ಕೂಡಲೇ ಪತಿಗೆ ವಿಷಯ ತಿಳಿಸಿದಾಗ, ಮನೆಗೆ ಬಂದು ಕೋಣೆ ಬಾಗಿಲನ್ನು ಒಡೆದು ನೋಡಿದಾಗ ಪತ್ನಿ ನೇಣಿಗೆ ಶರಣಾಗಿದ್ದು ಕಂಡುಬಂದಿತ್ತು ಎಂದು ವರದಿ ಹೇಳಿದೆ.
ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಅಂಬರ್ ಪೇಟ್ ಇನ್ಸ್ ಪೆಕ್ಟರ್ ಪಿ.ಸುಧಾಕರ್ ತಿಳಿಸಿದ್ದು, ಆತ್ಮಹತ್ಯೆಗೆ ಶರಣಾಗಿರುವ ವಿಜಯಲಕ್ಷ್ಮಿ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ