ನೆರೆ ಪರಿಹಾರ ಸಿಗಲಿಲ್ಲ: ಅವಶೇಷಗಳ ಅಡಿಯಲ್ಲೇ ಸಾಗುತ್ತಿದೆ ಬದುಕು
Team Udayavani, Dec 3, 2021, 2:11 PM IST
ಕಟಪಾಡಿ: ಉಡುಪಿ ಜಿಲ್ಲೆಯ ಮಣಿಪುರ ಗ್ರಾಮದ ಸುಮತಿ ಮರಕಾಲ್ತಿ ಅವರ ವಾಸದ ಮನೆಯು 2020 ಸೆಪ್ಟಂಬರ್ ಭೀಕರ ಜಲಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದು, ಇದೀಗ ಸರಕಾರದ ವಿಶೇಷ ಪ್ಯಾಕೇಜ್ ಪರಿಹಾರ ಕೈಗೆಟುಕದೆ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋದ ಮನೆಯ ಅವಶೇಷಗಳೊಳಗೆ ಸಾಗುತ್ತಿದೆ ಈಕೆಯ ಬದುಕಿನ ಬಂಡಿ.
ಆಳೆತ್ತರದಲ್ಲಿ ನುಗ್ಗಿ ಬಂದಂತಹ ಪ್ರವಾಹಕ್ಕೆ ಮಣಿಪುರದ ಸುಮತಿ ಮರಕಾಲ್ತಿ ಅವರ ಬಟ್ಟೆಬರೆ, ಅಕ್ಕಿ, ತಲೆದಿಂಬಿನೊಳಗೆ ಇರಿಸಲಾಗಿದ್ದ ಚೂರುಪಾರು ಚಿನ್ನವೂ ಮನೆಯ ಜೊತೆಗೆ ಕೊಚ್ಚಿಕೊಂಡು ಹೋಗಿತ್ತು. ಆಸರೆ ಕಳೆದುಕೊಂಡ ಅನಾರೋಗ್ಯ ಪೀಡಿದ ಕುಟುಂಬದ ಸಂತ್ರಸ್ತೆಗೆ ಟರ್ಪಲು ಹೊದಿಕೆಯೊಳಕ್ಕೆ ನುಗ್ಗುವ ಸೂರ್ಯ ರಶ್ಮಿಗಳೇ ಬೆಳಕು, ಚಂದ್ರನ ನೆರಳೇ ಆಸರೆಯಾಗಿ ದಿನಕಳೆಯುವಂತಹ ಅನಿವಾರ್ಯ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದು, ಅಯೋಮಯ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಸಿಕ್ಕಲ್ಲಿ ಕೂಲಿ ನಾಲಿ ಮಾಡಿ ಬದುಕು ಸವೆಸುತ್ತಿರುವ ಅನಾರೋಗ್ಯ ಪೀಡಿತ ಕುಟುಂಬಕ್ಕೆ ಆಸರೆ ಇಲ್ಲವಾಗಿದೆ.
ಪ್ರಕೃತಿ ವಿಕೋಪದಡಿ ಸರಕಾರದಿಂದ ಘೋಷಿತ ವಿಶೇಷ ಪ್ಯಾಕೇಜ್ ನ ಅನುದಾನದ ಯಾವುದೇ ಕಂತು ಕೈ ಸೇರದೆ ಅಳಿದುಳಿದ ಮನೆಯ ಅವಶೇಷಗಳಡಿ ಟರ್ಪಲು ಹೊದಿಸಿ ತನ್ನ ಬದುಕನ್ನು ಸವೆಸುವಂತಾಗಿರುವುದು ದುರದೃಷ್ಟಕರ.
ಇದೀಗ ಉಭಯ ಸಂಕಟವನ್ನು ಅನುಭವಿಸುತ್ತಿರುವ ಸಂತ್ರಸ್ತರು ವಾಸಕ್ಕೆ ಯೋಗ್ಯ ಮನೆಯಲ್ಲಿ ಬದುಕು ಕಟ್ಟುವ ತವಕ ಮುರುಕಲು ಮನೆ ಸೆಳೆದುಕೊಳ್ಳದಂತೆ ಸರಕಾರವು ಘೋಷಿತ ವಿಶೇಷ ಪ್ಯಾಕೇಜ್ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಿ ಸಂತ್ರಸ್ತರ ಬವಣೆಗೆ ಸ್ಪಂದಿಸುವಂತೆ ಜನ ಆಗ್ರಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ
Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Hebri; ಸ್ಕೂಟಿಗೆ ಕಾರು ಢಿಕ್ಕಿ,ಸವಾರ ಸ್ಥಳದಲ್ಲೇ ಸಾವು
Temple History: ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನ; ಹಿನ್ನೆಲೆ, ಇತಿಹಾಸ,ವಿಶೇಷಗಳು
MUST WATCH
ಹೊಸ ಸೇರ್ಪಡೆ
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ