ಐಪಿಎಲ್‌ ನಡುವೆ ಶಾರ್ಜಾ ಅಂಗಳದಲ್ಲಿ ನಡೆಯಲಿದೆ ವನಿತಾ ಟಿ20 ಚಾಲೆಂಜ್‌ ಸರಣಿ


Team Udayavani, Nov 4, 2020, 6:30 AM IST

ಐಪಿಎಲ್‌ ನಡುವೆ ಶಾರ್ಜಾ ಅಂಗಳದಲ್ಲಿ ನಡೆಯಲಿದೆ ವನಿತಾ ಟಿ20 ಚಾಲೆಂಜ್‌ ಸರಣಿ

ಶಾರ್ಜಾ : ಕಳೆದ ಒಂದೂವರೆ ತಿಂಗಳಿನಿಂದ ಐಪಿಎಲ್‌ ಗುಂಗಿನಲ್ಲೇ ಇದ್ದ ದೇಶದ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಬುಧವಾರದಿಂದ ಮತ್ತೂಂದು ಆಕರ್ಷಣೆ. ಅರಬ್‌ ನಾಡಿನ ಸಣ್ಣ ಮೈದಾನವಾದ ಶಾರ್ಜಾ ಅಂಗಳದಲ್ಲಿ ಮಹಿಳಾ ಟಿ20 ಚಾಲೆಂಜ್‌ ಲೀಗ್‌ ಕೂಟದ ಸಂಭ್ರಮ.

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಸೂಪರ್‌ನೊವಾಸ್‌ ಮತ್ತು ರನ್ನರ್ ಅಪ್‌ ವೆಲಾಸಿಟಿ ತಂಡಗಳು ಎದುರಾಗಲಿವೆ. ಒಟ್ಟು 4 ಪಂದ್ಯಗಳು ನಡೆಯಲಿವೆ.

ಕೊರೊನಾ ಭೀತಿಯ ನಡುವೆ, ಹತ್ತಾರು ನಿಬಂಧನೆ ಗಳು ಮತ್ತು ವೀಕ್ಷಕರ ಅನುಪಸ್ಥಿತಿ ಯಲ್ಲಿ ಈ ಪಂದ್ಯಾವಳಿ ನಡೆದರೂ, ಪ್ರಸಕ್ತ ಮುಕ್ತಾಯ ಹಂತಕ್ಕೆ ತಲುಪಿದ ಐಪಿಎಲ್‌ 13ನೇ ಆವತ್ತಿ ಸೃಷ್ಟಿಸಿರುವ ರೋಮಾಂಚನಕ್ಕೇನೂ ಕೊರತೆಯಾಗದು. ಆದ್ದರಿಂದ ಈ ಕೂಟ ಹೆಚ್ಚು ರೋಮಾಂಚನಕಾರಿಯಾಗಿರಲಿದೆ ಹಾಗೂ ವನಿತಾ ಕ್ರಿಕೆಟಿಗೆ “ಬೂಸ್ಟ್‌’ ಆಗಲಿದೆ ಎನ್ನುವುದು ಸಂಘಟಕರ ವಿಶ್ವಾಸ.

ಕೋವಿಡ್‌-19 ಲಾಕ್‌ಡೌನ್‌ನಿಂದಾಗಿ ಇಷ್ಟು ದಿನಗಳ ಕಾಲ ಭಾರತದ ಆಟಗಾರ್ತಿಯರಯ ಮನೆಯಲ್ಲಿಯೇ ಕಾಲ ಕಳೆದಿದ್ದರು. ಈಗ ಒಮ್ಮೆಲೇ ಟಿ20 ಕ್ರಿಕೆಟಿಗೆ ಕುದುರಿಕೊಳ್ಳಬೇಕಿದೆ. ಆಸ್ಟೇಲಿಯ, ನ್ಯೂಜಿಲ್ಯಾಂಡ್‌ ಮತ್ತು ಇಂಗ್ಲೆಂಡ್‌ ತಂಡದ ಸದಸ್ಯರು ಈಗಾಗಲೇ ಕೆಲವು ಟೂರ್ನಿಗಳಲ್ಲಿ ಪಾಲ್ಗೊಂಡಿರುವುದರಿಂದ ಫಿಟ್‌ನೆಸ್‌ ಸಮಸ್ಯೆ ಕಾಡದು. ಆದರೆ ಭಾರತೀಯರು ನೆಟ್‌ ಅಭ್ಯಾಸವನ್ನು ತುಸು ಹೆಚ್ಚಾಗಿ ನಡೆಸುವ ಅಗತ್ಯವಿದೆ.

ಶಫಾಲಿ ಮೇಲೆ ನಂಬಿಕೆ
ಆಸ್ಟೇಲಿಯದಲ್ಲಿ ನಡೆದ ಕಳೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಕೂಟದಲ್ಲಿ ಸ್ಫೋಟಕ ಬ್ಯಾಟಿಂಗ್‌ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ 16ರ ಬಾಲೆ, “ಲೇಡಿ ಸೆಹವಾಗ್‌’ ಖ್ಯಾತಿಯ ಶಫಾಲಿ ವರ್ಮ ಮೇಲೆ ವೆಲಾಸಿಟಿ ತಂಡ ಹೆಚ್ಚಿನ ಭರವಸೆ ಇರಿಸಿದೆ. ಈ ಕೂಟದಲ್ಲಿಯೂ ಇವರ ಬಿರುಸಿನ ಬ್ಯಾಟಿಂಗ್‌ ನಿರೀಕ್ಷಿಸಲಾಗಿದ್ದು, ವೆಲಾಸಿಟಿ ತಂಡ ಮೊದಲ ಬಾರಿ ಚಾಂಪಿಯನ್‌ ಆಗುವ ಕನಸು ಕಾಣುತ್ತಿದೆ. ಈ ತಂಡದಲ್ಲಿ ಅಂತರಾಷ್ಟ್ರೀಯ ಆಟಗಾರಿಗೇನೂ ಕೊರತೆ ಇಲ್ಲ. ನಾಯಕಿ ಮಿಥಾಲಿ ರಾಜ್‌, ಶಿಖಾ ಪಾಂಡೆ, ಡೇನಿಯಲ್‌ ವ್ಯಾಟ್‌, ವೇದಾ ಕೃಷ್ಣಮೂರ್ತಿ ಇವರೆಲ್ಲ ತಂಡಕ್ಕೆ ನೆರವಾಗಬಲ್ಲ ವಿಶ್ವಾಸವಿದೆ.

ಸಂಭಾವ್ಯ ತಂಡಗಳು
ಸೂಪರ್‌ನೊವಾಸ್‌: ಹರ್ಮನ್‌ ಪ್ರೀತ್‌ ಕೌರ್‌ (ನಾಯಕಿ), ಜೆಮಿಮಾ ರೋಡ್ರಿಗಸ್‌, ಚಾಮರಿ ಅಟಪಟ್ಟು, ಪ್ರಿಯಾ ಪೂನಿಯಾ/ಅನುಜಾ ಪಾಟೀಲ್‌, ರಾಧಾ ಯಾದವ್‌, ತನಿಯಾ ಭಾಟಿಯಾ, ಶಶಿಕಲಾ ಸಿರಿವರ್ಧನೆ/ ಶಕೀರಾ ಸೆಲ್ಮನ್‌, ಪೂನಂ ಯಾದವ್‌, ಅಂಕಿತಾ ರೆಡ್ಡಿ/ ಪೂಜಾ ವಸ್ತ್ರಾಕರ್‌, ಆಯುಷಿ ಸೋನಿ, ಮುಸ್ಕಾನ್‌ ಮಲಿಕ್‌.

ವೆಲಾಸಿಟಿ: ಮಿಥಾಲಿ ರಾಜ್‌ (ನಾಯಕಿ), ವೇದಾ ಕೃಷ್ಣಮೂರ್ತಿ, ಶಫಾಲಿ ವರ್ಮ, ಸುಶ್ಮಾ ವರ್ಮ, ಏಕ್ತಾ ಬಿಶ್‌r, ಶಿಖಾ ಪಾಂಡೆ, ದೇವಿಕಾ ವೈದ್ಯ/ ದಿಭ್ಯದರ್ಶಿನಿ/ಮಾನಸಿ ಜೋಶಿ, ಡೇನಿಯಲ್‌ ವ್ಯಾಟ್‌, ಸುನೆ ಲೂಸ್‌, ಜಹನಾರಾ ಆಲಂ/ ಎಂ. ಅನಘಾ.

ಹ್ಯಾಟ್ರಿಕ್‌ ಕಾತರದಲ್ಲಿ ಕೌರ್‌ ಪಡೆ
ಸತತ ಎರಡು ಬಾರಿಯ ಚಾಂಪಿಯನ್‌ ಸೂಪರ್‌ನೊàವಾಸ್‌ ಹ್ಯಾಟ್ರಿಕ್‌ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮುನ್ನಡೆಸುತ್ತಿರುವ ಈ ತಂಡ ಸ್ಟಾರ್‌ ಆಟಗಾರರಿಂದ ಒಳಗೊಂಡಿದೆ. ಲಂಕಾದ ಚಾಮರಿ ಅಟಪಟ್ಟು, ಜೆಮಿಮಾ ರೋಡ್ರಿಗಸ್‌, ಹರ್ಮನ್‌ಪ್ರೀತ್‌ ಕೌರ್‌, ತನಿಯಾ ಭಾಟಿಯಾ ಬ್ಯಾಟಿಂಗ್‌ ಆಧಾರಸ್ತಂಭವಾಗಿದ್ದಾರೆ. ಅರುಂಧತಿ ರೆಡ್ಡಿ, ಪೂನಂ ಯಾದವ್‌ ಬೌಲಿಂಗ್‌ ವಿಭಾಗದ ಪ್ರಮುಖರು.

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.