ನಮ್ ಭಾಷಿ, ನಮ್ಗ್ ಖುಷಿ ಅಲ್ದೇ…ವಿಶ್ವಕನ್ನಡ ಕುಂದಾಪ್ರ ದಿನಾಚರಣೆಗೆ UV ಫೋಟೊ ಸ್ಪರ್ಧಿ
ಯಲ್ಲಾರೂ ನಿಮ್ಗೆ ಎಂತದಾರೂ ಡೌಟ್ ಬಂದ್ರೆ…ಈ ನಂಬರಿಗೆ ಫೋನ್ ಮಾಡಿ ಕೇಣಿ…
Team Udayavani, Jul 27, 2021, 10:55 AM IST
ಕುಂದಾಪುರ: ಹೊಯ್…ಎಷ್ಟೇ ಆಯ್ಲಿ ನಮ್ ಭಾಷಿ ನಮ್ಗ್ ಖುಷಿ ಅಲ್ದೆ…ಅದಕ್ಕೆ ಈ ಸಲ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಸಾಡಿ ಅಮಾಸಿ ದಿನು (ಆಗಸ್ಟ್ 08) ಗಮ್ಮತ್ ಗೆ ಆಚರ್ಸುವಾ. ಅದ್ಕೆ ನಿಮ್ದೂ ಒಂದು ಪಾಲ್ ಇರ್ಲಿ ಅಂದ್ಹೇಳಿ ಉದಯವಾಣಿ ಡಾಟ್ ಕಾಮ್ ಈ ಸರ್ತಿ ಒಂದ್ ಸ್ಪರ್ಧಿ ಇಟ್ಟಿತ್. ಅದ್ ಎಂಥಾ ಅಂದ್ರೆ, ನಮ್ಮ ಕುಂದಾಪ್ರ ಸೊಗಡ್ ಸಾರುವ ಚೆಂದ್, ಚೆಂದದ್ ಪಟೊ ತೆಗ್ದ, ಅದರೊಟ್ಟಿಗೆ ಕುಂದಾಪ್ರ ಭಾಷಿಯಾಂಗೆ ಸಾಪ್ ಮಾಡಿ ನಾಲ್ಕ ಒಕ್ಕಣ್ಕಿ ಬರೀನಿ. ಹಾಂಗೆ ನಿಮ್ಮ ಪೊಟದ್ ಕೆಳ್ಗೆ ಲಾಯ್ಕ್ ಮಾಡಿ ಒಂದ್ ಅಡಿಬರವೂ ಇರ್ಲಿ.
ಇದನ್ನೂ ಓದಿ:ಅಸ್ಸಾಂ-ಮಿಜೋರಾಂ ಗಡಿ ವಿವಾದ: ಹಿಂಸಾಚಾರದಲ್ಲಿ ಎಂಟು ಪೊಲೀಸರು ಹುತಾತ್ಮ
ನಿಮ್ಮ ನಮೂ, ನಮೂನಿ ಪೊಟೊ ಆಗಸ್ಟ್ 3 ತಾರೀಕಿನೊಳ್ಗೆ ನಮ್ಗೆ ಈ ಲಿಂಕ್ ಒತ್ತಿ ಅಪ್ ಲೋಡ್ ಮಾಡ್ಕ. ಚೆಂದ್ ಇಪ್ಪು ಪೊಟೊ ನಮ್ಮ ಉದಯವಾಣಿ ಡಾಟ್ ಕಾಮ್ ಫೇಸ್ ಬುಕ್ ಗೆ ಹಾಕ್ತೋ…ಯಾರಿಗೆ ಹೆಚ್ಚ್ ಓಟ್ ಸಿಕ್ಕುತ್ತೊ ಅವರಿಗೆ ಬಹುಮಾನು ಇತ್. ಯಾರ್ ಗೆದ್ದಿರ್ ಅಂದ್ಹೇಳಿ ವಿಶ್ವ ಕುಂದಾಪ್ರ ದಿನಾಚರಣೆ ದಿನು ಆಗಸ್ಟ್ 8ನೇ ತಾರೀಕಿಗೆ ಘೋಷಣೆ ಮಾಡಿ, ಮನು ಹಂದಾಡಿಯರ್ ಕೈಯಾಗೆ ಬಹುಮಾನು ಕೊಡಿಸ್ತೋ…ಇನ್ ಸುಮ್ನೆ ಕೂಕಂಡ್ರೆ ಆತಿಲ್ಲೆ…ಕೂಡ್ಲೇ ನಿಮ್ಮ ಚೆಂದ್ ದ ಪೊಟೊ ತೆಗ್ದ ಅಪ್ ಲೋಡ್ ಮಾಡಿ ಕಾಂಬಾ….
ಯಲ್ಲಾರೂ ನಿಮ್ಗೆ ಎಂತದಾರೂ ಡೌಟ್ ಬಂದ್ರೆ…+91 6366767981 ಈ ನಂಬರಿಗೆ ಫೋನ್ ಮಾಡಿ ಕೇಣಿ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?