ದೇವತೆಗಳಿಗೆ ಹಿಂದೂ-ಮುಸ್ಲಿಮರಿಂದ ಜಲಾಭಿಷೇಕ
Team Udayavani, Apr 6, 2022, 2:53 PM IST
ಆಲಮಟ್ಟಿ: ಮಳೆಗಾಲದ ಅವಧಿಯಲ್ಲಿ ಉತ್ತಮ ಮಳೆಯಾಗಿ ಉತ್ತಮ ಬೆಳೆ ಬರಲಿ ಎಂದು ಹಾರೈಸಿ ಪ್ರತಿ ವರ್ಷದಂತೆ ಈ ವರ್ಷವೂ ಪಟ್ಟಣದ ಎಲ್ಲ ದೇವರುಗಳಿಗೆ ಜಲಾಭಿಷೇಕ ಮಾಡಿಸಲಾಯಿತು.
ಹಿಂದೂ-ಮುಸ್ಲಿಮ ಪುರುಷರು, ಮಹಿಳೆಯರು, ಮಕ್ಕಳು ಸೇರಿದಂತೆ ವಯೋಮಾನ ಭೇದವಿಲ್ಲದೇ ಲಿಂಗಭೇದವಿಲ್ಲದೇ ಎಲ್ಲ ಭಕ್ತರು ಸೇರಿಕೊಂಡು ತಾವು ಸ್ನಾನ ಮಾಡಿ ತಾವು ಉಟ್ಟಿರುವ ತೊಯ್ದ ಬಟ್ಟೆಗಳನ್ನುಟ್ಟುಕೊಂಡು ಇಲ್ಲಿನ ಧಾರ್ಮಿಕ ಕೇಂದ್ರಗಳಾಗಿರುವ ದೇವಸ್ಥಾನ ಮತ್ತು ದರ್ಗಾಗಳಿಗೆ ತೆರಳಿ ಜಲಾಭಿಷೇಕ ಮಾಡಿದ್ದು ವಿಶೇಷವಾಗಿತ್ತು.
ಇಲ್ಲಿ ಜಾತಿ-ಮತ ಭೇದವಿಲ್ಲದೇ ಎಲ್ಲ ಧರ್ಮೀಯರೂ ಸೇರಿಕೊಂಡು ಎಲ್ಲ ಜಾತ್ರೆ ಹಾಗೂ ದರ್ಗಾಗಳ ಉರೂಸ್ ಗಳಲ್ಲಿ ಭಾಗವಹಿಸಿ ತನುಮನ ಧನದಿಂದ ಸೇವೆ ಸಲ್ಲಿಸುತ್ತಾರೆ. ದೇವಸ್ಥಾನದಲ್ಲಿ ಪ್ರತಿ ಬಾರಿಯೂ ಕೆಲ ಗ್ರಾಮಗಳಲ್ಲಿ ಮಂಗಳವಾರ ಮತ್ತು ಶುಕ್ರವಾರಗಳನ್ನು 5 ವಾರ ಇನ್ನು ಕೆಲ ಗ್ರಾಮಗಳಲ್ಲಿ 11 ವಾರಗಳನ್ನು ಪಾಲಿಸುತ್ತಿದ್ದರೆ ಕೆಲ ಗ್ರಾಮಗಳಲ್ಲಿ ಮಂಗಳವಾರ ಅಥವಾ ಶುಕ್ರವಾರ ಒಂದೇ ಆಚರಿಸತ್ತಾರೆ.
ಈ ದಿನಗಳಂದು ಮನೆಗಳಲ್ಲಿ ಯಾವುದೇ ಪದಾರ್ಥಗಳನ್ನು ಕರಿಯುವುದಿಲ್ಲ. ರೊಟ್ಟಿ, ಚಪಾತಿಗಳನ್ನೂ ಮಾಡುವುದಿಲ್ಲ. ಯಾರೂ ಕೂಲಿ ಕೆಲಸಕ್ಕೆ ಹೋಗುವುದಿಲ್ಲ. ಎಲ್ಲ ನಾಗರಿಕರು ದೇವರ ಹೆಸರಿನಲ್ಲಿ ಧ್ಯಾನ ಮಾಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ